ಬೈಬಲಿನಲ್ಲಿರುವ ರತ್ನಗಳು | ಮತ್ತಾಯ 12-13
ಗೋದಿ ಮತ್ತು ಕಳೆಗಳ ದೃಷ್ಟಾಂತ
ಯೇಸು ಗೋದಿ ವರ್ಗಕ್ಕೆ ಸೇರಿದ ಎಲ್ಲಾ ಅಭಿಷಿಕ್ತ ಕ್ರೈಸ್ತರನ್ನು ಹೇಗೆ ಮತ್ತು ಯಾವಾಗ ಮಾನವಕುಲದಿಂದ ಬೇರ್ಪಡಿಸುವನು ಎಂದು ತೋರಿಸಲು ಅವನು ಗೋದಿ ಮತ್ತು ಕಳೆಗಳ ದೃಷ್ಟಾಂತವನ್ನು ಉಪಯೋಗಿಸಿದನು. ಈ ಕೆಲಸ ಕ್ರಿ.ಶ. 33ರಲ್ಲಿ ಆರಂಭವಾಯಿತು.
‘ಒಬ್ಬ ಮನುಷ್ಯ ತನ್ನ ಹೊಲದಲ್ಲಿ ಒಳ್ಳೇ ಬೀಜವನ್ನು ಬಿತ್ತಿದನು’
ಬಿತ್ತುವವನು: ಯೇಸು ಕ್ರಿಸ್ತ
ಒಳ್ಳೇ ಬೀಜ ಬಿತ್ತನೆ: ಯೇಸುವಿನ ಶಿಷ್ಯರನ್ನು ಪವಿತ್ರಾತ್ಮದಿಂದ ಅಭಿಷೇಕಿಸಿದ್ದು
ಹೊಲ: ಲೋಕವೆಂಬ ಮಾನವಕುಲ
“ಜನರು ನಿದ್ರೆಮಾಡುತ್ತಿದ್ದಾಗ ಅವನ ವೈರಿಯು ಬಂದು ಗೋದಿಯ ಮಧ್ಯೆ ಕಳೆಯನ್ನು ಬಿತ್ತಿ ಹೋದನು”
ವೈರಿ: ಸೈತಾನ
ಜನರು ನಿದ್ರೆಮಾಡುತ್ತಿದ್ದ ಸಮಯ: ಅಪೊಸ್ತಲರ ಮರಣ
“ಕೊಯ್ಲಿನ ವರೆಗೆ ಎರಡೂ ಒಟ್ಟಿಗೆ ಬೆಳೆಯಲಿ”
ಗೋದಿ: ಅಭಿಷಿಕ್ತ ಕ್ರೈಸ್ತರು
ಕಳೆಗಳು: ನಕಲಿ ಕ್ರೈಸ್ತರು
‘ಮೊದಲು ಕಳೆಗಳನ್ನು ಒಟ್ಟುಗೂಡಿಸಿ, ನಂತರ ಗೋದಿಯನ್ನು ಕಣಜಕ್ಕೆ ತುಂಬಿಸಿ’
ಆಳುಗಳು/ಕೊಯ್ಯುವವರು: ದೇವದೂತರು
ಕಳೆಗಳ ಒಟ್ಟುಗೂಡಿಸುವುದು: ನಕಲಿ ಕ್ರೈಸ್ತರನ್ನು ಅಭಿಷಿಕ್ತ ಕ್ರೈಸ್ತರಿಂದ ಬೇರ್ಪಡಿಸುವುದು
ಕಣಜಕ್ಕೆ ತುಂಬಿಸುವುದು: ಅಭಿಷಿಕ್ತ ಕ್ರೈಸ್ತರನ್ನು ಪುನಃಸ್ಥಾಪಿಸಲಾದ ಸಭೆಯಲ್ಲಿ ಒಟ್ಟುಗೂಡಿಸುವುದು
ಕೊಯ್ಲಿನ ಕಾಲ ಆರಂಭವಾದಾಗ ಸತ್ಯ ಕ್ರೈಸ್ತರನ್ನು ಯಾವುದು ನಕಲಿ ಕ್ರೈಸ್ತರಿಂದ ಬೇರ್ಪಡಿಸಿತು?
ಈ ದೃಷ್ಟಾಂತವನ್ನು ಅರ್ಥಮಾಡಿಕೊಳ್ಳುವುದರಿಂದ ನನಗೆ ಯಾವ ಪ್ರಯೋಜನವಿದೆ?