ಮಂಗಳವಾರ, ಅಕ್ಟೋಬರ್ 21
ಆದ್ರೆ ಕೊನೇ ತನಕ ತಾಳ್ಕೊಳ್ಳುವವನಿಗೆ ರಕ್ಷಣೆ ಸಿಗುತ್ತೆ.—ಮತ್ತಾ. 24:13.
ತಾಳ್ಮೆಯಿಂದ ಇದ್ರೆ ಏನೆಲ್ಲಾ ಒಳ್ಳೇದಾಗುತ್ತೆ ಅಂತ ಯೋಚ್ನೆ ಮಾಡಿ. ನಾವು ಯಾವಾಗ್ಲೂ ಖುಷಿ ಖುಷಿಯಾಗಿ ಇರ್ತೀವಿ, ಮನಸ್ಸು ನಿರಾಳವಾಗಿ ಇರುತ್ತೆ, ಆರೋಗ್ಯನೂ ಚೆನ್ನಾಗಿರುತ್ತೆ. ಅಷ್ಟೇ ಅಲ್ಲ ಎಲ್ರ ಜೊತೆನೂ ಚೆನ್ನಾಗಿ ಇರ್ತೀವಿ, ಸಭೆಯಲ್ಲಿ ಒಗ್ಗಟ್ಟಾಗಿ ಇರ್ತೀವಿ. ಯಾರಾದ್ರೂ ಕೆಣಕಿದಾಗ ನಾವು ತಕ್ಷಣ ಕೋಪ ಮಾಡ್ಕೊಳ್ಳಲ್ಲ. ಆಗ ಸಮಸ್ಯೆ ಅಲ್ಲಿಂದ ಅಲ್ಲಿಗೇ ಬಗೆಹರಿಯುತ್ತೆ. (ಕೀರ್ತ. 37:8; ಜ್ಞಾನೋ. 14:29) ಅಷ್ಟೇ ಅಲ್ಲ ತಾಳ್ಮೆ ತೋರಿಸೋದ್ರಲ್ಲಿ ಯೆಹೋವ ದೇವರ ತರ ಇರ್ತೀವಿ. ಆತನಿಗೆ ಇನ್ನೂ ಹತ್ರ ಆಗ್ತೀವಿ. ತಾಳ್ಮೆ ಅನ್ನೋದು ಎಷ್ಟು ಒಳ್ಳೇ ಗುಣ ಅಲ್ವಾ? ಕೆಲವೊಮ್ಮೆ ನಮಗೆ ತಾಳ್ಮೆ ತೋರಿಸೋಕೆ ಕಷ್ಟ ಆಗಬಹುದು. ಆದ್ರೆ ಯೆಹೋವನ ಸಹಾಯ ಇದ್ರೆ ನಾವು ಯಾವಾಗ್ಲೂ ತಾಳ್ಮೆ ತೋರಿಸ್ತೀವಿ. ಹೊಸ ಲೋಕ ಬರೋ ತನಕ ನಾವು ಈ ತಾಳ್ಮೆಯನ್ನ ತೋರಿಸಬೇಕು. ಯಾಕಂದ್ರೆ ‘ಯೆಹೋವನ ಕಣ್ಣು ಆತನಿಗೆ ಭಯಪಡೋರ ಮೇಲಿದೆ, ಆತನ ಶಾಶ್ವತ ಪ್ರೀತಿ ಮೇಲೆ ನಿರೀಕ್ಷೆ ಇಟ್ಟು ಕಾಯ್ತಾ ಇರೋರ ಮೇಲಿದೆ’ ಅಂತ ಬೈಬಲ್ ಹೇಳುತ್ತೆ. (ಕೀರ್ತ. 33:18) ಹಾಗಾಗಿ ನಾವು ತಾಳ್ಮೆಯನ್ನ ಬಟ್ಟೆ ತರ ಯಾವಾಗ್ಲೂ ಹಾಕೊಂಡೇ ಇರೋಣ. w23.08 22 ¶7; 25 ¶16-17
ಬುಧವಾರ, ಅಕ್ಟೋಬರ್ 22
ನಿಮಗೆ ನಂಬಿಕೆ ಇದೆ ಅಂತ ಹೇಳಿ ಅದನ್ನ ಒಳ್ಳೇ ಕೆಲಸ ಮಾಡಿ ತೋರಿಸ್ದೆ ಇದ್ರೆ ನಂಬಿಕೆ ಇದ್ರೂ ಪ್ರಯೋಜನ ಇಲ್ಲ.—ಯಾಕೋ. 2:17.
ಒಬ್ಬ ವ್ಯಕ್ತಿಗೆ ನಂಬಿಕೆ ಇಲ್ಲ ಅನ್ನೋದು ಅವನು ಮಾಡ್ತಿರೋ ಕೆಲಸಗಳಿಂದ ಗೊತ್ತಾಗುತ್ತೆ. (ಯಾಕೋ. 2:1-5, 9) ಅವನ ಸಹೋದರ ಅಥವಾ ಸಹೋದರಿ ಹತ್ರ ಬಟ್ಟೆ ಇಲ್ಲ, ತಿನ್ನೋಕೆ ಊಟ ಇಲ್ಲ ಅಂತ ಗೊತ್ತಾದಾಗ ಅವನು ಅವ್ರಿಗೆ ಸಹಾಯ ಮಾಡದೇ ಇದ್ರೆ ಅವನಿಗೆ ನಂಬಿಕೆ ಇದೆ ಅಂತ ಹೇಳಕ್ಕಾಗುತ್ತಾ? ಇಲ್ಲ. ಅವನಿಗೆ ನಂಬಿಕೆ ಇದ್ರೂ ಅದು ವ್ಯರ್ಥ ಆಗುತ್ತೆ. ಯಾಕಂದ್ರೆ ಅವನ ಕೆಲಸಗಳಲ್ಲಿ ಅದನ್ನ ತೋರಿಸ್ತಾ ಇಲ್ಲ. (ಯಾಕೋ. 2:14-16) ನಂಬಿಕೆ ಇದೆ ಅಂತ ತಮ್ಮ ಕೆಲಸದಲ್ಲಿ ತೋರಿಸಿದವ್ರಲ್ಲಿ ರಾಹಾಬ್ ಕೂಡ ಒಬ್ಬಳು ಅಂತ ಯಾಕೋಬ ಹೇಳಿದ. (ಯಾಕೋ. 2:25, 26) ಯೆಹೋವನ ಬಗ್ಗೆ, ಆತನು ಇಸ್ರಾಯೇಲ್ಯರನ್ನ ಹೇಗೆಲ್ಲಾ ಕಾಪಾಡಿದನು ಅನ್ನೋದ್ರ ಬಗ್ಗೆ ರಾಹಾಬ್ ಕೇಳಿಸ್ಕೊಂಡಿದ್ದಳು. (ಯೆಹೋ. 2:9-11) ಆಗ ಅವಳು ಯೆಹೋವನ ಮೇಲೆ ನಂಬಿಕೆ ಇಟ್ಟಿದ್ದಷ್ಟೇ ಅಲ್ಲ, ಇಬ್ರು ಇಸ್ರಾಯೇಲ್ಯ ಗೂಢಾಚಾರರು ಬಂದಾಗ ಅವ್ರನ್ನ ಬಚ್ಚಿಟ್ಟು ಕಾಪಾಡಿದಳು. ಹೀಗೆ ನಂಬಿಕೆ ಇದೆ ಅಂತ ತನ್ನ ಕೆಲಸದಲ್ಲಿ ತೋರಿಸಿದಳು. ಇವಳು ಅಬ್ರಹಾಮನ ತರ ಅಪರಿಪೂರ್ಣಳಾಗಿದ್ದಳು ಮತ್ತು ಮೋಶೆ ನಿಯಮ ಪುಸ್ತಕನ ಪಾಲಿಸ್ತಿರಲಿಲ್ಲ. ಹಾಗಿದ್ರೂ ಯೆಹೋವ ಅವ್ರಿಬ್ರನ್ನ ನೀತಿವಂತರು ಅಂತ ಕರೆದನು. ಹಾಗಾಗಿ ನಂಬಿಕೆ ಇದ್ರೆ ಮಾತ್ರ ಸಾಕಾಗಲ್ಲ, ಅದನ್ನ ನಮ್ಮ ಕೆಲಸದಲ್ಲಿ ತೋರಿಸೋದು ತುಂಬ ಮುಖ್ಯ ಅಂತ ರಾಹಾಬಳಿಂದ ಗೊತ್ತಾಗುತ್ತೆ. w23.12 5-6 ¶12-13
ಗುರುವಾರ, ಅಕ್ಟೋಬರ್ 23
ನೀವು ಬಲವಾಗಿ ಬೇರೂರಿರಬೇಕು ಮತ್ತು ಅಡಿಪಾಯದ ಮೇಲೆ ಸ್ಥಿರವಾಗಿ ನಿಲ್ಲಬೇಕು.—ಎಫೆ. 3:17.
ಕ್ರೈಸ್ತರಾಗಿರೋ ನಾವು ಬೈಬಲಲ್ಲಿರೋ ಕೆಲವು ವಿಷ್ಯಗಳನ್ನ ತಿಳ್ಕೊಂಡ್ರೆ ಮಾತ್ರ ಸಾಕಾಗಲ್ಲ, ಯೆಹೋವನ ಬಗ್ಗೆ ಇರೋ “ಗಾಢವಾದ ವಿಷ್ಯಗಳನ್ನ” ತಿಳ್ಕೊಬೇಕು. ಅದಕ್ಕೆ ಆತನು ಕೊಡೋ ಪವಿತ್ರಶಕ್ತಿ ಸಹಾಯ ಮಾಡುತ್ತೆ. (1 ಕೊರಿಂ. 2:9, 10) ಅದನ್ನ ತಿಳ್ಕೊಳ್ಳೋಕೆ ಮತ್ತು ದೇವರಿಗೆ ಹತ್ರ ಆಗೋಕೆ ಬೈಬಲ್ ಪ್ರಾಜೆಕ್ಟ್ ಮಾಡಿ. ಉದಾಹರಣೆಗೆ, ಯೆಹೋವ ದೇವರು ಹಿಂದಿನ ಕಾಲದಲ್ಲಿ ತನ್ನ ಸೇವಕರಿಗೆ ಹೇಗೆಲ್ಲ ಪ್ರೀತಿ ತೋರಿಸಿದನು ಅಂತ ಹುಡುಕಿ. ಆಗ ಯೆಹೋವ ನಮ್ಮನ್ನ ಹೇಗೆ ಪ್ರೀತಿಸ್ತಾನೆ ಅಂತ ಗೊತ್ತಾಗುತ್ತೆ ಅಥವಾ ಯೆಹೋವ ದೇವರು ಇಸ್ರಾಯೇಲ್ಯರಿಗೆ ಹೇಗೆ ಆರಾಧನೆ ಮಾಡೋಕೆ ಹೇಳಿದ್ದನು ಅಂತ ಹುಡುಕಿ. ಆಗ ನಾವೂ ಅದೇ ತರ ಮಾಡ್ತಿದ್ದೀವಾ ಅಂತ ಗೊತ್ತಾಗುತ್ತೆ. ಇಲ್ಲಾಂದ್ರೆ ಯೇಸು ಭೂಮಿಗೆ ಬಂದ್ಮೇಲೆ ಆತನ ಬಗ್ಗೆ ಇರೋ ಭವಿಷ್ಯವಾಣಿಗಳು ಹೇಗೆಲ್ಲ ನಿಜ ಆಯ್ತು ಅಂತ ಅಧ್ಯಯನ ಮಾಡಿ. ಇಂಥ ವಿಷ್ಯಗಳ ಬಗ್ಗೆ ಜಾಸ್ತಿ ತಿಳ್ಕೊಳ್ಳೋಕೆ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ ಅನ್ನೋದ್ರಲ್ಲಿ ಹುಡುಕಿ ನೋಡಿ. ಈ ತರ ಬೈಬಲನ್ನ ಚೆನ್ನಾಗಿ ಅಧ್ಯಯನ ಮಾಡಿದ್ರೆ ಬೋರ್ ಆಗಲ್ಲ. ನಮ್ಮ ನಂಬಿಕೆನೂ ಗಟ್ಟಿಯಾಗುತ್ತೆ ಮತ್ತು ‘ದೇವರ ಬಗ್ಗೆ ಹೆಚ್ಚು ಕಲಿಯೋಕೂ’ ಆಗುತ್ತೆ.—ಜ್ಞಾನೋ. 2:4, 5 w23.10 18-19 ¶3-5