ಜ್ಞಾಪಕಾಚರಣೆಯ ಮರುಜ್ಞಾಪನಗಳು
ಈ ವರ್ಷದ ಜ್ಞಾಪಕಾಚರಣೆಯು ಏಪ್ರಿಲ್ 16ರ ಬುಧವಾರದಂದು ಆಚರಿಸಲ್ಪಡುವುದು. ಹಿರಿಯರು ಈ ಕೆಳಕಂಡ ವಿಷಯಗಳಿಗೆ ಗಮನವನ್ನು ಕೊಡಬೇಕು:
◼ ಈ ಕೂಟಕ್ಕಾಗಿ ಸಮಯವನ್ನು ನಿಗದಿಪಡಿಸುವಾಗ, ಸೂರ್ಯಾಸ್ತಮಾನಕ್ಕಿಂತ ಮುಂಚೆ ಕುರುಹುಗಳು ದಾಟಿಸಲ್ಪಡಬಾರದು ಎಂಬುದನ್ನು ಖಚಿತಪಡಿಸಿಕೊಳ್ಳಿರಿ.
◼ ಭಾಷಣಕರ್ತನನ್ನು ಸೇರಿಸಿ, ಪ್ರತಿಯೊಬ್ಬರಿಗೂ ಆಚರಣೆಯ ಸರಿಯಾದ ಸಮಯ ಮತ್ತು ಸ್ಥಳದ ಕುರಿತು ತಿಳಿಸಬೇಕು.
◼ ಸರಿಯಾದ ರೀತಿಯ ರೊಟ್ಟಿ ಮತ್ತು ದ್ರಾಕ್ಷಾರಸವನ್ನು ಪಡೆದು, ಸಿದ್ಧವಾಗಿಡಬೇಕು.—ಮಾರ್ಚ್ 1, 1985ರ ಕಾವಲಿನಬುರುಜು ಪತ್ರಿಕೆಯ 21ನೆಯ ಪುಟವನ್ನು ನೋಡಿರಿ.
◼ ತಟ್ಟೆಗಳು, ಲೋಟಗಳು, ಮತ್ತು ಯೋಗ್ಯವಾದ ಮೇಜು ಹಾಗೂ ಮೇಜಿನ ಬಟ್ಟೆಯನ್ನು ಸಭಾಗೃಹಕ್ಕೆ ತಂದು, ಅದರ ಸ್ಥಾನದಲ್ಲಿ ಮುಂಚಿತವಾಗಿಯೇ ಇಡಬೇಕು.
◼ ರಾಜ್ಯ ಸಭಾಗೃಹವನ್ನು ಅಥವಾ ಕೂಟವನ್ನು ನಡೆಸುವ ಬೇರೆ ಸ್ಥಳವನ್ನು ಮುಂಚಿತವಾಗಿಯೇ ಚೆನ್ನಾಗಿ ಶುಚಿಮಾಡಬೇಕು.
◼ ಅಟೆಂಡೆಂಟರನ್ನು ಮತ್ತು ಕುರುಹುಗಳನ್ನು ದಾಟಿಸುವವರನ್ನು ಆಯ್ಕೆಮಾಡಿ, ಅವರ ಕೆಲಸಗಳ ಬಗ್ಗೆ, ಅನುಸರಿಸಬೇಕಾದ ಸೂಕ್ತವಾದ ಕಾರ್ಯವಿಧಾನದ ಬಗ್ಗೆ ಮತ್ತು ಘನತೆಯುಳ್ಳ ಉಡುಪನ್ನು ಧರಿಸುವ ಹಾಗೂ ಕೇಶಾಲಂಕಾರವನ್ನು ಮಾಡುವ ಅಗತ್ಯದ ಕುರಿತಾಗಿ ಮುಂಚಿತವಾಗಿಯೇ ಅವರಿಗೆ ಹೇಳಬೇಕು.
◼ ಅಶಕ್ತರೂ, ಅಲ್ಲಿ ಉಪಸ್ಥಿತರಿರಲು ಅಸಮರ್ಥರೂ ಆಗಿರುವ ಅಭಿಷಿಕ್ತರಿಗೆ ಕುರುಹುಗಳನ್ನು ಕೊಡಲು ಏರ್ಪಾಡುಗಳನ್ನು ಮಾಡಬೇಕು.
◼ ಒಂದಕ್ಕಿಂತ ಹೆಚ್ಚಿನ ಸಭೆಗಳು ಒಂದೇ ಸಭಾಗೃಹವನ್ನು ಉಪಯೋಗಿಸುವಲ್ಲಿ, ಸಭೆಗಳ ಮಧ್ಯೆ ಒಳ್ಳೆಯ ಸಹಕಾರವಿರಬೇಕು. ಇದು ಲಾಬಿಯಲ್ಲಿ ಅಥವಾ ಪ್ರವೇಶದ್ವಾರದಲ್ಲಿ, ಸಾರ್ವಜನಿಕ ಫುಟ್ಪಾತ್ಗಳಲ್ಲಿ ಮತ್ತು ಪಾರ್ಕಿಂಗ್ ಸ್ಥಳಗಳಲ್ಲಿ ಅನಾವಶ್ಯಕ ಜನಸಂದಣಿಯನ್ನು ತಪ್ಪಿಸುವುದು.