ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lfb ಪಾಠ 52 ಪು. 126-ಪು. 127 ಪ್ಯಾ. 1
  • ಯೆಹೋವನ ಅಗ್ನಿಮಯ ಸೈನ್ಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನ ಅಗ್ನಿಮಯ ಸೈನ್ಯ
  • ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಅನುರೂಪ ಮಾಹಿತಿ
  • ಎಲೀಷನು ಅಗ್ನಿಮಯ ರಥರಥಾಶ್ವಗಳನ್ನು ನೋಡಿದನು! ನೀವು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • ಸ್ವತ್ಯಾಗ ಮತ್ತು ನಿಷ್ಠೆಯ ಒಂದು ಮಾದರಿ
    ಕಾವಲಿನಬುರುಜು—1997
  • “ಯೆಹೋವನ ದಿನ”ವನ್ನು ಯಾರು ಪಾರಾಗುವರು?
    ಕಾವಲಿನಬುರುಜು—1997
ಇನ್ನಷ್ಟು
ಬೈಬಲ್‌ ನಮಗೆ ಕಲಿಸುವ ಪಾಠಗಳು
lfb ಪಾಠ 52 ಪು. 126-ಪು. 127 ಪ್ಯಾ. 1
ಎಲೀಷ ಮತ್ತು ಅವನ ಸೇವಕನನ್ನು ಸುತ್ತುವರಿದಿರುವ ಸಿರಿಯದ ಸೈನ್ಯ

ಪಾಠ 52

ಯೆಹೋವನ ಅಗ್ನಿಮಯ ಸೈನ್ಯ

ಸಿರಿಯದ ರಾಜನಾದ ಬೆನ್ಹದದನು ಇಸ್ರಾಯೇಲಿನ ಮೇಲೆ ಆಗಾಗ ಯುದ್ಧಕ್ಕೆ ಬರುತ್ತಿದ್ದ. ಆದರೆ ಎಲೀಷ ಅವನ ಒಳಸಂಚಿನ ಬಗ್ಗೆ ಇಸ್ರಾಯೇಲಿನ ರಾಜನಿಗೆ ಮೊದಲೇ ತಿಳಿಸುತ್ತಿದ್ದದ್ದರಿಂದ ಅವನು ಬೆನ್ಹದದನ ಕೈಯಿಂದ ತಪ್ಪಿಸಿಕೊಳ್ಳುತ್ತಿದ್ದ. ಆದ್ದರಿಂದ ಬೆನ್ಹದದ ಎಲೀಷನನ್ನು ಹಿಡಿಸಲು ನಿರ್ಧರಿಸಿದ. ಎಲೀಷ ದೋತಾನಿನಲ್ಲಿದ್ದಾನೆ ಎಂದು ಗೊತ್ತಾದಾಗ ಅವನನ್ನು ಹಿಡಿದುಕೊಂಡು ಬರಲು ತನ್ನ ಸೈನ್ಯವನ್ನು ಕಳುಹಿಸಿದ.

ಸಿರಿಯದ ಸೈನ್ಯ ರಾತ್ರಿ ದೋತಾನಿಗೆ ಬಂದು ಮುಟ್ಟಿತು. ಮಾರನೇ ದಿನ ಬೆಳಗ್ಗೆ ಎಲೀಷನ ಸೇವಕ ಹೊರಗೆ ಬಂದಾಗ ಇಡೀ ಪಟ್ಟಣವನ್ನು ಸಿರಿಯದ ಸೈನ್ಯ ಮುತ್ತಿಗೆ ಹಾಕಿತ್ತು. ಅವನು ಭಯದಿಂದ ಕೂಗುತ್ತಾ ‘ಎಲೀಷ, ನಾವೀಗ ಏನು ಮಾಡೋಣ?’ ಅಂದ. ಆಗ ಎಲೀಷ ‘ಅವ್ರ ಜೊತೆ ಇರುವವ್ರಿಗಿಂತ ನಮ್ಮ ಜೊತೆ ಇರುವವ್ರೇ ಜಾಸ್ತಿ’ ಎಂದ. ಅದೇ ಕ್ಷಣದಲ್ಲಿ ಬೆಟ್ಟದ ಸುತ್ತ ನಿಂತಿದ್ದ ಅಗ್ನಿಮಯ ಯುದ್ಧರಥಗಳು ಮತ್ತು ಕುದುರೆಗಳು ಸೇವಕನಿಗೆ ಕಾಣುವಂತೆ ಯೆಹೋವನು ಮಾಡಿದನು.

ಎಲೀಷ ಮತ್ತು ಅವನ ಸೇವಕನನ್ನು ಸುತ್ತುವರಿದಿರುವ ಸಿರಿಯದ ಸೈನ್ಯ

ಸಿರಿಯದ ಸೈನಿಕರು ಎಲೀಷನನ್ನು ಹಿಡಿಯಲು ಬಂದಾಗ ಅವನು ‘ಯೆಹೋವನೇ, ದಯವಿಟ್ಟು ಇವರನ್ನು ಕುರುಡರಾಗೋ ತರ ಮಾಡು’ ಎಂದು ಪ್ರಾರ್ಥಿಸಿದ. ಆಗ ಅವರಿಗೆ ಕಣ್ಣು ಕಾಣಿಸುತ್ತಿದ್ದರೂ ಸಹ ತಾವು ಎಲ್ಲಿದ್ದೇವೆ ಅಂತ ಗೊತ್ತಾಗಲಿಲ್ಲ. ಎಲೀಷ ಸೈನಿಕರಿಗೆ ‘ನೀವು ದಾರಿ ತಪ್ಪಿ ಬಂದಿದ್ದೀರ. ನನ್ನ ಜೊತೆ ಬನ್ನಿ. ನೀವು ಹುಡುಕ್ತಿರೋ ಮನುಷ್ಯನ ಹತ್ರ ನಾನು ಕರ್ಕೊಂಡು ಹೋಗ್ತೀನಿ’ ಅಂದ. ಅವರು ಎಲೀಷನ ಜೊತೆಗೆ ಇಸ್ರಾಯೇಲಿನ ರಾಜನಿದ್ದ ಸಮಾರ್ಯಕ್ಕೆ ಬಂದರು.

ಅವರಿಗೆ ತಾವು ಎಲ್ಲಿದ್ದೇವೆ ಎಂದು ಗೊತ್ತಾಗುವಷ್ಟರಲ್ಲಿ ಕಾಲ ಮೀರಿ ಹೋಗಿತ್ತು. ‘ನಾನು ಇವರನ್ನ ಸಾಯಿಸ್ಲಾ?’ ಎಂದು ಇಸ್ರಾಯೇಲಿನ ರಾಜ ಎಲೀಷನಿಗೆ ಕೇಳಿದ. ಆಗ ಎಲೀಷ ಇದೇ ಒಳ್ಳೇ ಅವಕಾಶ ಅಂತ ತನ್ನನ್ನು ಹಿಡಿಯೋಕೆ ಬಂದವರ ಮೇಲೆ ಸೇಡು ತೀರಿಸಿಕೊಂಡನಾ? ಇಲ್ಲ. ಅವನು ‘ಇವರನ್ನ ಸಾಯಿಸಬೇಡ. ಇವರಿಗೆ ಊಟ ಕೊಡು. ಆಮೇಲೆ ಅವರನ್ನು ಕಳುಹಿಸು’ ಎಂದ. ಆದ್ದರಿಂದ ರಾಜ ಅವರಿಗಾಗಿ ಒಂದು ದೊಡ್ಡ ಔತಣವನ್ನು ಮಾಡಿಸಿ ನಂತರ ಮನೆಗೆ ಕಳುಹಿಸಿದ.

ಸಿರಿಯದ ಸೈನಿಕರು ಸಮಾರ್ಯದಲ್ಲಿ ಊಟ ಮಾಡುತ್ತಿದ್ದಾರೆ

“ದೇವರ ಇಷ್ಟದ ಪ್ರಕಾರ ನಾವು ಏನೇ ಕೇಳಿದ್ರೂ ದೇವರು ಅದನ್ನ ಕೊಡ್ತಾನೆ ಅನ್ನೋ ನಂಬಿಕೆ ನಮಗಿದೆ.”—1 ಯೋಹಾನ 5:14

ಪ್ರಶ್ನೆಗಳು: ಯೆಹೋವನು ಎಲೀಷ ಮತ್ತು ಅವನ ಸೇವಕನನ್ನು ಹೇಗೆ ಕಾಪಾಡಿದ? ಯೆಹೋವನು ನಿಮ್ಮನ್ನೂ ಕಾಪಾಡುತ್ತಾನೆ ಎಂದು ನಿಮಗೆ ಅನಿಸುತ್ತಾ?

2 ಅರಸು 6:8-24

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ