-
ಯೆಹೋವನಿಗಾಗಿ ಕಾದುಕೊಂಡಿರಿಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು I
-
-
13. ಯೆಹೂದದ ಮುಖಂಡರು ಯಾವುದರಲ್ಲಿ ಭರವಸೆಯಿಡುತ್ತಾರೆ, ಮತ್ತು ಇಂತಹ ಭರವಸೆಯು ನ್ಯಾಯವಾದದ್ದೊ?
13 ತದನಂತರ ಯೆಶಾಯನು ಸವಿವರವಾಗಿ ಹೇಳುವುದು: “ನೀವು—ಬೇಡವೇ ಬೇಡ, ಕುದುರೆಗಳ ಮೇಲೆ ಓಡುವೆವು ಎಂದುಕೊಂಡದರಿಂದ ಓಡೇ ಹೋಗುವಿರಿ; ನೀವು—ವೇಗವಾಗಿ ಸವಾರಿಮಾಡುವೆವು ಎಂದುಕೊಂಡದರಿಂದ ವೇಗಿಗಳೇ ನಿಮ್ಮನ್ನು ಅಟ್ಟಿಬಿಡುವರು.” (ಯೆಶಾಯ 30:16) ಯೆಹೋವನ ಬದಲಿಗೆ ವೇಗವಾದ ಕುದುರೆಗಳೇ ತಮಗೆ ರಕ್ಷಣೆಯನ್ನು ನೀಡುವವೆಂದು ಯೆಹೂದದ ನಿವಾಸಿಗಳು ನೆನಸುತ್ತಾರೆ. (ಧರ್ಮೋಪದೇಶಕಾಂಡ 17:16; ಜ್ಞಾನೋಕ್ತಿ 21:31) ಆದರೆ ಅವರ ಭರವಸೆಯು ಕೇವಲ ಒಂದು ಭ್ರಮೆಯಾಗಿರುವುದು. ಏಕೆಂದರೆ ಬೇಗನೆ ಅವರ ವೈರಿಗಳು ಅವರನ್ನು ಅಟ್ಟಿಕೊಂಡು ಬರುವರು. ದೊಡ್ಡ ಸೈನ್ಯವಿದ್ದರೂ ಯಾವ ಪ್ರಯೋಜನವೂ ಆಗಲಾರದು. “ಒಬ್ಬನ ಬೆದರಿಕೆಗೆ ಸಾವಿರ ಜನರು ಓಡುವರು; ಐವರು ಬೆದರಿಸುವದರಿಂದ ನೀವು ಓಡಿಹೋಗುವಿರಿ.” (ಯೆಶಾಯ 30:17ಎ) ಬೆರಳೆಣಿಕೆಯಷ್ಟು ವೈರಿಗಳು ಕೂಗಿಕೊಂಡರೆ ಸಾಕು, ಯೆಹೂದದ ಸೈನ್ಯವು ದಿಗಿಲುಗೊಂಡು ಓಡಿಹೋಗುವುದು.b ಆಮೇಲೆ, ಶೇಷವರ್ಗವು ಮಾತ್ರ ಉಳಿಯುವುದು. ಅದು “ಬೆಟ್ಟದ ಶಿಖರದಲ್ಲಿನ ಸ್ತಂಭದ ಹಾಗೂ ಗುಡ್ಡದ ಮೇಗಣ ಕಂಬದಂತೆಯೂ [ಒಂಟಿಯಾಗಿ] ಉಳಿಯು”ವುದು. (ಯೆಶಾಯ 30:17ಬಿ) ಪ್ರವಾದನೆಯಲ್ಲಿ ತಿಳಿಸಲ್ಪಟ್ಟಂತೆಯೇ, ಸಾ.ಶ.ಪೂ. 607ರಲ್ಲಿ ಯೆರೂಸಲೇಮು ನಾಶವಾದಾಗ, ಒಂದು ಶೇಷವರ್ಗವು ಮಾತ್ರ ಉಳಿಯಿತು.—ಯೆರೆಮೀಯ 25:8-11.
-
-
ಯೆಹೋವನಿಗಾಗಿ ಕಾದುಕೊಂಡಿರಿಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು I
-
-
a Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.
-