-
ಫಕ್ಕನೆ ನಾಶನ! ಅವರು ಅದನ್ನು ಹೇಗೆ ನಿಭಾಯಿಸಿದರು?ಎಚ್ಚರ!—1991 | ಏಪ್ರಿಲ್ 8
-
-
ಅಂತಹ ಸಂಕಟಕರ ಪರಿಸ್ಥಿತಿಗಳಲ್ಲಿರುವವರ ಮೂಲ ಆವಶ್ಯಕತೆಯೊಂದನ್ನು 1,900 ವರ್ಷಗಳಷ್ಟು ಹಿಂದೆ ಅಪೊಸ್ತಲ ಪೇತ್ರನು ಸೂಚಿಸಿದನು. “ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ,” ಅಂದನು ಅವನು. “ಮೊಟ್ಟಮೊದಲು ನಿಮ್ಮ ನಿಮ್ಮೊಳಗೆ ಯಥಾರ್ಥವಾದ ಪ್ರೀತಿಯಿರಲಿ.” (1 ಪೇತ್ರ 4:7, 8) ಈ ಮಾತುಗಳನ್ನು ಪೇತ್ರನು ಬರೆಯುವಾಗ ಸಮಗ್ರ ಯೆಹೂದಿ ವಿಷಯಗಳ ವ್ಯವಸ್ಥೆಯ ಅಂತ್ಯವು ಸಮೀಪಿಸಿತ್ತು. ಅಂತ್ಯವು ಕೆಲವು ವರ್ಷಗಳ ನಂತರ ಅಂದರೆ ಸಾ. ಶ. 70ರಲ್ಲಿ ಯೆರೂಸಲೇಮ್ನ್ನು ರೋಮೀಯ ಸೇನೆಗಳು ಧ್ವಂಸಗೊಳಿಸಿದಾಗ ಬಂತು. ಆದಾಗ್ಯೂ, ಕ್ರೈಸ್ತರಿಗೆ ಮೊದಲೇ ಒಂದು ಸೂಚನೆ ಕೊಡಲ್ಪಟ್ಟಿತ್ತು, ಮತ್ತು ಅವರು ಅದನ್ನು ಆಲಿಸಿ, ಯೊರ್ದನ್ ನದಿಯ ಆಚೇಕಡೆ ಇರುವ ಪೆಲ್ಲಾದ ಹತ್ತಿರ ಬೆಟ್ಟಗಳಿಗೆ ಪಲಾಯನಗೈದರು.—ಲೂಕ 21:20-22.
ಆ ಪರ್ವತ ಪ್ರದೇಶಕ್ಕೆ ಪ್ರಾಯಶಃ ಸಾವಿರಾರು ಕ್ರೈಸ್ತರು ಆಗಮಿಸಿದಾಗ ಇದ್ದ ಸನ್ನಿವೇಶವನ್ನು ಊಹಿಸಲು ಪ್ರಯತ್ನಿಸಿರಿ. ಅವರಿಗೆ ಅಲ್ಲಿ ಮನೆಗಳಾಗಲಿ ಯಾ ಇತರ ಮೂಲಭೂತ ಆವಶ್ಯಕತೆಗಳ ಪೂರೈಕೆ ಆಗಲಿ ಇರಲಿಕ್ಕಿಲ್ಲ, ಬದಲು ತಾತ್ಕಾಲಿಕ ಆಶ್ರಯಗಳನ್ನು ಮಾಡಬೇಕಿತ್ತು. ಅಲ್ಲಿ ಕೊರತೆಗಳು ಮತ್ತು ಕಷ್ಟಗಳು ಇದ್ದವು. (ಮತ್ತಾಯ 24:16-20) ಅಂತಹ ಸಂಕಟಕರ ಸಮಯದಲ್ಲಿ ಅವರಿಗೆ ವಿಶೇಷವಾಗಿ ಬೇಕಾಗಿರುವುದು ಏನಾಗಿತ್ತು? “ನಿಮ್ಮ ನಿಮ್ಮೊಳಗೆ ಯಥಾರ್ಥವಾದ ಪ್ರೀತಿಯಿರಲಿ,” ಪೇತ್ರನಂದನು. ಹೌದು, ನಿಭಾಯಿಸಿಕೊಳ್ಳಲು ಒಬ್ಬರು ಇನ್ನೊಬ್ಬರಿಗೆ ಸಹಾಯ ಮಾಡುವುದು.
-
-
ಫಕ್ಕನೆ ನಾಶನ! ಅವರು ಅದನ್ನು ಹೇಗೆ ನಿಭಾಯಿಸಿದರು?ಎಚ್ಚರ!—1991 | ಏಪ್ರಿಲ್ 8
-
-
ಯೇಸುವಿನ ಪ್ರವಾದನೆಯ ನೆರವೇರಿಕೆಯಲ್ಲಿ ಈ ವ್ಯವಸ್ಥೆಯ ಅಂತ್ಯವು ಸಮೀಪಿಸುತ್ತಿರುವಾಗ, ನಾವು ಇನ್ನಷ್ಟು ಭೂಕಂಪಗಳನ್ನು ಮತ್ತು ಇತರ ವಿಪತ್ತುಗಳನ್ನು ನಾವು ನಿರೀಕ್ಷಿಸಬಹುದು. (ಮತ್ತಾಯ 24:3-8) ಯೆರೂಸಲೇಮ್ ನಾಶನಗೊಂಡಾಗ ಆರಂಭದ ಕ್ರೈಸ್ತರು ಅನುಭವಿಸಿದ್ದಕ್ಕಿಂತಲೂ ಅಧಿಕ ತೀವ್ರತೆಯಲ್ಲಿ ಸಂಕಟಗಳು ಬರಲಿರುವವೆಂಬುದರಲ್ಲಿ ಸಂದೇಹವಿಲ್ಲ. ನಮ್ಮ ದಿನಗಳಲ್ಲಿ ಬೈಬಲ್ ಪ್ರವಾದನೆಗೆ ಇನ್ನಷ್ಟು ಹೆಚ್ಚು ಬಲವಾಗಿರುತ್ತದೆ: ““ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ,” ಆದಕಾರಣ, ಯಾವುದರ ಆವಶ್ಯಕತೆಯಿದೆ? “ಮೊಟ್ಟಮೊದಲು ನಿಮ್ಮ ನಿಮ್ಮೊಳಗೆ ಯಥಾರ್ಥವಾದ ಪ್ರೀತಿಯಿರಲಿ.” (1 ಪೇತ್ರ 4:7, 8) ಯೆಹೋವನ ಸಾಕ್ಷಿಗಳ ಸಹೋದರತ್ವದಲ್ಲಿ ಅಂತಹ ಪ್ರೀತಿಯನ್ನು ಪ್ರದರ್ಶಿಸುವುದನ್ನು ಕಾಣುವುದು ಖಂಡಿತವಾಗಿ ನಮ್ಮ ಹೃದಯಗಳನ್ನು ಬೆಚ್ಚಗೆಗೊಳಿಸುತ್ತದೆ! (g90 2/22)
-