ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lfb ಪಾಠ 84 ಪು. 196-ಪು. 197 ಪ್ಯಾ. 4
  • ಯೇಸು ನೀರಿನ ಮೇಲೆ ನಡೆಯುತ್ತಾನೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೇಸು ನೀರಿನ ಮೇಲೆ ನಡೆಯುತ್ತಾನೆ
  • ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಅನುರೂಪ ಮಾಹಿತಿ
  • ಯೇಸು ನಮ್ಮನ್ನು ಸಂರಕ್ಷಿಸುವನು
    ಮಹಾ ಬೋಧಕನಿಂದ ಕಲಿಯೋಣ
  • ಒಂದು ದ್ವೀಪದಲ್ಲಿ ಹಡಗು ಒಡೆದುಹೋಗಿದೆ
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಅಪೇಕ್ಷಿತ ಮನುಷ್ಯಾತೀತ ಪ್ರಭು
    ಅತ್ಯಂತ ಮಹಾನ್‌ ಪುರುಷ
  • ಅಪೇಕ್ಷಿತ ಮನುಷ್ಯಾತೀತ ಪ್ರಭು
    ಕಾವಲಿನಬುರುಜು—1990
ಇನ್ನಷ್ಟು
ಬೈಬಲ್‌ ನಮಗೆ ಕಲಿಸುವ ಪಾಠಗಳು
lfb ಪಾಠ 84 ಪು. 196-ಪು. 197 ಪ್ಯಾ. 4
ಯೇಸು ನೀರಿನ ಮೇಲೆ ನಡೆಯುತ್ತಾ ಪೇತ್ರನಿಗೆ ತನ್ನ ಹತ್ತಿರ ಬರುವಂತೆ ಹೇಳುತ್ತಿದ್ದಾನೆ

ಪಾಠ 84

ಯೇಸು ನೀರಿನ ಮೇಲೆ ನಡೆಯುತ್ತಾನೆ

ಯೇಸುವಿಗೆ ಕಾಯಿಲೆ ಬಿದ್ದವರನ್ನು ವಾಸಿ ಮಾಡುವ ಮತ್ತು ಸತ್ತವರನ್ನು ಮತ್ತೆ ಬದುಕಿಸುವ ಶಕ್ತಿ ಮಾತ್ರ ಅಲ್ಲ, ಗಾಳಿ-ಮಳೆಯನ್ನು ನಿಯಂತ್ರಿಸುವ ಶಕ್ತಿ ಕೂಡ ಇತ್ತು. ಯೇಸು ಬೆಟ್ಟಕ್ಕೆ ಹೋಗಿ ಪ್ರಾರ್ಥಿಸಿದ ನಂತರ ಗಲಿಲಾಯದ ಸಮುದ್ರದಲ್ಲಿ ಬಿರುಗಾಳಿ ಬಂದಿದ್ದನ್ನು ನೋಡಿದನು. ಅವನ ಅಪೊಸ್ತಲರು ಬಿರುಗಾಳಿಗೆ ಸಿಕ್ಕಿ ದೋಣಿಯನ್ನು ನಡೆಸಲು ಕಷ್ಟಪಡುತ್ತಿದ್ದರು. ಆಗ ಯೇಸು ಸಮುದ್ರಕ್ಕೆ ಬಂದು ನೀರಿನ ಮೇಲೆ ನಡೆಯುತ್ತಾ ದೋಣಿ ಇದ್ದಲ್ಲಿಗೆ ಹೋದನು. ಯಾರೋ ಒಬ್ಬರು ನೀರಿನ ಮೇಲೆ ನಡೆದುಕೊಂಡು ಬರುತ್ತಿರುವುದನ್ನು ನೋಡಿ ಅಪೊಸ್ತಲರಿಗೆ ತುಂಬಾ ಭಯ ಆಯಿತು. ಆಗ ಯೇಸು, ‘ನಾನೇ, ಭಯಪಡಬೇಡಿ’ ಅಂದನು.

ಯೇಸು ನೀರಿನ ಮೇಲೆ ನಡೆಯುತ್ತಾ ಪೇತ್ರನಿಗೆ ತನ್ನ ಹತ್ತಿರ ಬರುವಂತೆ ಹೇಳುತ್ತಿದ್ದಾನೆ

ಆಗ ಪೇತ್ರನು, ‘ಸ್ವಾಮಿ, ಅದು ನೀನೇ ಆಗಿದ್ರೆ ಅಲ್ಲಿಗೆ ಬರೋಕೆ ನಂಗೆ ಅಪ್ಪಣೆಕೊಡು’ ಅಂದನು. ಅದಕ್ಕೆ ಯೇಸು, ‘ಬಾ’ ಅಂದನು. ಕೂಡಲೇ ಪೇತ್ರ ಬಿರುಗಾಳಿ ಬೀಸುತ್ತಾ ಇದ್ದರೂ ದೋಣಿಯಿಂದ ಇಳಿದು ನೀರಿನ ಮೇಲೆ ನಡೆಯುತ್ತಾ ಹೋದನು. ಆದರೆ ಯೇಸುವಿನ ಹತ್ತಿರ ಹೋಗುತ್ತಿದ್ದಂತೆ ಪೇತ್ರ ಬಿರುಗಾಳಿಯನ್ನು ನೋಡಿದ್ದರಿಂದ ಭಯಪಟ್ಟನು. ಅವನು ನೀರಲ್ಲಿ ಮುಳುಗಲು ಆರಂಭಿಸಿದನು. ತಕ್ಷಣ ಪೇತ್ರ, ‘ಸ್ವಾಮಿ ನನ್ನನ್ನ ಕಾಪಾಡು’ ಎಂದು ಕೂಗಿದನು. ಯೇಸು ಅವನ ಕೈ ಹಿಡಿದು ‘ನೀನು ಯಾಕೆ ಸಂಶಯಪಟ್ಟೆ? ನಿನ್ನ ನಂಬಿಕೆಗೆ ಏನಾಯ್ತು?’ ಅಂದನು.

ನಂತರ ಯೇಸು ಮತ್ತು ಪೇತ್ರ ದೋಣಿ ಹತ್ತಿದರು. ತಕ್ಷಣ ಬಿರುಗಾಳಿ ನಿಂತುಹೋಯಿತು. ಅದನ್ನು ನೋಡಿದ ಅಪೊಸ್ತಲರಿಗೆ ಹೇಗನಿಸಿತು ಗೊತ್ತಾ? ಅವರು ಯೇಸುವಿಗೆ ‘ನೀನು ನಿಜವಾಗ್ಲೂ ದೇವರ ಮಗ’ ಅಂದರು.

ಯೇಸು ಪ್ರಕೃತಿಯನ್ನು ನಿಯಂತ್ರಿಸಿದ್ದು ಇದೊಂದೇ ಸಲ ಅಲ್ಲ. ಇನ್ನೊಂದು ಸಲ, ಯೇಸು ಮತ್ತು ಅಪೊಸ್ತಲರು ಸಮುದ್ರದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುತ್ತಿದ್ದರು. ಯೇಸು ದೋಣಿಯ ಹಿಂಭಾಗದಲ್ಲಿ ನಿದ್ರೆ ಹೋದನು. ಆಗ ಒಂದು ದೊಡ್ಡ ಬಿರುಗಾಳಿ ಬಂತು. ಅಲೆಗಳು ಬಂದು ದೋಣಿಗೆ ಬಡಿದು ದೋಣಿಯಲ್ಲೆಲ್ಲಾ ನೀರು ತುಂಬಿಹೋಯಿತು. ಆಗ ಅಪೊಸ್ತಲರು ‘ಗುರು, ಕಾಪಾಡು, ನಾವು ಸತ್ತು ಹೋಗ್ತೀವಿ’ ಅಂತ ಜೋರಾಗಿ ಕೂಗುತ್ತಾ ಯೇಸುವನ್ನು ಎಬ್ಬಿಸಿದರು. ಯೇಸು ಎದ್ದು ಸಮುದ್ರಕ್ಕೆ ‘ಸುಮ್ಮನಿರು!’ ಅಂದನು. ಕೂಡಲೇ, ಬಿರುಗಾಳಿ ನಿಂತು, ಸಮುದ್ರ ಶಾಂತವಾಯಿತು. ನಂತರ ಯೇಸು ಶಿಷ್ಯರಿಗೆ, ‘ದೇವರ ಮೇಲೆ ನಿಮಗಿದ್ದ ನಂಬಿಕೆ ಎಲ್ಲಿ ಹೋಯ್ತು?’ ಅಂದನು. ‘ಗಾಳಿ, ಸಮುದ್ರನೂ ಇವನ ಮಾತು ಕೇಳುತ್ತಲ್ಲಾ’ ಅಂತ ಶಿಷ್ಯರು ತಮ್ಮೊಳಗೆ ಮಾತಾಡಿಕೊಂಡರು. ಯೇಸುವಿನ ಮೇಲೆ ಸಂಪೂರ್ಣ ಭರವಸೆ ಇಟ್ಟರೆ ತಾವು ಯಾವುದರ ಬಗ್ಗೆನೂ ಭಯಪಡಬೇಕಾಗಿಲ್ಲ ಅಂತ ಅಪೊಸ್ತಲರಿಗೆ ಇದರಿಂದ ಗೊತ್ತಾಯಿತು.

“ನಾನು ಬದುಕಿದ್ದಾಗಲೇ ಯೆಹೋವನ ಒಳ್ಳೇತನ ನೋಡ್ತೀನಿ ಅಂತ ನನಗೆ ನಂಬಿಕೆ ಇಲ್ಲದಿದ್ರೆ ನಾನು ಈಗ ಎಲ್ಲಿ ಇರ್ತಿದ್ದೆ?”—ಕೀರ್ತನೆ 27:13

ಪ್ರಶ್ನೆಗಳು: ಪೇತ್ರ ಯಾಕೆ ಮುಳುಗಲು ಆರಂಭಿಸಿದ? ಅಪೊಸ್ತಲರು ಯೇಸುವಿನಿಂದ ಏನನ್ನು ಕಲಿತರು?

ಮತ್ತಾಯ 8:23-27; 14:23-34; ಮಾರ್ಕ 4:35-41; 6:45-52; ಲೂಕ 8:22-25; ಯೋಹಾನ 6:16-21

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ