ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಸಿಂಹಗಳ ಬಾಯಿಂದ ರಕ್ಷಿಸಲ್ಪಟ್ಟದ್ದು!
    ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ!
    • 7. ಮುಖ್ಯಾಧಿಕಾರಿಗಳು ಹಾಗೂ ದೇಶಾಧಿಪತಿಗಳು ಅರಸನ ಬಳಿ ಯಾವ ಪ್ರಸ್ತಾಪವನ್ನು ಮಾಡಿದರು, ಮತ್ತು ಅದನ್ನು ಯಾವ ರೀತಿಯಲ್ಲಿ ಮಾಡಿದರು?

      7 ಮುಖ್ಯಾಧಿಕಾರಿಗಳು ಹಾಗೂ ದೇಶಾಧಿಪತಿಗಳ ಒಂದು ತಂಡವೇ ದಾರ್ಯಾವೆಷನ ಸಮ್ಮುಖದಲ್ಲಿ ‘ನೆರೆದುಬಂತು.’ ಇಲ್ಲಿ ಉಪಯೋಗಿಸಲ್ಪಟ್ಟಿರುವ ಅರಮಾಯ ಅಭಿವ್ಯಕ್ತಿಯು, ಉದ್ರೇಕದಿಂದ ಕೂಡಿದ ಕೋಲಾಹಲವನ್ನು ಅರ್ಥೈಸುತ್ತದೆ. ದಾರ್ಯಾವೆಷನ ಮುಂದೆ ತುಂಬ ತುರ್ತಿನ ಸಂಗತಿಯನ್ನು ಪ್ರಸ್ತುತಪಡಿಸಲಿಕ್ಕಾಗಿ ತಾವು ಬಂದಿದ್ದೇವೆ ಎಂಬಂತೆ ಈ ಜನರು ತೋರಿಸಿಕೊಂಡರು ಎಂಬುದು ಸುವ್ಯಕ್ತ. ತಾವು ಇದನ್ನು ನಿಶ್ಚಿತಾಭಿಪ್ರಾಯದಿಂದ ಹಾಗೂ ತತ್‌ಕ್ಷಣವೇ ಗಮನ ಕೊಡುವ ಅಗತ್ಯವುಳ್ಳ ವಿಷಯ ಎಂಬಂತಹ ರೀತಿಯಲ್ಲಿ ಪ್ರಸ್ತುತಪಡಿಸುವಲ್ಲಿ, ಅರಸನು ತಮ್ಮ ಪ್ರಸ್ತಾಪವನ್ನು ಪ್ರಶ್ನಿಸುವ ಸಂಭವವಿರುವುದಿಲ್ಲ ಎಂದು ಅವರು ಯೋಚಿಸಿದ್ದಿರಬಹುದು. ಆದುದರಿಂದ, ಅವರು ಈ ವಿಷಯವನ್ನು ನೇರವಾಗಿ ಹೇಳಿದ್ದು: “ಅರಸನೇ . . . ಯಾವನಾದರೂ ಮೂವತ್ತು ದಿನಗಳ ತನಕ ರಾಜನಾದ ನಿನಗೆ ಹೊರತು ಬೇರೆ ಯಾವ ದೇವರಿಗಾಗಲಿ ಮನುಷ್ಯನಿಗಾಗಲಿ ವಿಜ್ಞಾಪನೆ ಮಾಡಿಕೊಂಡರೆ ಅವನು ಸಿಂಹಗಳ ಗವಿಯಲ್ಲಿ ಹಾಕಲ್ಪಡಬೇಕು ಎಂಬ ಖಂಡಿತ​ನಿಬಂಧನೆಯನ್ನು ರಾಜಾಜ್ಞಾರೂಪವಾಗಿ ವಿಧಿಸುವದು ಒಳ್ಳೇದೆಂದು ರಾಜ್ಯದ ಸಕಲ ಮುಖ್ಯಾಧಿಕಾರಿ ನಾಯಕ ದೇಶಾಧಿಪತಿ ಮಂತ್ರಿ ಈ ಸಂಸ್ಥಾನಾಧ್ಯಕ್ಷರೂ ಆಲೋಚನೆ​ಮಾಡಿಕೊಂಡಿದ್ದಾರೆ.”a​—⁠ದಾನಿಯೇಲ 6:​6, 7.

      8. (ಎ) ಪ್ರಸ್ತಾಪಿಸಲ್ಪಟ್ಟ ನಿಬಂಧನೆಯು ದಾರ್ಯಾವೆಷನ ಮನಸ್ಸಿಗೆ ಏಕೆ ಹಿಡಿಸಿದ್ದಿರಬಹುದು? (ಬಿ) ಮುಖ್ಯಾಧಿಕಾರಿಗಳು ಹಾಗೂ ದೇಶಾಧಿಪತಿಗಳ ನಿಜವಾದ ಹೇತು ಯಾವುದಾಗಿತ್ತು?

      8 ಮೆಸಪೊಟೇಮಿಯದ ಅರಸರನ್ನು ದೇವರೆಂದು ಪರಿಗಣಿಸಿ, ಅವರನ್ನು ಆರಾಧಿಸುವುದು ಸರ್ವಸಾಮಾನ್ಯವಾಗಿತ್ತು ಎಂದು ಐತಿಹಾಸಿಕ ದಾಖಲೆಗಳು ರುಜುಪಡಿಸುತ್ತವೆ. ಆದುದರಿಂದ, ಈ ಪ್ರಸ್ತಾಪವನ್ನು ಕೇಳಿಸಿಕೊಂಡ ದಾರ್ಯಾವೆಷನು, ತನ್ನನ್ನು ತುಂಬ ಗೌರವಿಸಲಾಗುತ್ತಿದೆ ಎಂದು ಭಾವಿಸಿದನು ಎಂಬುದರಲ್ಲಿ ಸಂದೇಹವೇ ಇಲ್ಲ. ಅದರಿಂದಾಗುವ ಲಾಭವನ್ನು ಸಹ ಅವನು ಮನಗಂಡಿದ್ದಿರಬಹುದು. ಬಾಬೆಲಿನಲ್ಲಿ ವಾಸಿಸುತ್ತಿದ್ದವರಿಗೆ, ದಾರ್ಯಾವೆಷನು ವಿದೇಶೀಯನಾಗಿದ್ದನು ಮತ್ತು ಹೊಸಬನಾಗಿದ್ದನು ಎಂಬುದು ನಿಮಗೆ ನೆನಪಿರಲಿ. ಈ ಹೊಸ ನಿಯಮವು ಅವನನ್ನು ಒಬ್ಬ ಅರಸನಾಗಿ ಸ್ಥಾಪಿಸಲು ಸಹಾಯ ಮಾಡಸಾಧ್ಯವಿತ್ತು. ಮತ್ತು ಬಾಬೆಲಿನಲ್ಲಿ ವಾಸಿಸುತ್ತಿದ್ದ ಜನಸಮುದಾಯಗಳು, ಹೊಸ ರಾಜ್ಯಭಾರಕ್ಕೆ ತಮ್ಮ ನಿಷ್ಠೆ ಹಾಗೂ ಬೆಂಬಲವನ್ನು ತೋರಿಸುವಂತೆ ಉತ್ತೇಜಿಸಸಾಧ್ಯವಿತ್ತು. ಆದರೂ, ಈ ನಿಬಂಧನೆಯನ್ನು ಪ್ರಸ್ತಾಪಿಸುವುದರಲ್ಲಿ ಮುಖ್ಯಾಧಿಕಾರಿಗಳು ಹಾಗೂ ದೇಶಾಧಿಪತಿಗಳಿಗೆ ರಾಜನ ಹಿತಕ್ಷೇಮದ ಬಗ್ಗೆ ಯಾವುದೇ ಆಸಕ್ತಿಯಿರಲಿಲ್ಲ. ದಾನಿಯೇಲನನ್ನು ಸಮಸ್ಯೆಯಲ್ಲಿ ಸಿಕ್ಕಿಸುವುದೇ ಅವರ ನಿಜವಾದ ಹೇತುವಾಗಿತ್ತು. ​ಏಕೆಂದರೆ ತೆರೆದ ಕಿಟಕಿ​ಗಳುಳ್ಳ ತನ್ನ ಮಹಡಿಯ ಕೋಣೆಯಲ್ಲಿ ದಿನಕ್ಕೆ ಮೂರು ಬಾರಿ ಪ್ರಾರ್ಥಿಸುವುದು ಅವನ ಪದ್ಧತಿಯಾಗಿತ್ತು ಎಂಬುದು ಅವರಿಗೆ ಗೊತ್ತಿತ್ತು.

      9. ಅಧಿಕಾಂಶ ಯೆಹೂದ್ಯೇತರರಿಗೆ ಹೊಸ ನಿಬಂಧನೆಯು ಏಕೆ ಒಂದು ಸಮಸ್ಯೆಯಾಗಿರಲಿಲ್ಲ?

      9 ಪ್ರಾರ್ಥನೆಯ ಮೇಲಿನ ಈ ನಿರ್ಬಂಧವು, ಬಾಬೆಲಿನಲ್ಲಿರುವ ಎಲ್ಲ ಧಾರ್ಮಿಕ ಸಮುದಾಯಗಳಿಗೆ ಒಂದು ಸಮಸ್ಯೆಯನ್ನು ಉಂಟುಮಾಡಸಾಧ್ಯವಿತ್ತೊ? ಖಂಡಿತವಾಗಿಯೂ ಇಲ್ಲ, ಏಕೆಂದರೆ ಈ ನಿಷೇಧವು ಕೇವಲ ಒಂದು ತಿಂಗಳ ವರೆಗೆ ಮಾತ್ರ ಇರಲಿತ್ತು. ಇದಲ್ಲದೆ, ಕೆಲವು ಯೆಹೂದ್ಯೇತರರು, ಸ್ವಲ್ಪ ಕಾಲಾವಧಿಯ ವರೆಗೆ ತಮ್ಮ ಆರಾಧನೆಯನ್ನು ಮನುಷ್ಯನಿಗೆ ನೀಡುವುದನ್ನು ಒಂದು ಒಪ್ಪಂದದೋಪಾದಿ ಪರಿಗಣಿಸುವ ಸಾಧ್ಯತೆಯಿತ್ತು. ಒಬ್ಬ ಬೈಬಲ್‌ ವಿದ್ವಾಂಸನು ದಾಖಲಿಸಿದ್ದು: “ಜನಾಂಗಗಳ ಅಧಿಕಾಂಶ ಮೂರ್ತಿಪೂಜಕರಿಗೆ, ಅರಸನ ಆರಾಧನೆಯು ಒಂದು ವಿಚಿತ್ರ ಬೇಡಿಕೆಯಾಗಿರಲಿಲ್ಲ; ಆದುದರಿಂದಲೇ, ದೇವರಿಗೆ ಸಲ್ಲತಕ್ಕ ಗೌರವವನ್ನು, ವಿಜೇತನಾಗಿದ್ದ ಮೇದ್ಯಯನಾದ ದಾರ್ಯಾವೆಷನಿಗೆ ಸಲ್ಲಿಸುವಂತೆ ಬಾಬೆಲಿನವನಿಗೆ ಕರೆಕೊಡಲ್ಪಟ್ಟಾಗ, ಅವನು ಈ ಬೇಡಿಕೆಗೆ ಸುಲಭವಾಗಿ ವಿಧೇಯನಾದನು. ಇಂತಹ ಒಂದು ಬೇಡಿಕೆಯನ್ನು ನಿರಾಕರಿಸಿದ್ದು ಯೆಹೂದ್ಯನು ಮಾತ್ರವೇ.”

  • ಸಿಂಹಗಳ ಬಾಯಿಂದ ರಕ್ಷಿಸಲ್ಪಟ್ಟದ್ದು!
    ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ!
    • a ಬಾಬೆಲಿನಲ್ಲಿ “ಸಿಂಹಗಳ ಗವಿ”ಯು ಇತ್ತು ಎಂಬುದು, ಕೆಲವೊಮ್ಮೆ ಪ್ರಾಚ್ಯ ಅರಸರು ತಮ್ಮ ಮೃಗಾಲಯಗಳಲ್ಲಿ ಕಾಡುಮೃಗಗಳನ್ನು ಇಟ್ಟುಕೊಂಡಿದ್ದರು ಎಂದು ತೋರಿಸುವ ಪುರಾತನ ಶಿಲಾಶಾಸನಗಳ ಪುರಾವೆಗಳಿಂದ ಬೆಂಬಲಿಸಲ್ಪಟ್ಟಿದೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ