ಎರಡನೇ ಸಮುವೇಲ
16 ದಾವೀದ ಬೆಟ್ಟದ ತುದಿಯಿಂದ ಸ್ವಲ್ಪ ಮುಂದೆ ಹೋದಾಗ+ ಮೆಫೀಬೋಶೆತನ+ ಸೇವಕನಾಗಿದ್ದ ಚೀಬ+ ಅವನನ್ನ ನೋಡೋಕೆ ಅಲ್ಲಿಗೆ ಬಂದಿದ್ದ. ಅವನು ತಡಿಹಾಕಿದ ಎರಡು ಕತ್ತೆಗಳ ಮೇಲೆ 200 ರೊಟ್ಟಿ, 100 ಒಣದ್ರಾಕ್ಷಿ ಬಿಲ್ಲೆ, ಅಂಜೂರದ ಮತ್ತು ಖರ್ಜೂರದ 100 ಬಿಲ್ಲೆ, ಒಂದು ದೊಡ್ಡ ಜಾಡಿಯಲ್ಲಿ ದ್ರಾಕ್ಷಾಮದ್ಯ ತಂದಿದ್ದ.+ 2 ಆಗ ರಾಜ ಚೀಬನಿಗೆ “ಇವನ್ನೆಲ್ಲ ನೀನ್ಯಾಕೆ ತಗೊಂಡು ಬಂದೆ?” ಅಂತ ಕೇಳಿದ. ಅದಕ್ಕೆ ಚೀಬ “ರಾಜನ ಕುಟುಂಬದವರು ಸವಾರಿ ಮಾಡೋಕೆ ಕತ್ತೆಗಳನ್ನ, ಯುವಕರಿಗೆ ತಿನ್ನೋಕೆ ರೊಟ್ಟಿ, ಬಿಲ್ಲೆಗಳನ್ನ ಮತ್ತು ಕಾಡಲ್ಲಿ ದಣಿದು ಹೋಗುವವರಿಗೆ ದ್ರಾಕ್ಷಾಮದ್ಯ ತಂದಿದ್ದೀನಿ”+ ಅಂದ. 3 ಆಗ ರಾಜ ಚೀಬನಿಗೆ “ನಿನ್ನ ಯಜಮಾನನ ಮಗ* ಎಲ್ಲಿ?”+ ಅಂತ ಕೇಳಿದ. ಅದಕ್ಕೆ ಚೀಬ ರಾಜನಿಗೆ “ಅವನು ಯೆರೂಸಲೇಮಲ್ಲೇ ಉಳ್ಕೊಂಡಿದ್ದಾನೆ. ಅವನು ನನಗೆ ‘ಇವತ್ತು ಇಸ್ರಾಯೇಲಿನ ಜನ್ರು ನನ್ನ ತಂದೆ ರಾಜ್ಯವನ್ನ ನನಗೆ ವಾಪಸ್ ಕೊಡಿಸ್ತಾರೆ’+ ಅಂತ ಹೇಳಿದ.” 4 ಆಮೇಲೆ ರಾಜ ಚೀಬನಿಗೆ “ಮೆಫೀಬೋಶೆತನಿಗೆ ಸೇರಿದ್ದೆಲ್ಲ ನಿಂದೇ”+ ಅಂದ. ಅದಕ್ಕೆ ಚೀಬ “ನಾನು ನಿನ್ನ ಮುಂದೆ ಬಗ್ಗಿ ನಮಸ್ಕಾರ ಮಾಡ್ತೀನಿ. ನನ್ನ ಒಡೆಯನಾದ ರಾಜನ ದಯೆ ನನ್ನ ಮೇಲಿರಲಿ”+ ಅಂದ.
5 ರಾಜ ದಾವೀದ ಬಹುರೀಮಿಗೆ ಬಂದಾಗ ಸೌಲನ ಮನೆತನದ ಗೇರನ ಮಗ ಶಿಮ್ಮಿ+ ಗಟ್ಟಿಯಾಗಿ ದಾವೀದನನ್ನ ಶಪಿಸ್ತಾ ಹೊರಗೆ ಬಂದ.+ 6 ಅವನು ರಾಜ ದಾವೀದನ, ಅವನ ಎಲ್ಲ ಸೇವಕರ, ಎಲ್ಲ ಜನ್ರ, ಅವನ ಎಡಬಲಗಳಲ್ಲಿದ್ದ ವೀರ ಸೈನಿಕರ ಮೇಲೆ ಕಲ್ಲು ಎಸಿತಾ ಇದ್ದ. 7 ಶಿಮ್ಮಿ ಶಪಿಸ್ತಾ ಹೀಗಂದ: “ರಕ್ತಾಪರಾಧ ಇರೋ ಮನುಷ್ಯ ನೀನು! ಹೋಗು ಇಲ್ಲಿಂದ. ನೀನೊಬ್ಬ ಅಯೋಗ್ಯ! 8 ನೀನು ಸೌಲನ ಕುಟುಂಬದವ್ರನ್ನ ಸಾಯಿಸಿ, ಅವನ ರಾಜ್ಯ ಕಿತ್ಕೊಂಡು ರಾಜನಾದೆ. ಅವ್ರೆಲ್ಲರ ಸಾವಿಗೆ ಯೆಹೋವ ನಿನಗೆ ಸರಿಯಾದ ಶಿಕ್ಷೆ ಕೊಡ್ಲಿ. ಯೆಹೋವ ನಿನ್ನ ರಾಜ್ಯವನ್ನ ನಿನ್ನ ಮಗ ಅಬ್ಷಾಲೋಮನ ಕೈಗೆ ಒಪ್ಪಿಸಿದ್ದಾನೆ. ನೀನೊಬ್ಬ ಕೊಲೆಗಾರ ಆಗಿರೋದ್ರಿಂದ ನಿನ್ನ ಮೇಲೆ ಕಷ್ಟ ಬಂದಿದೆ.”+
9 ಆಗ ಚೆರೂಯಳ+ ಮಗ ಅಬೀಷೈ ರಾಜನಿಗೆ “ನನ್ನ ಒಡೆಯನಾದ ರಾಜನನ್ನ ಈ ಸತ್ತ ನಾಯಿ+ ಯಾಕೆ ಬಯ್ಯಬೇಕು?+ ದಯವಿಟ್ಟು ನನಗೆ ಅನುಮತಿ ಕೊಡು. ನಾನು ಹೋಗಿ ಅವನ ತಲೆ ಕತ್ತರಿಸ್ತೀನಿ”+ ಅಂದ. 10 ಆದ್ರೆ ರಾಜ “ಚೆರೂಯಳ ಗಂಡು ಮಕ್ಕಳೇ, ನೀವು ಈ ವಿಷ್ಯದಲ್ಲಿ ಯಾಕೆ ತಲೆಹಾಕ್ತೀರಾ?+ ಬಿಡಿ, ಅವನು ನನ್ನನ್ನ ಶಪಿಸಲಿ.+ ಯೆಹೋವನೇ ಅವನಿಗೆ ನನ್ನನ್ನ ಶಪಿಸೋಕೆ ಹೇಳಿರುವಾಗ+ ಅವನನ್ನ ಪ್ರಶ್ನಿಸೋ ಹಕ್ಕು ಯಾರಿಗಿದೆ?” ಅಂದ. 11 ಆಮೇಲೆ ದಾವೀದ ಅಬೀಷೈಗೆ, ತನ್ನ ಎಲ್ಲ ಸೇವಕರಿಗೆ “ನನ್ನ ರಕ್ತದಿಂದ ಬಂದಿರೋ ನನ್ನ ಸ್ವಂತ ಮಗನೇ ನನ್ನ ಪ್ರಾಣ ತೆಗಿಬೇಕಂತ ಇರುವಾಗ+ ಈ ಬೆನ್ಯಾಮೀನ+ ಮಾಡ್ತಿರೋದು ಅಷ್ಟೇನೂ ದೊಡ್ಡದಲ್ಲ! ಹೀಗೆ ಮಾಡೋ ತರ ಯೆಹೋವನೇ ಅವನಿಗೆ ಹೇಳಿರೋದ್ರಿಂದ ಅವನ ಪಾಡಿಗೆ ಬಿಟ್ಟುಬಿಡಿ, ನನ್ನನ್ನ ಶಪಿಸಲಿ! 12 ಯೆಹೋವ ಒಂದುವೇಳೆ ನನ್ನ ನೋವು ನೋಡಬಹುದು.+ ಇವತ್ತಿನ ಈ ಶಾಪದ ಮಾತುಗಳ ಬದ್ಲು ಯೆಹೋವ ನನಗೆ ಒಳ್ಳೇದು ಮಾಡಬಹುದು”+ ಅಂದ. 13 ಇದನ್ನ ಹೇಳಿ ದಾವೀದ, ಅವನ ಗಂಡಸ್ರು ತಮ್ಮ ಪಾಡಿಗೆ ಕೆಳಗೆ ಹೋಗ್ತಿರುವಾಗ ಶಿಮ್ಮಿ ಗುಡ್ಡದ ಮೇಲೆ ದಾವೀದನ ಜೊತೆಜೊತೆಯಾಗಿ ನಡಿತಾ ಶಪಿಸ್ತಿದ್ದ.+ ಅವನ ಮೇಲೆ ಕಲ್ಲು ಎಸಿತಾ, ಧೂಳು ಎರಚುತ್ತಾ ಹೋದ.
14 ಕೊನೆಗೂ ರಾಜ, ಅವನ ಜೊತೆ ಇದ್ದ ಎಲ್ಲ ಜನ್ರು ತಾವು ಮುಟ್ಟಬೇಕಾದ ಜಾಗಕ್ಕೆ ಬಂದ್ರು. ಅವ್ರಿಗೆ ತುಂಬ ಸುಸ್ತಾಗಿದ್ರಿಂದ ಅಲ್ಲಿ ಆರಾಮ ಮಾಡಿದ್ರು.
15 ಅದೇ ಸಮಯದಲ್ಲಿ ಅಬ್ಷಾಲೋಮ, ಇಸ್ರಾಯೇಲಿನ ಎಲ್ಲ ಗಂಡಸ್ರು ಯೆರೂಸಲೇಮ್ ತಲುಪಿದ್ರು. ಅಬ್ಷಾಲೋಮನ ಜೊತೆ ಅಹೀತೋಫೆಲ+ ಇದ್ದ. 16 ದಾವೀದನ ಆಪ್ತ ಸ್ನೇಹಿತನೂ ಅರ್ಕೀಯನೂ+ ಆದ ಹೂಷೈ+ ಅಬ್ಷಾಲೋಮನ ಹತ್ರ ಬಂದು “ರಾಜ ಚಿರಂಜೀವಿ ಆಗಿರಲಿ!+ ರಾಜ ಚಿರಂಜೀವಿ ಆಗಿರಲಿ!” ಅಂದ. 17 ಅದಕ್ಕೆ ಅಬ್ಷಾಲೋಮ ಹೂಷೈಗೆ “ನಿನ್ನ ಸ್ನೇಹಿತನ ಮೇಲೆ ನಿನಗಿರೋ ಪ್ರೀತಿ ಇಷ್ಟೇನಾ? ಅವನ ಜೊತೆ ಯಾಕೆ ಹೋಗಲಿಲ್ಲ?” ಅಂತ ಕೇಳಿದ. 18 ಆಗ ಹೂಷೈ ಅಬ್ಷಾಲೋಮನಿಗೆ “ಇಲ್ಲ. ಯೆಹೋವ, ಈ ಜನ್ರು, ಇಸ್ರಾಯೇಲಿನ ಗಂಡಸ್ರು ಯಾರನ್ನ ಆಯ್ಕೆ ಮಾಡ್ತಾರೋ ಅವನ ಪಕ್ಷದಲ್ಲೇ ನಾನೂ ಇರ್ತಿನಿ. ಅವನ ಜೊತೆ ಇರ್ತಿನಿ. 19 ನಾನು ಇನ್ನೊಮ್ಮೆ ಹೇಳ್ತೀನಿ ನಾನು ರಾಜನ ಮಗನನ್ನ ಬಿಟ್ಟು ಬೇರೆ ಯಾರಿಗೆ ತಾನೇ ಸೇವೆ ಮಾಡಬೇಕು? ನಾನು ನಿನ್ನ ತಂದೆಗೆ ಹೇಗೆ ಸೇವೆ ಮಾಡಿದ್ನೋ ಅದೇ ತರ ನಿನಗೂ ಸೇವೆ ಮಾಡ್ತೀನಿ”+ ಅಂದ.
20 ಇದಾದ ಮೇಲೆ ಅಬ್ಷಾಲೋಮ ಅಹೀತೋಫೆಲನಿಗೆ “ಈ ವಿಷ್ಯದಲ್ಲಿ ನಾವೇನು ಮಾಡಬೇಕು? ಇದ್ರ ಬಗ್ಗೆ ನಿನ್ನ ಸಲಹೆ ಏನು?”+ ಅಂತ ಕೇಳಿದ. 21 ಅದಕ್ಕೆ ಅಹೀತೋಫೆಲ “ನಿನ್ನ ತಂದೆ ಅರಮನೆ ನೋಡ್ಕೊಳ್ಳೋಕೆ ಬಿಟ್ಟುಹೋಗಿರೋ+ ಅವನ ಉಪಪತ್ನಿಯರ ಜೊತೆ ಮಲಗು.+ ಆಗ ನೀನು ನಿನ್ನ ತಂದೆನ ಅವಮಾನ ಮಾಡಿದ್ದೀಯ ಅಂತ ಎಲ್ಲ ಇಸ್ರಾಯೇಲ್ಯರಿಗೆ ಗೊತ್ತಾಗುತ್ತೆ. ಇದ್ರಿಂದ ನಿನ್ನನ್ನ ಬೆಂಬಲಿಸುವವರಿಗೆ ಇನ್ನೂ ಧೈರ್ಯ ಬರುತ್ತೆ” ಅಂದ. 22 ಹಾಗಾಗಿ ಅಬ್ಷಾಲೋಮನಿಗಾಗಿ ಮಾಳಿಗೆ ಮೇಲೆ ಡೇರೆ ಹಾಕಿ+ ಎಲ್ಲ ಇಸ್ರಾಯೇಲ್ಯರ ಕಣ್ಮುಂದೆನೇ+ ಅಬ್ಷಾಲೋಮ ತನ್ನ ತಂದೆಯ ಉಪಪತ್ನಿಯರ ಜೊತೆ ಮಲಗಿದ.+
23 ಆ ದಿನಗಳಲ್ಲಿ ಅಹೀತೋಫೆಲ+ ಕೊಡ್ತಿದ್ದ ಸಲಹೆಯನ್ನ ಜನ್ರು ಸತ್ಯ ದೇವರ ಮಾತುಗಳ ತರ ನೋಡ್ತಿದ್ರು. ಹಾಗಾಗಿ ದಾವೀದ, ಅಬ್ಷಾಲೋಮ ಇಬ್ರೂ ಅಹೀತೋಫೆಲನ ಎಲ್ಲ ಸಲಹೆಗಳಿಗೆ ತುಂಬ ಗೌರವ ಕೊಡ್ತಿದ್ರು.