ಪಾದಟಿಪ್ಪಣಿ
c ಆ ಗಂಡಸರು ನಾಜೀರರ ಹರಕೆಯನ್ನ ಮಾಡಿದ್ರು ಅಂತ ಪಂಡಿತರು ಹೇಳ್ತಾರೆ. (ಅರ. 6:1-21) ಮೋಶೆಯ ನಿಯಮ ಪುಸ್ತಕನೇ ರದ್ದಾಗಿರುವಾಗ ಅದ್ರಲ್ಲಿ ಹೇಳಿರೋ ನಾಜೀರರ ಹರಕೆನೂ ರದ್ದಾಗಿರುತ್ತೆ ಅಂತ ಪೌಲನಿಗೆ ಗೊತ್ತಿತ್ತು. ಆದ್ರೂ ಈ ಹರಕೆಯನ್ನ ತೀರಿಸೋದು ತಪ್ಪಲ್ಲ ಅಂತ ಪೌಲನಿಗೆ ಅನಿಸಿರಬೇಕು. ಅದಕ್ಕೆ ಅವನು ಅವ್ರ ಜೊತೆ ಹೋಗಿ ಅವ್ರ ಖರ್ಚನ್ನ ನೋಡ್ಕೊಂಡಿದ್ರಲ್ಲಿ ಏನೂ ತಪ್ಪಿಲ್ಲ. ಆದ್ರೆ ನಿರ್ದಿಷ್ಟವಾಗಿ ಅವರು ಯಾವ ರೀತಿಯ ಹರಕೆಯನ್ನ ಮಾಡ್ಕೊಂಡಿದ್ರು ಅಂತ ನಮಗೆ ಗೊತ್ತಿಲ್ಲ. ಆದ್ರೆ ಸಾಮಾನ್ಯವಾಗಿ ನಾಜೀರರು ತಮ್ಮ ಪಾಪ ಶುದ್ಧೀಕರಿಸೋಕೆ ಪ್ರಾಣಿ ಬಲಿ ಕೊಡ್ತಿದ್ರು. ಆದ್ರೆ ಪೌಲ ಇದನ್ನ ಮಾಡೋಕೆ ಖಂಡಿತ ಒಪ್ಪಿರಲ್ಲ. ಯಾಕಂದ್ರೆ ಯೇಸು ತನ್ನ ಪರಿಪೂರ್ಣ ಜೀವವನ್ನ ಬಲಿಯಾಗಿ ಕೊಟ್ಟ ಮೇಲೆ ಯಾವ ಪ್ರಾಣಿ ಬಲಿಗೂ ಪಾಪವನ್ನ ಪರಿಹರಿಸೋಕೆ ಆಗಲ್ಲ. ಆ ಸಮಯದಲ್ಲಿ ಪೌಲ ಏನೆಲ್ಲಾ ಮಾಡಿದ ಅಂತ ಬೈಬಲಲ್ಲಿ ಇಲ್ಲ. ಆದ್ರೆ ಅವನು ತನ್ನ ಮನಸ್ಸಾಕ್ಷಿ ಒಪ್ಪದಿರೋ ಯಾವುದನ್ನೂ ಮಾಡಿರಲ್ಲ ಅಂತ ನಾವು ಗ್ಯಾರೆಂಟಿಯಾಗಿ ಹೇಳಬಹುದು.