ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • gt ಅಧ್ಯಾ. 8
  • ಪ್ರಜಾಪೀಡಕ ರಾಜನಿಂದ ಪಾರಾಗುವದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಜಾಪೀಡಕ ರಾಜನಿಂದ ಪಾರಾಗುವದು
  • ಅತ್ಯಂತ ಮಹಾನ್‌ ಪುರುಷ
  • ಅನುರೂಪ ಮಾಹಿತಿ
  • ಯೆಹೋವನು ಯೇಸುವನ್ನು ಕಾಪಾಡಿದನು
    ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಸಂರಕ್ಷಿಸಿದ, ಪೋಷಿಸಿದ, ಪಟ್ಟುಹಿಡಿದ
    ಅವರ ನಂಬಿಕೆಯನ್ನು ಅನುಕರಿಸಿ
  • ಒಂದು ನಕ್ಷತ್ರದಿಂದ ಮಾರ್ಗದರ್ಶಿಸಲ್ಪಟ್ಟ ಪುರುಷರು
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಅವನು ದೈವಿಕ ನಿರ್ದೇಶನವನ್ನು ಸ್ವೀಕರಿಸಿದನು
    ಕಾವಲಿನಬುರುಜು—1995
ಇನ್ನಷ್ಟು
ಅತ್ಯಂತ ಮಹಾನ್‌ ಪುರುಷ
gt ಅಧ್ಯಾ. 8

ಅಧ್ಯಾಯ 8

ಪ್ರಜಾಪೀಡಕ ರಾಜನಿಂದ ಪಾರಾಗುವದು

ಯೋಸೇಫನು ಮರಿಯಳನ್ನು ಮಧ್ಯ ರಾತ್ರಿಯಲ್ಲಿ ಒಂದು ತುರ್ತಿನ ಸುದ್ದಿಯನ್ನು ಕೊಡಲು ಎಚ್ಚರಗೊಳಿಸುತ್ತಾನೆ. ಯೆಹೋವನ ದೂತನು ಅವನಿಗೆ ಕಾಣಿಸಿಕೊಂಡು ಹೇಳಿದ್ದು: “ನೀನು ಎದ್ದು ಈ ಕೂಸನ್ನು ಮತ್ತು ಇದರ ತಾಯಿಯನ್ನು ಕರಕೊಂಡು ಐಗುಪ್ತ ದೇಶಕ್ಕೆ ಓಡಿಹೋಗಿ ನಾನು ನಿನಗೆ ಹೇಳುವ ತನಕ ಅಲ್ಲೇ ಇರು; ಹೆರೋದನು ಈ ಕೂಸನ್ನು ಕೊಲ್ಲಬೇಕೆಂದು ಅದನ್ನು ಹುಡುಕುತ್ತಿರುವನು.”

ತಕ್ಷಣವೇ, ಆ ಮೂವರು ಅಲ್ಲಿಂದ ಪಾರಾಗುತ್ತಾರೆ. ಆಗ, ಅದೇ ಸಮಯದಲ್ಲಿ ತನಗೆ ಮೋಸಮಾಡಿ ಜೋಯಿಸರು ದೇಶವನ್ನು ಬಿಟ್ಟು ಹೋಗಿರುತ್ತಾರೆ ಎಂದು ಹೆರೋದನು ತಿಳುಕೊಳ್ಳುತ್ತಾನೆ. ಅವರು ಯೇಸುವನ್ನು ಕಂಡುಕೊಂಡ ನಂತರ ಹೆರೋದನಿಗೆ ವರದಿ ಮಾಡಬೇಕಿತ್ತೆಂಬುದನ್ನು ನೆನಪಿಸಿರಿ. ಹೆರೋದನು ಕ್ರೋಧಾವಿಷ್ಟನಾಗುತ್ತಾನೆ. ಆದುದರಿಂದ ಯೇಸುವನ್ನು ಕೊಲ್ಲುವ ಅವನ ಪ್ರಯತ್ನದಲ್ಲಿ, ಬೇತ್ಲೆಹೇಮಿನಲ್ಲಿಯೂ, ಅದರ ಎಲ್ಲಾ ಜಿಲ್ಲೆಗಳಲ್ಲೂ ಇರುವ ಎರಡು ವರ್ಷದೊಳಗಿನ ಗಂಡುಕೂಸುಗಳನ್ನೆಲ್ಲಾ ಕೊಲ್ಲಬೇಕೆಂಬ ಆಜ್ಞೆಯನ್ನು ಹೆರೋದನು ಹೊರಡಿಸುತ್ತಾನೆ. ವಯಸ್ಸಿನ ಲೆಕ್ಕಾಚಾರವನ್ನು ಮೂಡಣ ದೇಶದಿಂದ ಬಂದ ಜೋಯಿಸರಿಂದ ಆರಂಭದಲ್ಲಿ ಪಡೆದ ಸಮಾಚಾರದ ಮೇಲೆ ಹೆರೋದನು ಆಧರಿಸಿದ್ದನು.

ಎಲ್ಲಾ ಗಂಡು ಕೂಸುಗಳ ಕಗ್ಗೊಲೆಯನ್ನು ನೋಡುವದು ಎಂಥಹ ಒಂದು ದಾರುಣ ದೃಶ್ಯ! ಹೆರೋದನ ಸೈನಿಕರು ಒಂದು ಮನೆಯ ನಂತರ ಇನ್ನೊಂದನ್ನು ನುಗ್ಗುತ್ತಾರೆ. ಅವರು ಗಂಡು ಕೂಸನ್ನು ಕಂಡಾಕ್ಷಣವೇ, ಮಗುವನ್ನು ತಾಯಿಯ ತೋಳಿನಿಂದ ಬಲವಂತವಾಗಿ ಸೆಳೆಯುತ್ತಾರೆ. ಅವರು ಎಷ್ಟು ಕೂಸುಗಳನ್ನು ಕೊಂದರು ಎಂಬದು ನಮಗೆ ತಿಳಿದಿಲ್ಲ, ಆದರೆ ತಾಯಂದಿರ ರೋದನವೂ, ಗೋಳಾಟವೂ, ದೇವರ ಪ್ರವಾದಿಯಾದ ಯೆರೆಮೀಯನ ಬೈಬಲ್‌ ಪ್ರವಾದನೆಯನ್ನು ನೆರವೇರಿಸಿತು.

ಈ ಮಧ್ಯೆ, ಯೋಸೇಫನು ಮತ್ತು ಅವನ ಕುಟುಂಬವು ಸುರಕ್ಷಿತವಾಗಿ ಐಗುಪ್ತ ದೇಶಕ್ಕೆ ತಲುಪಿಯಾಗಿತ್ತು ಮತ್ತು ಅವರು ಈಗ ಅಲ್ಲಿ ವಾಸಿಸುತ್ತಾರೆ. ಆದರೆ ಒಂದು ರಾತ್ರಿ ಯೆಹೋವನ ದೂತನು ಪುನಃ ಯೋಸೇಫನಿಗೆ ಕನಸಿನಲ್ಲಿ ಕಾಣಿಸುತ್ತಾನೆ “ನೀನು ಎದ್ದು ಕೂಸನ್ನೂ ಅದರ ತಾಯಿಯನ್ನೂ ಕರಕೊಂಡು ಇಸ್ರಾಯೇಲ್‌ ದೇಶಕ್ಕೆ ಹೋಗು,” ಅನ್ನುತ್ತಾನೆ ದೇವದೂತನು. “ಏಕಂದರೆ ಕೂಸಿನ ಪ್ರಾಣವನ್ನು ತೆಗೆಯಬೇಕೆಂದಿದ್ದವರು ಸತ್ತು ಹೋದರು.” ದೇವರ ಮಗನು ಐಗುಪ್ತ ದೇಶದಿಂದ ಕರೆಯಲ್ಪಡುವನು ಎಂಬ ಬೈಬಲಿನ ಇನ್ನೊಂದು ಪ್ರವಾದನೆಯ ನೆರವೇರಿಕೆಯಲ್ಲಿ ಆ ಕುಟುಂಬವು ಅವರ ಸ್ವದೇಶಕ್ಕೆ ಹಿಂತೆರಳಿತು.

ಯೋಸೇಫನು ಯೂದಾಯದಲ್ಲಿ ನೆಲೆಸಲು ಪ್ರಾಯಶಃ ಉದ್ದೇಶಿಸಿದ್ದನು, ಅವರು ಐಗುಪ್ತಕ್ಕೆ ಓಡಿಹೋಗುವ ಮೊದಲು ಆ ಬೇತ್ಲೆಹೇಮ್‌ ನಗರದಲ್ಲಿ ವಾಸಿಸಿದ್ದರು. ಆದರೆ ಹೆರೋದನ ದುಷ್ಟ ಮಗನಾದ ಆರ್ಖೆಲಾಯನು ಈಗ ಯೂದಾಯದ ಅರಸನಾಗಿ ಆಳುತ್ತಾನೆ ಎಂದವನಿಗೆ ತಿಳಿಯುತ್ತದೆ. ಮತ್ತು ಇನ್ನೊಂದು ಕನಸಿನಲ್ಲಿ ಅಪಾಯದ ಎಚ್ಚರಿಕೆಯನ್ನು ಯೆಹೋವನಿಂದ ಪಡೆಯುತ್ತಾನೆ. ಆದುದರಿಂದ ಯೋಸೇಫನೂ, ಅವನ ಪರಿವಾರವೂ ಉತ್ತರಕ್ಕೆ ಪ್ರಯಾಣಿಸಿ, ಗಲಿಲಾಯದ ನಜರೇತ್‌ ಎಂಬ ನಗರದಲ್ಲಿ ವಸತಿ ಮಾಡುತ್ತದೆ. ಇಲ್ಲಿ ಯೆಹೂದ್ಯ ಧಾರ್ಮಿಕ ಜೀವಿತದ ಕೇಂದ್ರಸ್ಥಾನದಿಂದ ಬಹುದೂರದ ಈ ಸಮುದಾಯದಲ್ಲಿ ಯೇಸುವು ಬೆಳೆಯುತ್ತಾನೆ. ಮತ್ತಾಯ 2:13-23; ಯೆರೆಮೀಯ 31:15; ಹೋಶೇಯ 11:1.

▪ ಜೋಯಿಸರು ಹಿಂದಿರುಗಿ ಬಾರದಿದ್ದಾಗ, ಯಾವ ಭಯಂಕರ ಸಂಗತಿಯನ್ನು ಹೆರೋದನು ಮಾಡಿದನು, ಆದರೆ ಯೇಸು ಸಂರಕ್ಷಿಸಲ್ಪಟ್ಟದ್ದು ಹೇಗೆ?

▪ ಐಗುಪ್ತದೇಶದಿಂದ ಹಿಂದಿರುಗಿದ ಮೇಲೆ, ಯೋಸೇಫನು ಪುನಃ ಬೇತ್ಲೆಹೇಮಿನಲ್ಲಿ ಯಾಕೆ ವಾಸಿಸಲಿಲ್ಲ?

▪ ಆ ಸಮಯದಲ್ಲಿ ಯಾವ ಬೈಬಲ್‌ ಪ್ರವಾದನೆಗಳು ನೆರವೇರಿದವು?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ