ಸೋಮವಾರ, ಜುಲೈ 28
ದೇವರು ನಿಮಗೆ ಬೆಂಬಲ ಕೊಡ್ತಿದ್ದಾನೆ. ಲೋಕವನ್ನ ಬೆಂಬಲಿಸೋ ಸೈತಾನನಿಗಿಂತ ದೇವರಿಗೆ ತುಂಬ ಶಕ್ತಿ ಇದೆ.—1 ಯೋಹಾ. 4:4.
ನಿಮಗೆ ಭಯ ಆದಾಗೆಲ್ಲಾ ಯೆಹೋವ ಮುಂದೆ ಏನೆಲ್ಲ ಮಾಡ್ತಾನೆ, ಸೈತಾನ ಇಲ್ಲದೇ ಇರುವಾಗ ನಿಮ್ಮ ಜೀವನ ಹೇಗಿರುತ್ತೆ ಅಂತ ಯೋಚಿಸಿ. 2014ರ ಪ್ರಾದೇಶಿಕ ಅಧಿವೇಶನದಲ್ಲಿ ಒಂದು ಅಭಿನಯ ಇತ್ತು. ಅದ್ರಲ್ಲಿ ಒಬ್ಬ ಅಪ್ಪ ತನ್ನ ಕುಟುಂಬದ ಜೊತೆ 2 ತಿಮೊತಿ 3:1-5ರಲ್ಲಿ ಪರದೈಸ್ ಬಗ್ಗೆ ಹೇಳಿದಿದ್ರೆ ಹೇಗಿರ್ತಿತ್ತು ಅಂತ ಚರ್ಚೆ ಮಾಡಿದ್ರು. “ಹೊಸ ಲೋಕದಲ್ಲಿ ಪರಿಸ್ಥಿತಿ ತುಂಬ ಚೆನ್ನಾಗಿರುತ್ತೆ. ಎಲ್ರೂ ಖುಷಿಯಾಗಿ ಇರ್ತಾರೆ. ಯಾಕಂದ್ರೆ ಅಲ್ಲಿ ಜನ್ರು ಬೇರೆಯವ್ರ ಬಗ್ಗೆ ಯೋಚಿಸೋರು, ಯೆಹೋವನನ್ನ ಇಷ್ಟ ಪಡೋರು, ತಮ್ಮ ಇತಿಮಿತಿಯನ್ನ ಅರ್ಥಮಾಡ್ಕೊಂಡಿರೋರು, ದೀನತೆ ಇರೋರು, ಯೆಹೋವನನ್ನ ಹೊಗಳೋರು, ಅಪ್ಪಅಮ್ಮನ ಮಾತು ಕೇಳೋರು, ಕೃತಜ್ಞತೆ ಇರೋರು, ನಂಬಿಕೆ ಉಳಿಸ್ಕೊಳ್ಳೋರು, ಕುಟುಂಬದವ್ರನ್ನ ಪ್ರೀತಿಸೋರು, ಒಪ್ಕೊಳ್ಳೋಕೆ ರೆಡಿ ಇರೋರು, ಬೇರೆಯವ್ರ ಬಗ್ಗೆ ಒಳ್ಳೇದನ್ನೇ ಮಾತಾಡೋರು, ಸ್ವನಿಯಂತ್ರಣ ಇರೋರು, ಮೃದು ಸ್ವಭಾವದವರು, ಒಳ್ಳೇತನವನ್ನ ಪ್ರೀತಿಸೋರು, ಬಿಟ್ಟುಕೊಡೋರು, ತಮಗಿಂತ ಬೇರೆಯವ್ರನ್ನ ಶ್ರೇಷ್ಠವಾಗಿ ನೋಡೋರು, ಆಸೆಗಳನ್ನ ತೀರಿಸ್ಕೊಳ್ಳದೆ ದೇವರನ್ನ ಇಷ್ಟ ಪಡೋರು, ದೇವರ ಮೇಲೆ ಭಕ್ತಿ ಇರೋರು ಇರ್ತಾರೆ. ಯಾವಾಗ್ಲೂ ಇಂಥವ್ರ ಜೊತೆನೇ ಇರು.” ಈ ತರ ನೀವೂ ನಿಮ್ಮ ಕುಟುಂಬದವ್ರ ಜೊತೆ ಯಾವತ್ತಾದ್ರೂ ಮಾತಾಡಿದ್ದೀರಾ? w24.01 6 ¶13-14
ಮಂಗಳವಾರ, ಜುಲೈ 29
ನೀನು ಮಾಡೋದೆಲ್ಲ ನನಗೆ ತುಂಬ ಖುಷಿ ತರುತ್ತೆ.—ಲೂಕ 3:22.
ಯೆಹೋವ ದೇವರಿಗೆ ತನ್ನ ಜನ್ರಂದ್ರೆ ತುಂಬ ಇಷ್ಟ. ಆತನು ಅವ್ರನ್ನ ಮೆಚ್ಕೊಳ್ತಾನೆ. ಅದಕ್ಕೇ ಬೈಬಲ್ “ಯೆಹೋವ ತನ್ನ ಜನ್ರನ್ನ ನೋಡಿ ಖುಷಿಪಡ್ತಾನೆ” ಅಂತ ಹೇಳುತ್ತೆ. (ಕೀರ್ತ. 149:4) ಆದ್ರೆ ಕೆಲವು ಸಲ ನಾವು ಕುಗ್ಗಿಹೋದಾಗ ‘ಯೆಹೋವ ನನ್ನನ್ನ ಮೆಚ್ಕೊಳ್ತಾನಾ?’ ಅಂತ ಅನಿಸುತ್ತೆ. ಇದೇ ತರ ಹಿಂದಿನ ಕಾಲದಲ್ಲಿದ್ದ ಯೆಹೋವನ ಸೇವಕರಿಗೂ ಅನಿಸಿತ್ತು. (1 ಸಮು. 1:6-10; ಯೋಬ 29:2, 4; ಕೀರ್ತ. 51:11) ನಾವು ಅಪರಿಪೂರ್ಣರಾಗಿದ್ರೂ ಯೆಹೋವನ ಮೆಚ್ಚಿಗೆ ಪಡ್ಕೊಳ್ಳೋಕೆ ಆಗುತ್ತೆ ಅಂತ ಬೈಬಲ್ ಹೇಳುತ್ತೆ. ಅದಕ್ಕೆ ಏನು ಮಾಡಬೇಕು? ನಾವು ಯೇಸು ಮೇಲೆ ನಂಬಿಕೆ ಇಟ್ಟು ದೀಕ್ಷಾಸ್ನಾನ ತಗೊಬೇಕು. (ಯೋಹಾ. 3:16) ಹೀಗೆ ಮಾಡೋದ್ರ ಮೂಲಕ ನಾವು ನಮ್ಮ ಪಾಪಗಳಿಗೆ ಪಶ್ಚಾತ್ತಾಪಪಟ್ಟಿದ್ದೀವಿ, ಯೆಹೋವನ ಇಷ್ಟ ಮಾಡ್ತೀವಿ ಅಂತ ಮಾತು ಕೊಟ್ಟಿದ್ದೀವಿ ಅಂತ ಎಲ್ರಿಗೂ ತೋರಿಸ್ಕೊಡ್ತೀವಿ. (ಅ. ಕಾ. 2:38; 3:19) ಯೆಹೋವನ ಜೊತೆ ಫ್ರೆಂಡ್ಶಿಪ್ ಮಾಡ್ಕೊಳ್ಳೋಕೆ ನಾವು ಈ ಹೆಜ್ಜೆ ತಗೊಳ್ಳುವಾಗ ಆತನಿಗೆ ತುಂಬ ಖುಷಿ ಆಗುತ್ತೆ. ನಾವು ಸಮರ್ಪಣೆಯಲ್ಲಿ ಕೊಟ್ಟ ಮಾತನ್ನ ಉಳಿಸ್ಕೊಳ್ಳೋಕೆ ಎಲ್ಲಿ ತನಕ ಪ್ರಯತ್ನ ಹಾಕ್ತೀವೋ ಅಲ್ಲಿ ತನಕ ಯೆಹೋವ ನಮ್ಮ ಸ್ನೇಹಿತನಾಗಿ ಇರ್ತಾನೆ ಮತ್ತು ನಮ್ಮನ್ನ ಮೆಚ್ಕೊಳ್ತಾನೆ.—ಕೀರ್ತ. 25:14. w24.03 26 ¶1-2
ಬುಧವಾರ, ಜುಲೈ 30
ನಾವಂತೂ ನೋಡಿದ್ದನ್ನ, ಕೇಳಿದ್ದನ್ನ ಮಾತಾಡದೆ ಇರಲ್ಲ ಅಂದ್ರು.—ಅ. ಕಾ. 4:20.
ಸಿಹಿಸುದ್ದಿ ಸಾರಬಾರದು ಅಂತ ಸರ್ಕಾರ ಹೇಳಿದ್ರೂ ನಾವು ಯೇಸುವಿನ ಶಿಷ್ಯರ ತರ ಸಾರುತ್ತಾ ಇರ್ತೀವಿ. ಯೆಹೋವ ನಮಗೆ ಸಹಾಯ ಮಾಡೇ ಮಾಡ್ತಾನೆ ಅಂತ ನಾವು ನಂಬಬೇಕು. ಧೈರ್ಯ, ವಿವೇಕ ಕೊಡಪ್ಪಾ ಅಂತ ಬೇಡ್ಕೊಬೇಕು. ಅಷ್ಟೇ ಅಲ್ಲ, ಕಷ್ಟಗಳನ್ನ ನಿಭಾಯಿಸೋಕೆ ಯೆಹೋವನ ಹತ್ರ ಸಹಾಯ ಕೇಳಬೇಕು. ನಮಗೆ ಯಾವೆಲ್ಲ ಕಷ್ಟಗಳು ಬರಬಹುದು? ನಮ್ಮ ಆರೋಗ್ಯ ಹಾಳಾಗಬಹುದು, ಬೇಜಾರಲ್ಲಿ ಮುಳುಗಿ ಹೋಗಬಹುದು, ನಮ್ಮವರು ಯಾರಾದ್ರೂ ತೀರಿಹೋಗಬಹುದು, ಕುಟುಂಬದಲ್ಲಿ ಏನಾದ್ರೂ ಸಮಸ್ಯೆ ಬರಬಹುದು ಅಥವಾ ಹಿಂಸೆ ಬರಬಹುದು. ಈ ತರ ಸಮಸ್ಯೆಗಳು ಬಂದಾಗ ಜೀವನ ಮಾಡೋಕೆ ತುಂಬ ಕಷ್ಟ ಆಗುತ್ತೆ. ಇದ್ರ ಜೊತೆಗೆ ನಾವಿರೋ ಜಾಗದಲ್ಲಿ ಅಂಟುರೋಗ ಇದ್ರೆ ಅಥವಾ ಯುದ್ಧ ನಡೀತಾ ಇದ್ರೆ ಜೀವನ ಮಾಡೋಕೆ ಇನ್ನೂ ಕಷ್ಟ ಆಗುತ್ತೆ. ಇಂಥ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ನಾವು ಯೆಹೋವನ ಹತ್ರ ಎಲ್ಲಾ ಹೇಳ್ಕೊಬೇಕು. ಒಬ್ಬ ಸ್ನೇಹಿತನ ಹತ್ರ ಮನಸ್ಸುಬಿಚ್ಚಿ ಮಾತಾಡೋ ತರ ಮಾತಾಡಬೇಕು. ಆಗ ಯೆಹೋವನೇ ನಮ್ಮ “ಪರವಾಗಿ ಹೆಜ್ಜೆ ತಗೊತಾನೆ.” (ಕೀರ್ತ. 37:3, 5) ನಾವು ಪಟ್ಟುಬಿಡದೆ ಪ್ರಾರ್ಥನೆ ಮಾಡಿದ್ರೆ ‘ಕಷ್ಟಗಳನ್ನ ಸಹಿಸ್ಕೊಳ್ಳೋಕೆ ಆಗುತ್ತೆ.’ (ರೋಮ. 12:12) ನಾವು ಯಾವ ಕಷ್ಟದಲ್ಲಿ ಇದ್ದೀವಿ ಅಂತ ಯೆಹೋವನಿಗೆ ಗೊತ್ತು. ‘ಸಹಾಯಕ್ಕಾಗಿ ನಾವಿಡೋ ಮೊರೆಯನ್ನ ಆತನು ಕೇಳಿಸ್ಕೊಳ್ತಾನೆ.’—ಕೀರ್ತ. 145:18, 19. w23.05 5-6 ¶12-15