ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಮತ್ತಾಯ 16:21
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 21 ಅವತ್ತಿಂದ ಯೇಸು ಶಿಷ್ಯರಿಗೆ ‘ನಾನು ಯೆರೂಸಲೇಮಿಗೆ ಹೋಗಿ ಅಧಿಕಾರಿಗಳಿಂದ ಮುಖ್ಯ ಪುರೋಹಿತರಿಂದ ಪಂಡಿತರಿಂದ ತುಂಬ ಕಷ್ಟ ಅನುಭವಿಸಿ ಸಾಯಬೇಕಾಗುತ್ತೆ. ಆದ್ರೆ ಮೂರನೇ ದಿನ ಮತ್ತೆ ಬದುಕಿ ಬರ್ತಿನಿ’+ ಅಂತ ಹೇಳ್ತಿದ್ದನು.

  • ಮತ್ತಾಯ 17:22, 23
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 22 ಯೇಸು ಮತ್ತು ಶಿಷ್ಯರು ಗಲಿಲಾಯಕ್ಕೆ ಬಂದಾಗ ಯೇಸು “ಮನುಷ್ಯಕುಮಾರನಿಗೆ ಮೋಸ ಮಾಡಿ ಶತ್ರುಗಳ ಕೈಗೆ ಒಪ್ಪಿಸ್ತಾರೆ.+ 23 ಅವರು ಅವನನ್ನ ಕೊಲ್ತಾರೆ. ಆದ್ರೆ ಮೂರನೇ ದಿನ ಅವನು ಬದುಕಿ ಬರ್ತಾನೆ”+ ಅಂದನು. ಇದನ್ನ ಕೇಳಿ ಶಿಷ್ಯರಿಗೆ ತುಂಬ ಬೇಜಾರಾಯ್ತು.

  • ಮಾರ್ಕ 8:31
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 31 ಅಷ್ಟೇ ಅಲ್ಲ ಮನುಷ್ಯಕುಮಾರ ತುಂಬ ಕಷ್ಟಪಡಬೇಕಾಗುತ್ತೆ. ಅಧಿಕಾರಿಗಳು, ಮುಖ್ಯ ಪುರೋಹಿತರು, ಪಂಡಿತರು ಅವನನ್ನ ಒಪ್ಕೊಳ್ಳದೆ ಕೊಂದುಹಾಕ್ತಾರೆ.+ ಮೂರು ದಿನ ಆದಮೇಲೆ ಮತ್ತೆ ಬದುಕಿ ಬರ್ತಾನೆ ಅಂತ ಶಿಷ್ಯರಿಗೆ ಕಲಿಸೋಕೆ ಶುರುಮಾಡಿದನು.+

  • ಲೂಕ 9:44, 45
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 44 “ಈ ಮಾತನ್ನ ಚೆನ್ನಾಗಿ ಕೇಳಿಸ್ಕೊಂಡು ನೆನಪಿಟ್ಕೊಳ್ಳಿ. ಮನುಷ್ಯಕುಮಾರನಿಗೆ ಮೋಸ ಮಾಡಿ ಶತ್ರುಗಳ ಕೈಗೆ ಒಪ್ಪಿಸ್ತಾರೆ”+ ಅಂದನು. 45 ಆದ್ರೆ ಅವ್ರಿಗೆ ಅದು ಅರ್ಥ ಆಗಲಿಲ್ಲ. ನಿಜ ಹೇಳಬೇಕಂದ್ರೆ ಅವ್ರಿಗೆ ಅರ್ಥ ಆಗದ ಹಾಗೆ ಆ ಮಾತನ್ನ ರಹಸ್ಯವಾಗಿ ಇಡಲಾಗಿತ್ತು. ಅವರು ಸಹ ಇದ್ರ ಬಗ್ಗೆ ಆತನ ಹತ್ರ ಕೇಳೋಕೆ ಭಯಪಟ್ರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ