ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • wp16 ನಂ. 3 ಪು. 14-15
  • ನೀವು ನಂಬುವುದೂ ಬೈಬಲ್‌ ಹೇಳುವುದೂ ಒಂದೇನಾ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನೀವು ನಂಬುವುದೂ ಬೈಬಲ್‌ ಹೇಳುವುದೂ ಒಂದೇನಾ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2016
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಹೇಗೆ ಹೋಲಿಸಿ ನೋಡೋದು?
  • ದೇವರ ರಾಜ್ಯ ಎಂದರೇನು?
    ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
  • ಯೇಸು ಕ್ರಿಸ್ತನು ಯಾರು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ದೇವರ ರಾಜ್ಯ ಎಂದರೇನು?
    ಬೈಬಲ್‌ ನಮಗೆ ಏನು ಕಲಿಸುತ್ತದೆ?
  • ಯೆಹೋವನ ಸಾಕ್ಷಿಗಳ ನಂಬಿಕೆ ಏನು?
    ಯೆಹೋವನ ಸಾಕ್ಷಿಗಳ ನಂಬಿಕೆ ಏನು?
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2016
wp16 ನಂ. 3 ಪು. 14-15

ನೀವು ನಂಬುವುದೂ ಬೈಬಲ್‌ ಹೇಳುವುದೂ ಒಂದೇನಾ?

ನೀವು ಕ್ರೈಸ್ತರಾ? ಹಾಗಿದ್ದರೆ ಲೋಕದಲ್ಲಿರೋ ಇನ್ನೂರು ಕೋಟಿ ಕ್ರೈಸ್ತರಲ್ಲಿ ನೀವೂ ಒಬ್ಬರು. ಹೆಚ್ಚು ಕಡಿಮೆ ಇಂದು ಮೂವರಲ್ಲಿ ಒಬ್ಬರು ಕ್ರೈಸ್ತರಾಗಿದ್ದಾರೆ. ಆದರೆ ಯೋಚಿಸಬೇಕಾದ ವಿಷಯ ಏನೆಂದರೆ ಕ್ರೈಸ್ತರಲ್ಲೇ ಸಾವಿರಾರು ಪಂಗಡಗಳಿವೆ. ಪ್ರತಿಯೊಂದು ಪಂಗಡದ ನಂಬಿಕೆಗಳು, ಆಚಾರವಿಚಾರಗಳು ತುಂಬಾ ಭಿನ್ನವಾಗಿವೆ. ಹಾಗಾಗಿ ನಿಮ್ಮ ನಂಬಿಕೆಗೂ, ಬೇರೆ ಕ್ರೈಸ್ತರ ನಂಬಿಕೆಗೂ ತುಂಬಾ ವ್ಯತ್ಯಾಸವಿರುವುದನ್ನು ನೀವು ನೋಡಿರಬಹುದು. ಕ್ರೈಸ್ತರಲ್ಲೇ ಈ ರೀತಿ ವ್ಯತ್ಯಾಸವಿದ್ದರೆ ಪರವಾಗಿಲ್ವಾ? ಖಂಡಿತ ಇಲ್ಲ. ಕ್ರೈಸ್ತರು ಬೈಬಲ್‌ ಹೇಳೋ ಪ್ರಕಾರನೇ ಜೀವಿಸಬೇಕು.

ಒಂದನೇ ಶತಮಾನದಲ್ಲಿ ಯೇಸು ಕ್ರಿಸ್ತನ ಹಿಂಬಾಲಕರನ್ನು “ಕ್ರೈಸ್ತರು” ಎಂದು ಕರೆಯಲಾಯಿತು. (ಅಪೊಸ್ತಲರ ಕಾರ್ಯಗಳು 11:26) ಅವರನ್ನು ಬೇರೆ ಬೇರೆ ಹೆಸರುಗಳಿಂದ ಗುರುತಿಸುವ ಅವಶ್ಯಕತೆ ಇರಲಿಲ್ಲ. ಏಕೆಂದರೆ ಆಗ ಒಂದೇ ಕ್ರೈಸ್ತ ನಂಬಿಕೆ ಇತ್ತು. ಆಗ ಎಲ್ಲಾ ಕ್ರೈಸ್ತರು ಒಟ್ಟಾಗಿ ಕ್ರೈಸ್ತತ್ವದ ಸ್ಥಾಪಕನಾದ ಯೇಸು ಕ್ರಿಸ್ತನ ಬೋಧನೆಗಳನ್ನು ಮತ್ತು ಮಾರ್ಗದರ್ಶನಗಳನ್ನು ಪಾಲಿಸಿದರು. ನಿಮ್ಮ ಚರ್ಚಿನ ಬಗ್ಗೆ ಏನು? ಯೇಸು ಏನು ಬೋಧಿಸಿದನೋ, ಆರಂಭದ ಯೇಸುವಿನ ಹಿಂಬಾಲಕರು ಏನನ್ನು ನಂಬಿದ್ದರೋ ಅದನ್ನೇ ನಿಮ್ಮ ಚರ್ಚ್‌ ಬೋಧಿಸುತ್ತಿದೆಯೋ? ಇದನ್ನು ತಿಳಿದುಕೊಳ್ಳುವುದು ಹೇಗೆ? ಇದಕ್ಕಿರುವುದು ಒಂದೇ ಮಾರ್ಗ. ಅದು ನಿಮ್ಮ ಬೈಬಲ್‌.

ಬೈಬಲ್‌ ದೇವರ ವಾಕ್ಯವಾದದ್ದರಿಂದ ಯೇಸುವಿಗೆ ಅದರ ಮೇಲೆ ಆಳವಾದ ಗೌರವವಿತ್ತು. ಬೈಬಲಿನ ಬೋಧನೆಗಳಿಗಿಂತ ಮನುಷ್ಯರು ಮಾಡಿದ ಸಂಪ್ರದಾಯಗಳಿಗೆ ಯಾರು ಹೆಚ್ಚಿನ ಆದ್ಯತೆ ಕೊಟ್ಟರೋ ಅಂಥವರನ್ನು ಯೇಸು ಇಷ್ಟಪಡಲಿಲ್ಲ. (ಮಾರ್ಕ 7:9-13) ಹಾಗಾಗಿ ಯೇಸುವಿನ ನಿಜ ಹಿಂಬಾಲಕರು ಬೈಬಲ್‌ ಹೇಳುವಂಥದ್ದನ್ನು ಮಾತ್ರ ನಂಬುತ್ತಾರೆ. ಆದ್ದರಿಂದ ಪ್ರತಿಯೊಬ್ಬ ಕ್ರೈಸ್ತನು ‘ನನ್ನ ಚರ್ಚ್‌ನಲ್ಲಿ ಬೋಧಿಸುವ ವಿಷಯಗಳು ಬೈಬಲ್‌ ಹೇಳಿದಂತೆ ಇದೆಯಾ?’ ಎಂದು ಪ್ರಶ್ನಿಸಿಕೊಳ್ಳುವುದು ತುಂಬಾ ಪ್ರಾಮುಖ್ಯ. ಈ ಪ್ರಶ್ನೆಗೆ ಉತ್ತರ ತಿಳಿಯಲು ಬೈಬಲ್‌ ನಿಜವಾಗಿ ಏನು ಹೇಳುತ್ತದೋ ಆ ವಿಷಯವನ್ನು ನಿಮ್ಮ ಚರ್ಚ್‌ ಬೋಧಿಸುವ ವಿಷಯಕ್ಕೆ ಹೋಲಿಸಿ ನೋಡಿ.

ನಾವು ದೇವರನ್ನು ಆರಾಧಿಸುವಾಗ ಸತ್ಯದಿಂದ ಆರಾಧಿಸಬೇಕು ಅಂತ ಯೇಸು ಹೇಳಿದನು. ಆ ಸತ್ಯ ಬೈಬಲಿನಲ್ಲಿದೆ. (ಯೋಹಾನ 4:24; 17:17) ‘ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಂಡರೆ’ ಮಾತ್ರ ನಮಗೆ ರಕ್ಷಣೆ ಸಿಗುತ್ತದೆ ಎಂದು ಅಪೊಸ್ತಲ ಪೌಲನು ಹೇಳಿದನು. (1 ತಿಮೊಥೆಯ 2:4) ಹಾಗಾಗಿ ನಮ್ಮ ನಂಬಿಕೆಗಳು ಬೈಬಲ್‌ ಹೇಳುವಂತೆ ಇರುವುದು ತುಂಬಾ ಪ್ರಾಮುಖ್ಯ. ಯಾಕೆಂದರೆ ಇದು ನಮ್ಮ ಜೀವದ ಪ್ರಶ್ನೆಯಾಗಿದೆ!

ಹೇಗೆ ಹೋಲಿಸಿ ನೋಡೋದು?

ಕೆಳಗಿನ ಆರು ಪ್ರಶ್ನೆಗಳನ್ನು ಮತ್ತು ಅದಕ್ಕೆ ಬೈಬಲ್‌ ಕೊಡುವ ಉತ್ತರಗಳನ್ನು ಓದಿ ನೋಡಿ. ಕೊಡಲಾಗಿರುವ ವಚನಗಳನ್ನು ಬೈಬಲಿನಲ್ಲಿ ಓದಿ. ಉತ್ತರದ ಬಗ್ಗೆ ಸ್ವಲ್ಪ ಯೋಚಿಸಿ. ಆಮೇಲೆ ಬೈಬಲ್‌ ಹೇಳೋದನ್ನ ನಿಮ್ಮ ಚರ್ಚ್‌ ಹೇಳೋದಕ್ಕೆ ಹೋಲಿಸಿ ನೋಡಿ.

ಇದೊಂದು ಚಿಕ್ಕ ಕ್ವಿಝ್‌. ಆದರೆ ಇದು ನಿಮ್ಮ ಜೀವನದಲ್ಲೇ ಅತೀ ಪ್ರಾಮುಖ್ಯವಾದ ಹೋಲಿಕೆ ಅನ್ನೋದರಲ್ಲಿ ಎರಡು ಮಾತಿಲ್ಲ. ಬೈಬಲ್‌ ಹೇಳೋ ವಿಷ್ಯಗಳಿಗೂ ನಿಮ್ಮ ಚರ್ಚ್‌ ಹೇಳೋ ವಿಷ್ಯಕ್ಕೂ ಹೋಲಿಸಿ ನೋಡಲು ನಿಮಗೆ ಇಷ್ಟ ಇದೆಯಾ? ಯೆಹೋವನ ಸಾಕ್ಷಿಗಳು ಬೈಬಲಿನಲ್ಲಿರುವ ಸತ್ಯವನ್ನು ಸ್ಪಷ್ಟವಾಗಿ ತಿಳಿಸಲು ಸಹಾಯ ಮಾಡುತ್ತಾರೆ. ಬೈಬಲನ್ನು ಉಚಿತವಾಗಿ ಕಲಿಯಲು ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಿ ಅಥವಾ jw.org ವೆಬ್‌ಸೈಟಿಗೆ ಭೇಟಿ ನೀಡಿ. ಕ್ವಿಝ್‌ ಶುರು ಮಾಡೋಣವಾ? ▪ (w16-E No. 4)

1 ಪ್ರಶ್ನೆ: ದೇವರು ಯಾರು?

ಉತ್ತರ: ಯೆಹೋವ. ಈತನು ಯೇಸುವಿನ ತಂದೆ, ಶಾಶ್ವತ ದೇವರು, ಸೃಷ್ಟಿಕರ್ತ, ಸರ್ವಶಕ್ತ.

ಬೈಬಲ್‌ ಏನು ಹೇಳುತ್ತದೆ:

“ನಾವು ನಿಮಗಾಗಿ ಪ್ರಾರ್ಥನೆ ಮಾಡುವಾಗೆಲ್ಲ ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯಾದ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇವೆ.”—ಕೊಲೊಸ್ಸೆ 1:3.

“ಯೆಹೋವನೇ, ನಮ್ಮ ದೇವರೇ, ನೀನು ಮಹಿಮೆ, ಗೌರವ ಮತ್ತು ಶಕ್ತಿಯನ್ನು ಪಡೆಯಲು ಯೋಗ್ಯನಾಗಿದ್ದೀ; ಏಕೆಂದರೆ ಎಲ್ಲವನ್ನೂ ನೀನೇ ಸೃಷ್ಟಿಸಿದಿ.”—ಪ್ರಕಟನೆ 4:11.

ರೋಮನ್ನರಿಗೆ 10:13; 1 ತಿಮೊಥೆಯ 1:17 ನ್ನು ಸಹ ನೋಡಿ.

2 ಪ್ರಶ್ನೆ: ಯೇಸು ಕ್ರಿಸ್ತ ಯಾರು?

ಉತ್ತರ: ದೇವರ ಮೊದಲನೇ ಮಗ. ಆತನು ದೇವರಿಂದ ಸೃಷ್ಟಿಸಲ್ಪಟ್ಟನು, ಹಾಗಾಗಿ ಆತನಿಗೆ ಆದಿ ಇದೆ. ಆತನು ದೇವರಿಗೆ ಅಧೀನನಾಗಿದ್ದಾನೆ ಮತ್ತು ದೇವರ ಚಿತ್ತ ಮಾಡಲು ಸದಾ ಸಿದ್ಧನಾಗಿದ್ದಾನೆ.

ಬೈಬಲ್‌ ಏನು ಹೇಳುತ್ತದೆ:

“ತಂದೆಯು ನನಗಿಂತಲೂ ದೊಡ್ಡವನು.”—ಯೋಹಾನ 14:28.

“[ಯೇಸು] ಅದೃಶ್ಯನಾದ ದೇವರ ಪ್ರತಿರೂಪನೂ ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರನೂ ಆಗಿದ್ದಾನೆ.”—ಕೊಲೊಸ್ಸೆ 1:15.

ಮತ್ತಾಯ 26:39; 1 ಕೊರಿಂಥ 15:28 ನ್ನು ಸಹ ನೋಡಿ.

3 ಪ್ರಶ್ನೆ: ಪವಿತ್ರಾತ್ಮ ಎಂದರೇನು?

ಉತ್ತರ: ದೇವರು ತನ್ನ ಚಿತ್ತವನ್ನು ಮಾಡಲು ಉಪಯೋಗಿಸುವ ಶಕ್ತಿಯೇ ಪವಿತ್ರಾತ್ಮ. ಅದು ವ್ಯಕ್ತಿಯಲ್ಲ. ಏಕೆಂದರೆ ಜನರು ಪವಿತ್ರಾತ್ಮ ಪಡೆದುಕೊಂಡು ಅದರಿಂದ ಬಲಗೊಳ್ಳುವರು.

ಬೈಬಲ್‌ ಏನು ಹೇಳುತ್ತದೆ:

‘ಎಲಿಸಬೇತಳು ಮರಿಯಳ ವಂದನೆಯನ್ನು ಕೇಳಿಸಿಕೊಳ್ಳುತ್ತಲೇ ಅವಳ ಗರ್ಭದಲ್ಲಿದ್ದ ಶಿಶು ಜಿಗಿಯಿತು; ಎಲಿಸಬೇತಳು ಪವಿತ್ರಾತ್ಮಭರಿತಳಾದಳು.’—ಲೂಕ 1:41.

‘ಪವಿತ್ರಾತ್ಮವು ನಿಮ್ಮ ಮೇಲೆ ಬರಲು ನೀವು ಬಲವನ್ನು ಹೊಂದುವಿರಿ.’—ಅಪೊಸ್ತಲರ ಕಾರ್ಯಗಳು 1:8.

ಆದಿಕಾಂಡ 1:2; ಅಪೊಸ್ತಲರ ಕಾರ್ಯಗಳು 2:1-4; 10:38 ನ್ನು ಸಹ ನೋಡಿ.

4 ಪ್ರಶ್ನೆ: ದೇವರ ರಾಜ್ಯ ಎಂದರೇನು?

ಉತ್ತರ: ಸ್ವರ್ಗದಲ್ಲಿರುವ ದೇವರ ಸರ್ಕಾರವೇ ದೇವರ ರಾಜ್ಯ. ಯೇಸು ಆ ರಾಜ್ಯದ ರಾಜ. ಈ ರಾಜ್ಯ ದೇವರ ಚಿತ್ತ ಇಡೀ ಭೂಮಿಯ ಮೇಲೆ ನೆರವೇರುವಂತೆ ಮಾಡುತ್ತದೆ.

ಬೈಬಲ್‌ ಏನು ಹೇಳುತ್ತದೆ:

“ಏಳನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಸ್ವರ್ಗದಲ್ಲಿ ಮಹಾ ಧ್ವನಿಗಳು ಉಂಟಾಗಿ, ‘ಲೋಕದ ರಾಜ್ಯವು ಖಂಡಿತವಾಗಿ ನಮ್ಮ ಕರ್ತನ ಮತ್ತು ಆತನ ಕ್ರಿಸ್ತನ ರಾಜ್ಯವಾಗಿ ಪರಿಣಮಿಸಿತು; ಆತನು ಸದಾಸರ್ವದಾ ರಾಜನಾಗಿ ಆಳುವನು’ ಎಂದು ಹೇಳಿದವು.”—ಪ್ರಕಟನೆ 11:15.

ದಾನಿಯೇಲ 2:44; ಮತ್ತಾಯ 6:9, 10 ನ್ನು ಸಹ ನೋಡಿ.

5 ಪ್ರಶ್ನೆ: ಒಳ್ಳೆಯ ಜನರೆಲ್ಲರೂ ಸ್ವರ್ಗಕ್ಕೆ ಹೋಗುತ್ತಾರಾ?

ಉತ್ತರ: ಇಲ್ಲ. “ಚಿಕ್ಕ ಹಿಂಡು” ಎಂದು ಕರೆಯಲ್ಪಡುವ ನಂಬಿಗಸ್ತರ ಒಂದು ನಿರ್ದಿಷ್ಟ ಗುಂಪು ಮಾತ್ರ ಸ್ವರ್ಗಕ್ಕೆ ಹೋಗುತ್ತದೆ. ಇವರನ್ನು ದೇವರು ಆರಿಸುತ್ತಾನೆ. ಇವರು ಯೇಸುವಿನೊಂದಿಗೆ ರಾಜರಾಗಿ ಮಾನವರನ್ನು ಆಳುವರು.

ಬೈಬಲ್‌ ಏನು ಹೇಳುತ್ತದೆ:

“ಚಿಕ್ಕ ಹಿಂಡೇ, ಭಯಪಡಬೇಡ, ಏಕೆಂದರೆ ನಿಮಗೆ ರಾಜ್ಯವನ್ನು ಕೊಡುವುದಕ್ಕೆ ನಿಮ್ಮ ತಂದೆಯು ಒಪ್ಪಿಗೆ ಕೊಟ್ಟಿದ್ದಾನೆ.”—ಲೂಕ 12:32.

“ಅವರು ದೇವರ ಮತ್ತು ಕ್ರಿಸ್ತನ ಯಾಜಕರಾಗಿರುವರು ಮತ್ತು ಅವನೊಂದಿಗೆ ಆ ಸಾವಿರ ವರ್ಷ ರಾಜರಾಗಿ ಆಳುವರು.”—ಪ್ರಕಟನೆ 20:6.

ಪ್ರಕಟನೆ 14:1, 3 ನ್ನು ಸಹ ನೋಡಿ.

6 ಪ್ರಶ್ನೆ: ಯಾವ ಉದ್ದೇಶದಿಂದ ದೇವರು ಭೂಮಿಯನ್ನು ಮತ್ತು ಮನುಷ್ಯರನ್ನು ಸೃಷ್ಟಿಸಿದ?

ಉತ್ತರ: ದೇವರ ರಾಜ್ಯದ ಆಳ್ವಿಕೆಯ ಕೆಳಗೆ ಇಡೀ ಭೂಮಿಯೂ ಒಂದು ಸುಂದರ ತೋಟವಾಗುತ್ತದೆ. ನಂಬಿಗಸ್ತ ಮಾನವರು ಯಾವುದೇ ಕಾಯಿಲೆ ಬೀಳದೆ, ನೆಮ್ಮದಿಯಿಂದ ಸಾವಿಲ್ಲದೆ ಸಂತೋಷವಾಗಿ ಬದುಕುವರು.

ಬೈಬಲ್‌ ಏನು ಹೇಳುತ್ತದೆ:

“ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.”—ಕೀರ್ತನೆ 37:10, 11.

“ಆತನು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು; ಇನ್ನು ಮರಣವಿರುವುದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ. ಮೊದಲಿದ್ದ ಸಂಗತಿಗಳು ಗತಿಸಿಹೋಗಿವೆ.”—ಪ್ರಕಟನೆ 21:3, 4.

ಕೀರ್ತನೆ 37:29; 2 ಪೇತ್ರ 3:13 ನ್ನು ಸಹ ನೋಡಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ