ಪಾದಟಿಪ್ಪಣಿ
a ದ ವಾಚ್ಟವರ್ ಪತ್ರಿಕೆಯು ಒಮ್ಮೆ ಈ ಒಳನೋಟವುಳ್ಳ ಹೇಳಿಕೆಯನ್ನು ಮಾಡಿತು: “ನಾವು ಈ ಜೀವನವನ್ನು ವ್ಯರ್ಥ ಕಾರ್ಯಗಳಿಗಾಗಿ ಹಾಳುಮಾಡಬಾರದು . . . ಇರುವುದು ಈ ಜೀವಿತ ಮಾತ್ರ ಆಗಿರುವಲ್ಲಿ, ಪ್ರಾಮುಖ್ಯವಾಗಿರುವ ಯಾವುದೇ ಸಂಗತಿಯಿರುವುದಿಲ್ಲ. ಈ ಜೀವನವು, ಗಾಳಿಯಲ್ಲಿ ಎಸೆಯಲ್ಪಟ್ಟಿದ್ದು, ಪುನಃ ಬೇಗನೆ ನೆಲಕ್ಕೆ ಬೀಳುವ ಒಂದು ಚೆಂಡಿನಂತಿದೆ. ಅದು ದಾಟಿಹೋಗುವ ಒಂದು ನೆರಳು, ಬಾಡಿಹೋಗುವ ಒಂದು ಹೂವು, ಕತ್ತರಿಸಲ್ಪಡುವ ಮತ್ತು ಬೇಗನೆ ಒಣಗಿಹೋಗುವ ಹುಲ್ಲಿನ ಗರಿಯಾಗಿದೆ. . . . ನಿತ್ಯತೆಯ ತಕ್ಕಡಿಗಳಲ್ಲಿ ನಮ್ಮ ಆಯುಷ್ಯವು ನಿರ್ಲಕ್ಷಿಸಲು ಯೋಗ್ಯವಾದ ಧೂಳಿನ ಕಣವಾಗಿದೆ. ಸಮಯದ ಪ್ರವಾಹದಲ್ಲಿ ಅದು ನೀರಿನ ಒಂದು ತುಂಬು ಹನಿಯೂ ಅಲ್ಲ. ನಿಶ್ಚಯವಾಗಿ [ಸೊಲೊಮೋನನು] ಜೀವನದ ಅನೇಕ ಮಾನವೀಯ ಚಿಂತೆಗಳು ಮತ್ತು ಚಟುವಟಿಕೆಗಳನ್ನು ಪುನರ್ವಿಮರ್ಶಿಸಿ, ಅವುಗಳನ್ನು ವ್ಯರ್ಥವೆಂದು ಸರಿಯಾಗಿ ಘೋಷಿಸಿದ್ದಾನೆ. ನಾವು ಎಷ್ಟು ಬೇಗನೆ ಸಾಯುತ್ತೇವೆಂದರೆ, ನಾವು ಎಂದೂ ಹುಟ್ಟದಿದ್ದರೆ ಒಳ್ಳೇದಿತ್ತು. ಬಂದು ಹೋಗುವ ನೂರಾರು ಕೋಟಿ ಮಂದಿಯಲ್ಲಿ ಒಬ್ಬರಾಗಿದ್ದು, ನಾವು ಎಂದಾದರೂ ಇಲ್ಲಿದ್ದೆವು ಎಂಬುದನ್ನು ತಿಳಿಯುವವರು ಕೆಲವೇ ಮಂದಿ. ಈ ನೋಟವು ಸಿನಿಕವಲ್ಲ ಅಥವಾ ಖಿನ್ನಕರವಲ್ಲ ಅಥವಾ ಉತ್ಸಾಹರಹಿತವಲ್ಲ ಅಥವಾ ಅಸ್ವಸ್ಥ ಭಾವನೆಯಿಂದ ಕೂಡಿದಂಥದ್ದಲ್ಲ. ಇರುವುದು ಈ ಜೀವಿತ ಮಾತ್ರವಾಗಿರುವಲ್ಲಿ, ಅದು ಸತ್ಯವಾಗಿದೆ, ಒಂದು ವಾಸ್ತವಿಕತೆ, ಒಂದು ವ್ಯಾವಹಾರಿಕ ನೋಟವಾಗಿದೆ.”—ಆಗಸ್ಟ್ 1, 1957, ಪುಟ 472.