ಪಾದಟಿಪ್ಪಣಿ
a “ಲೋಕದ ಆದಿ” ಎಂಬ ಪದಕ್ಕೆ ಮೂಲಭಾಷೆಯಲ್ಲಿ ಉಪಯೋಗಿಸಿರುವ ಪದ “ಬೀಜ ಬಿತ್ತು” ಅನ್ನೋ ಅರ್ಥ ಕೊಡುತ್ತೆ. ಅದರರ್ಥ ಸಂತಾನೋತ್ಪತ್ತಿ. ಹಾಗಾದರೆ ಆ ಪದ ಮಾನವಕುಲದ ಮೊದಲ ಸಂತಾನಕ್ಕೆ ಸೂಚಿಸುತ್ತೆ. ಆದರೆ ಯೇಸು, “ಲೋಕದ ಆದಿ” ಅಂತ ಹೇಬೆಲನಿಗೆ ಯಾಕೆ ಸೂಚಿಸಿ ಮಾತಾಡಿದನು? ಆದಾಮನ ಮೊದಲ ಮಗ ಕಾಯಿನನಲ್ಲವೇ! ಕಾಯಿನ ಬೇಕುಬೇಕೆಂದೇ ಯೆಹೋವ ದೇವರಿಗೆ ಇಷ್ಟವಾಗದ ಕೆಲಸಗಳನ್ನು ಮಾಡುತ್ತಿದ್ದ. ಹಾಗಾಗಿ ಅವನ ಹೆತ್ತವರಂತೆಯೇ ಕಾಯಿನ ಸಹ ಪುನರುತ್ಥಾನ ಮತ್ತು ವಿಮೋಚನೆಗೆ ಪಾತ್ರನಾಗದೆ ಇದ್ದಿರಬಹುದು.