ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಹೋವನಿಗಾಗಿ ಕಾದುಕೊಂಡಿರಿ
    ಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು I
    • 13. ಯೆಹೂದದ ಮುಖಂಡರು ಯಾವುದರಲ್ಲಿ ಭರವಸೆಯಿಡುತ್ತಾರೆ, ಮತ್ತು ಇಂತಹ ಭರವಸೆಯು ನ್ಯಾಯವಾದದ್ದೊ?

      13 ತದನಂತರ ಯೆಶಾಯನು ಸವಿವರವಾಗಿ ಹೇಳುವುದು: “ನೀವು​—⁠ಬೇಡವೇ ಬೇಡ, ಕುದುರೆಗಳ ಮೇಲೆ ಓಡುವೆವು ಎಂದುಕೊಂಡದರಿಂದ ಓಡೇ ಹೋಗುವಿರಿ; ನೀವು​—⁠ವೇಗವಾಗಿ ಸವಾರಿಮಾಡುವೆವು ಎಂದುಕೊಂಡದರಿಂದ ವೇಗಿಗಳೇ ನಿಮ್ಮನ್ನು ಅಟ್ಟಿಬಿಡುವರು.” (ಯೆಶಾಯ 30:16) ಯೆಹೋವನ ಬದಲಿಗೆ ವೇಗವಾದ ಕುದುರೆಗಳೇ ತಮಗೆ ರಕ್ಷಣೆಯನ್ನು ನೀಡುವವೆಂದು ಯೆಹೂದದ ನಿವಾಸಿಗಳು ನೆನಸುತ್ತಾರೆ. (ಧರ್ಮೋಪದೇಶಕಾಂಡ 17:16; ಜ್ಞಾನೋಕ್ತಿ 21:31) ಆದರೆ ಅವರ ಭರವಸೆಯು ಕೇವಲ ಒಂದು ಭ್ರಮೆಯಾಗಿರುವುದು. ಏಕೆಂದರೆ ಬೇಗನೆ ಅವರ ವೈರಿಗಳು ಅವರನ್ನು ಅಟ್ಟಿಕೊಂಡು ಬರುವರು. ದೊಡ್ಡ ಸೈನ್ಯವಿದ್ದರೂ ಯಾವ ಪ್ರಯೋಜನವೂ ಆಗಲಾರದು. “ಒಬ್ಬನ ಬೆದರಿಕೆಗೆ ಸಾವಿರ ಜನರು ಓಡುವರು; ಐವರು ಬೆದರಿಸುವದರಿಂದ ನೀವು ಓಡಿಹೋಗುವಿರಿ.” (ಯೆಶಾಯ 30:17ಎ) ಬೆರಳೆಣಿಕೆಯಷ್ಟು ವೈರಿಗಳು ಕೂಗಿಕೊಂಡರೆ ಸಾಕು, ಯೆಹೂದದ ಸೈನ್ಯವು ದಿಗಿಲುಗೊಂಡು ಓಡಿಹೋಗುವುದು.b ಆಮೇಲೆ, ಶೇಷವರ್ಗವು ಮಾತ್ರ ಉಳಿಯುವುದು. ಅದು “ಬೆಟ್ಟದ ಶಿಖರದಲ್ಲಿನ ಸ್ತಂಭದ ಹಾಗೂ ಗುಡ್ಡದ ಮೇಗಣ ಕಂಬದಂತೆಯೂ [ಒಂಟಿಯಾಗಿ] ಉಳಿಯು”ವುದು. (ಯೆಶಾಯ 30:17ಬಿ) ಪ್ರವಾದನೆಯಲ್ಲಿ ತಿಳಿಸಲ್ಪಟ್ಟಂತೆಯೇ, ಸಾ.ಶ.ಪೂ. 607ರಲ್ಲಿ ಯೆರೂಸಲೇಮು ನಾಶವಾದಾಗ, ಒಂದು ಶೇಷವರ್ಗವು ಮಾತ್ರ ಉಳಿಯಿತು.​—⁠ಯೆರೆಮೀಯ 25:​8-11.

  • ಯೆಹೋವನಿಗಾಗಿ ಕಾದುಕೊಂಡಿರಿ
    ಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು I
    • a Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ