-
ಕುರಿಗಳಿಗೂ ಆಡುಗಳಿಗೂ ಭವಿಷ್ಯವೇನು?ಕಾವಲಿನಬುರುಜು—1995 | ಅಕ್ಟೋಬರ್ 15
-
-
4. ಕುರಿಗಳ ಮತ್ತು ಆಡುಗಳ ದೃಷ್ಟಾಂತವು ಯೇಸುವಿನ ಕುರಿತು ಆರಂಭಿಕವಾಗಿ ಏನನ್ನುತ್ತದೆ, ಮತ್ತು ಯಾರು ಕೂಡ ದೃಶ್ಯದೊಳಗಡೆ ಬರುತ್ತಾರೆ?
4 “ಮನುಷ್ಯಕುಮಾರನು . . . ಬರುವಾಗ” ಎಂದು ಹೇಳುವ ಮೂಲಕ ಯೇಸುವು ದೃಷ್ಟಾಂತವನ್ನು ಪ್ರಾರಂಭಿಸುತ್ತಾನೆ. “ಮನುಷ್ಯಕುಮಾರನು” ಯಾರೆಂದು ನೀವು ತಿಳಿದಿರುವುದು ಸಂಭವನೀಯ. ಸುವಾರ್ತಾ ಲೇಖಕರು ಆ ಪದವಿನ್ಯಾಸವನ್ನು ಅನೇಕ ವೇಳೆ ಯೇಸುವಿಗೆ ಅನ್ವಯಿಸಿದರು. “ಮನುಷ್ಯಕುಮಾರನಂತಿರುವವನು” ‘ದೊರೆತನವನ್ನೂ ಘನತೆಯನ್ನೂ ರಾಜ್ಯವನ್ನೂ’ ಪಡೆಯಲಿಕ್ಕಾಗಿ ಮಹಾವೃದ್ಧನನ್ನು ಸಮೀಪಿಸುವುದರ ಕುರಿತು ದಾನಿಯೇಲನ ದರ್ಶನವನ್ನು ನಿಸ್ಸಂಶಯವಾಗಿ ಮನಸ್ಸಿನಲ್ಲಿಟ್ಟವನಾಗಿ, ಯೇಸು ತಾನೇ ಹಾಗೆ ಅನ್ವಯಿಸಿಕೊಂಡನು. (ದಾನಿಯೇಲ 7:13, 14; ಮತ್ತಾಯ 26:63, 64; ಮಾರ್ಕ 14:61, 62) ಈ ದೃಷ್ಟಾಂತದಲ್ಲಿ ಯೇಸು ಪ್ರಧಾನನಾಗಿರುವುದಾದರೂ, ಅವನು ಒಬ್ಬನಾಗಿರುವುದಿಲ್ಲ. ಈ ಭಾಷಣದ ಮೊದಲಲ್ಲಿ, ಮತ್ತಾಯ 24:30, 31ರಲ್ಲಿ ಉಲ್ಲೇಖಿಸಿರುವಂತೆ, ಮನುಷ್ಯಕುಮಾರನು ‘ಬಲ ಮತ್ತು ಬಹು ಮಹಿಮೆ’ಯಿಂದ ಬರುವಾಗ, ಅವನ ದೂತರು ಒಂದು ಮಹತ್ವದ ಪಾತ್ರವನ್ನು ವಹಿಸುವರೆಂದು ಅವನು ಹೇಳಿದನು. ಅದೇ ರೀತಿಯಲ್ಲಿ ಕುರಿಗಳ ಮತ್ತು ಆಡುಗಳ ದೃಷ್ಟಾಂತವು ಯೇಸು ತೀರ್ಪು ಕೊಡಲು ‘ತನ್ನ ಮಹಿಮೆಯ ಸಿಂಹಾಸನದಲ್ಲಿ ಕುಳಿತುಕೊಳ್ಳುವಾಗ’ ದೇವದೂತರು ಅವನೊಂದಿಗಿದ್ದರೆಂದು ತೋರಿಸುತ್ತದೆ. (ಹೋಲಿಸಿ ಮತ್ತಾಯ 16:27.) ಆದರೆ ನ್ಯಾಯಾಧೀಶನೂ ದೇವದೂತರೂ ಸ್ವರ್ಗದಲ್ಲಿರುವುದರಿಂದ, ಆ ದೃಷ್ಟಾಂತದಲ್ಲಿ ಮಾನವರನ್ನು ಚರ್ಚಿಸಲಾಗಿದೆಯೆ?
-
-
ಕುರಿಗಳಿಗೂ ಆಡುಗಳಿಗೂ ಭವಿಷ್ಯವೇನು?ಕಾವಲಿನಬುರುಜು—1995 | ಅಕ್ಟೋಬರ್ 15
-
-
ಬಹು ಮಹಿಮೆಯಿಂದ ಬರುತ್ತಾನೆ ಮಹಿಮೆಯಿಂದ ಬಂದು
-