-
ವಿವೇಕವನ್ನು ಸಂಪಾದಿಸಿಕೊಂಡು, ಶಿಸ್ತನ್ನು ಸ್ವೀಕರಿಸಿಕಾವಲಿನಬುರುಜು—1999 | ಸೆಪ್ಟೆಂಬರ್ 15
-
-
ಜ್ಞಾನೋಕ್ತಿ ಪುಸ್ತಕದ ಉದ್ದೇಶವನ್ನು ಅದರ ಆರಂಭದ ಮಾತುಗಳಲ್ಲಿ ವಿವರಿಸಲಾಗಿದೆ: “ಇಸ್ರಾಯೇಲ್ಯರ ಅರಸನಾಗಿದ್ದ ದಾವೀದನ ಮಗನಾದ ಸೊಲೊಮೋನನ ಜ್ಞಾನೋಕ್ತಿಗಳು. ಇವುಗಳಿಂದ ಜನರು ಜ್ಞಾನವನ್ನೂ [“ವಿವೇಕವನ್ನೂ,” NW] ಶಿಕ್ಷೆಯನ್ನೂ [“ಶಿಸ್ತನ್ನೂ,” NW] ಪಡೆದು ಬುದ್ಧಿವಾದಗಳನ್ನು ಗ್ರಹಿಸಿ ವಿವೇಕಮಾರ್ಗದಲ್ಲಿ ಅಂದರೆ ನೀತಿನ್ಯಾಯಧರ್ಮಗಳಲ್ಲಿ ಶಿಕ್ಷಿತರಾಗುವರು. ಇವು ಮೂಢರಿಗೆ [“ಅನನುಭವಸ್ಥರಿಗೆ,” NW] ಜಾಣತನವನ್ನೂ ಯೌವನಸ್ಥರಿಗೆ ತಿಳುವಳಿಕೆಯನ್ನೂ ಬುದ್ಧಿಯನ್ನೂ ಉಂಟುಮಾಡುವವು.” (ಓರೆ ಅಕ್ಷರಗಳು ನಮ್ಮವು.)—ಜ್ಞಾನೋಕ್ತಿ 1:1-4.
-
-
ವಿವೇಕವನ್ನು ಸಂಪಾದಿಸಿಕೊಂಡು, ಶಿಸ್ತನ್ನು ಸ್ವೀಕರಿಸಿಕಾವಲಿನಬುರುಜು—1999 | ಸೆಪ್ಟೆಂಬರ್ 15
-
-
ಜಾಣರು ದೂರದೃಷ್ಟಿಯುಳ್ಳವರು—ಸುಲಭವಾಗಿ ಮರುಳಾಗುವವರಾಗಿರುವುದಿಲ್ಲ. (ಜ್ಞಾನೋಕ್ತಿ 14:15) ಅವರು ಕೇಡನ್ನು ಮುನ್ನೋಡಿ, ಅದಕ್ಕಾಗಿ ಸಿದ್ಧರಾಗಲು ಶಕ್ತರಾಗಿರುತ್ತಾರೆ. ಮತ್ತು ವಿವೇಕವು, ಜೀವನದಲ್ಲಿ ಉದ್ದೇಶಪೂರ್ವಕ ನಿರ್ದೇಶನವನ್ನು ಕೊಡುವ ಹಿತಕರವಾದ ಯೋಚನೆಗಳನ್ನು ಮತ್ತು ವಿಚಾರಗಳನ್ನು ನಿರೂಪಿಸುವಂತೆ ನಮ್ಮನ್ನು ಶಕ್ತಗೊಳಿಸುತ್ತದೆ. ಬೈಬಲಿನ ಜ್ಞಾನೋಕ್ತಿಗಳ ಅಭ್ಯಾಸವು ನಿಜವಾಗಿಯೂ ಪ್ರತಿಫಲದಾಯಕವಾಗಿದೆ, ಯಾಕಂದರೆ ನಾವು ವಿವೇಕ ಮತ್ತು ಶಿಸ್ತನ್ನು ತಿಳಿದುಕೊಳ್ಳುವಂತೆ ಅವು ದಾಖಲಿಸಲ್ಪಟ್ಟಿವೆ. ಜ್ಞಾನೋಕ್ತಿಗಳಿಗೆ ಗಮನವನ್ನು ಕೊಡುವ “ಅನನುಭವಸ್ಥರು” ಸಹ ಜಾಣತನವನ್ನು ಪಡೆದುಕೊಳ್ಳುವರು ಮತ್ತು ‘ಯೌವನಸ್ಥರು’ ಜ್ಞಾನ ಮತ್ತು ಯೋಚನಾ ಸಾಮರ್ಥ್ಯವನ್ನು ಪಡೆದುಕೊಳ್ಳುವರು.
-