ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lfb ಪಾಠ 29 ಪು. 74-ಪು. 75 ಪ್ಯಾ. 2
  • ಯೆಹೋವನು ಯೆಹೋಶುವನನ್ನು ಆರಿಸಿದನು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನು ಯೆಹೋಶುವನನ್ನು ಆರಿಸಿದನು
  • ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಅನುರೂಪ ಮಾಹಿತಿ
  • ಯೆಹೋಶುವನು ನಾಯಕನಾಗುತ್ತಾನೆ
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಯೆಹೋಶುವನು ಜ್ಞಾಪಕದಲ್ಲಿಟ್ಟುಕೊಂಡ ವಿಷಯಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
  • ಯೆಹೋಶುವ 1:9—“ಸ್ಥಿರಚಿತ್ತನಾಗಿರು, ಧೈರ್ಯದಿಂದಿರು”
    ಬೈಬಲ್‌ ವಚನಗಳ ವಿವರಣೆ
  • ಯೆಹೋಶುವ ಪುಸ್ತಕದ ಮುಖ್ಯಾಂಶಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
ಇನ್ನಷ್ಟು
ಬೈಬಲ್‌ ನಮಗೆ ಕಲಿಸುವ ಪಾಠಗಳು
lfb ಪಾಠ 29 ಪು. 74-ಪು. 75 ಪ್ಯಾ. 2
ಪುರೋಹಿತರು ಒಪ್ಪಂದದ ಮಂಜೂಷವನ್ನು ಹೊತ್ತುಕೊಂಡು ಯೋರ್ದನ್‌ ನದಿಗೆ ಹೋಗುತ್ತಿದ್ದಾರೆ

ಪಾಠ 29

ಯೆಹೋವನು ಯೆಹೋಶುವನನ್ನು ಆರಿಸಿದನು

ನಿಯಮ ಪುಸ್ತಕವನ್ನು ಓದುತ್ತಿರುವ ಯೆಹೋಶುವ

ಮೋಶೆ ಇಸ್ರಾಯೇಲ್ಯರನ್ನು ಅನೇಕ ವರ್ಷಗಳವರೆಗೆ ಮುನ್ನಡೆಸಿದನು. ಅವನಿಗೆ ತುಂಬ ವಯಸ್ಸಾಗಿತ್ತು. ಆಗ ಯೆಹೋವನು ಮೋಶೆಗೆ ‘ನೀನು ಇಸ್ರಾಯೇಲ್ಯರನ್ನು ಮಾತು ಕೊಡೋ ದೇಶಕ್ಕೆ ನಡೆಸುವುದಿಲ್ಲ. ಆದರೆ ನೀನು ಆ ದೇಶವನ್ನು ನೋಡಬಹುದು’ ಎಂದನು. ಅದಕ್ಕೆ ಮೋಶೆ ಇಸ್ರಾಯೇಲ್ಯರನ್ನು ಮುನ್ನಡೆಸಲು ಒಬ್ಬ ಹೊಸ ನಾಯಕನನ್ನು ಆರಿಸಲು ಯೆಹೋವನನ್ನು ಕೇಳಿಕೊಂಡನು. ಆಗ ಯೆಹೋವನು ‘ಯೆಹೋಶುವನ ಹತ್ತಿರ ಹೋಗು. ನಾನು ಅವನನ್ನು ನಾಯಕನಾಗಿ ಆರಿಸಿದ್ದೇನೆ ಎಂದು ಅವನಿಗೆ ಹೇಳು’ ಅಂದನು.

ಮೋಶೆ ಇಸ್ರಾಯೇಲ್ಯರ ಹತ್ತಿರ ಬಂದು ‘ನನ್ನ ಸಾವು ಹತ್ತಿರವಿದೆ. ಹಾಗಾಗಿ ನಿಮ್ಮನ್ನು ಮಾತು ಕೊಟ್ಟ ದೇಶಕ್ಕೆ ನಡೆಸಲು ಯೆಹೋವನು ಯೆಹೋಶುವನನ್ನು ಆರಿಸಿದ್ದಾನೆ’ ಎಂದು ಹೇಳಿದನು. ಆಮೇಲೆ ಮೋಶೆ ಯೆಹೋಶುವನಿಗೆ ‘ಹೆದರಬೇಡ. ಯೆಹೋವನು ನಿನಗೆ ಸಹಾಯ ಮಾಡುತ್ತಾನೆ’ ಎಂದನು. ಇದಾದ ನಂತರ ಮೋಶೆ ನೆಬೋ ಬೆಟ್ಟವನ್ನು ಹತ್ತಿದನು. ಅಲ್ಲಿ ಯೆಹೋವನು ಅವನಿಗೆ ಅಬ್ರಹಾಮ, ಇಸಾಕ ಮತ್ತು ಯಾಕೋಬನಿಗೆ ಮಾತು ಕೊಟ್ಟ ದೇಶವನ್ನು ತೋರಿಸಿದನು. ಮೋಶೆ ಸಾಯುವಾಗ ಅವನಿಗೆ 120 ವರ್ಷ ವಯಸ್ಸಾಗಿತ್ತು.

ಮೋಶೆ ಪುರೋಹಿತರ ಮತ್ತು ಇತರರ ಮುಂದೆ ಯೆಹೋಶುವನನ್ನು ನಾಯಕನನ್ನಾಗಿ ನೇಮಿಸುತ್ತಿದ್ದಾನೆ

ಯೆಹೋವನು ಯೆಹೋಶುವನಿಗೆ ‘ಯೋರ್ದನ್‌ ನದಿಯನ್ನು ದಾಟಿ ಕಾನಾನಿಗೆ ಹೋಗು. ನಾನು ಮೋಶೆ ಜೊತೆ ಇದ್ದ ಹಾಗೆ ನಿನ್ನ ಜೊತೆನೂ ಇರ್ತಿನಿ. ತಪ್ಪದೇ ಪ್ರತಿದಿನ ನಿಯಮ ಪುಸ್ತಕವನ್ನು ಓದು. ಹೆದರಬೇಡ, ಧೈರ್ಯವಾಗಿರು. ನಾನು ನಿನಗೆ ಆಜ್ಞಾಪಿಸಿದ್ದನ್ನೆಲ್ಲಾ ಮಾಡು’ ಅಂದನು.

ಯೆಹೋಶುವ ಯೆರಿಕೋ ಪಟ್ಟಣಕ್ಕೆ ಇಬ್ಬರು ಗೂಢಚಾರರನ್ನು ಕಳುಹಿಸಿದ. ಅಲ್ಲಿ ಏನಾಯಿತು ಎಂದು ಮುಂದಿನ ಕಥೆಯಲ್ಲಿ ಕಲಿಯುತ್ತೇವೆ. ಅವರು ವಾಪಸ್ಸು ಬಂದು ‘ಕಾನಾನಿಗೆ ಹೋಗಲು ಇದೇ ಸರಿಯಾದ ಸಮಯ’ ಎಂದು ಹೇಳಿದರು. ಮಾರನೇ ದಿನ ಯೆಹೋಶುವ ಇಸ್ರಾಯೇಲ್ಯರಿಗೆ ಗುಡಾರಗಳನ್ನು ಬಿಚ್ಚಿ ಸಿದ್ಧರಾಗಲು ಹೇಳಿದನು. ಮೊದಲು ಮಂಜೂಷವನ್ನು ಹೊತ್ತುಕೊಂಡಿರುವ ಪುರೋಹಿತರನ್ನು ಯೋರ್ದನ್‌ ನದಿಯ ಹತ್ತಿರ ಕಳುಹಿಸಿದನು. ನದಿ ತುಂಬಿ ಹರಿಯುತ್ತಿತ್ತು. ಆದರೆ ಪುರೋಹಿತರು ನೀರಿನಲ್ಲಿ ಕಾಲಿಡುತ್ತಿದ್ದ ಹಾಗೆ ನದಿ ಹರಿಯುವುದು ನಿಂತು ಹೋಗಿ ಒಣನೆಲ ಕಾಣಿಸಿತು! ಪುರೋಹಿತರು ನದಿಯ ಮಧ್ಯದ ವರೆಗೆ ನಡೆದುಕೊಂಡು ಹೋಗಿ ಇಸ್ರಾಯೇಲ್ಯರೆಲ್ಲರೂ ಆಚೆ ದಡವನ್ನು ಸೇರುವ ತನಕ ಅಲ್ಲೇ ನಿಂತಿದ್ದರು. ಈ ಅದ್ಭುತವನ್ನು ನೋಡಿದಾಗ ಯೆಹೋವನು ಕೆಂಪು ಸಮುದ್ರವನ್ನು ಎರಡು ಭಾಗ ಮಾಡಿದ್ದು ಇಸ್ರಾಯೇಲ್ಯರಿಗೆ ಜ್ಞಾಪಕ ಬಂದಿರಬಹುದು. ಅಲ್ವಾ?

ಅನೇಕ ವರ್ಷಗಳ ನಂತರ ಕೊನೆಗೂ ಇಸ್ರಾಯೇಲ್ಯರು ಮಾತು ಕೊಟ್ಟ ದೇಶಕ್ಕೆ ಬಂದರು. ಇಲ್ಲಿ ಅವರು ತಮಗಾಗಿ ಮನೆಯನ್ನು ಹಾಗೂ ಪಟ್ಟಣಗಳನ್ನು ಕಟ್ಟಬಹುದಿತ್ತು. ಹೊಲ ಗದ್ದೆಗಳನ್ನು, ದ್ರಾಕ್ಷಿತೋಟಗಳನ್ನು ಮಾಡಿ ಮರಗಿಡಗಳನ್ನು ನೆಟ್ಟರು. ಕಾನಾನ್‌ ನಿಜಕ್ಕೂ ಹಾಲು ಜೇನು ಹರಿಯುತ್ತಿದ್ದ ದೇಶವಾಗಿತ್ತು. ಅಂದರೆ ಆ ದೇಶ ತುಂಬಾ ಸಮೃದ್ಧವಾಗಿತ್ತು.

“ಯೆಹೋವ ಯಾವಾಗ್ಲೂ ನಿಮ್ಮನ್ನ ಮುನ್ನಡೆಸ್ತಾನೆ, ಬತ್ತಿ ಹೋಗಿರೋ ದೇಶದಲ್ಲೂ ಆತನು ನಿಮ್ಮನ್ನ ತೃಪ್ತಿಪಡಿಸ್ತಾನೆ.”—ಯೆಶಾಯ 58:11

ಪ್ರಶ್ನೆಗಳು: ಮೋಶೆ ಸತ್ತ ನಂತರ ಇಸ್ರಾಯೇಲ್ಯರನ್ನು ಯಾರು ನಡೆಸಿದರು? ಯೋರ್ದನ್‌ ನದಿಯ ಹತ್ತಿರ ಏನಾಯಿತು?

ಅರಣ್ಯಕಾಂಡ 27:12-23; ಧರ್ಮೋಪದೇಶಕಾಂಡ 31:1-8; 34:1-12; ಯೆಹೋಶುವ 1:1–3:17

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ