ಪಾದಟಿಪ್ಪಣಿ
a ಭಯ ಇದ್ರೆ ನಾವು ಅಪಾಯದಿಂದ ದೂರ ಇರ್ತೀವಿ. ಹಾಗಂತ ನಾವು ಎಲ್ಲದಕ್ಕೂ ಭಯಪಡಬಾರದು. ಯಾಕಂದ್ರೆ ಈ ಭಯದಿಂದ ಕೆಲವೊಮ್ಮೆ ತಪ್ಪು ನಿರ್ಧಾರಗಳನ್ನ ಮಾಡೋ ಹಾಗೆ ಸೈತಾನ ಮಾಡಿಬಿಡ್ತಾನೆ. ಹಾಗಾಗಿ ಆ ಭಯನ ಮೆಟ್ಟಿನಿಲ್ಲೋಕೆ ನಾವು ತುಂಬ ಪ್ರಯತ್ನ ಮಾಡಬೇಕು.ಯೆಹೋವ ನಮ್ಮ ಜೊತೆ ಇದ್ದಾನೆ, ನಮ್ಮನ್ನ ಪ್ರೀತಿಸ್ತಾನೆ ಅಂತ ನಾವು ಅರ್ಥಮಾಡಿಕೊಂಡ್ರೆ ಭಯನ ಹೊಡೆದು ಓಡಿಸೋಕೆ ಆಗುತ್ತೆ. ಇದನ್ನೇ ನಾವು ಈ ಲೇಖನದಲ್ಲಿ ನೋಡೋಣ ಬನ್ನಿ.