ಪಾದಟಿಪ್ಪಣಿ
a ಪದ ವಿವರಣೆ: ಮತ್ತಾಯ 26:41ರಲ್ಲಿ ಯೇಸು “ಮನಸ್ಸಿದೆ” ಅಂತ ಹೇಳಿರೋದು ಸರಿಯಾಗಿರೋದನ್ನ ಮಾಡೋಕೆ ನಮಗಿರೋ ಆಸೆಯನ್ನ ಸೂಚಿಸುತ್ತೆ. “ದೇಹಕ್ಕೆ” ಅಂತ ಹೇಳಿರೋದು ನಾವು ಅಪರಿಪೂರ್ಣರಾಗಿರೋದ್ರಿಂದ ಪಾಪಿಗಳಾಗಿರೋದ್ರಿಂದ ನಾವು ಹೆಚ್ಚಾಗಿ ತಪ್ಪಾಗಿ ಯೋಚಿಸ್ತೀವಿ, ನಡ್ಕೊಳ್ತೀವಿ ಅನ್ನೋದನ್ನ ಸೂಚಿಸುತ್ತೆ. ಹಾಗಾಗಿ ಸರಿಯಾಗಿರೋದನ್ನೇ ಮಾಡೋ ಆಸೆ ನಮಗಿದ್ರೂ ಹುಷಾರಾಗಿಲ್ಲ ಅಂದ್ರೆ ತಪ್ಪಾದ ಆಸೆಗೆ ಬಲಿಯಾಗ್ತೀವಿ ಮತ್ತು ಪಾಪ ಮಾಡಿಬಿಡ್ತೀವಿ.