-
ವಿಮೋಚನಾ ಮೌಲ್ಯವು ನಮ್ಮನ್ನು ರಕ್ಷಿಸುವ ವಿಧಕಾವಲಿನಬುರುಜು—2010 | ಆಗಸ್ಟ್ 15
-
-
ದೇವರ ಕ್ರೋಧದಿಂದ ರಕ್ಷಿಸಲ್ಪಟ್ಟದ್ದು
4, 5. ಸದ್ಯದ ದುಷ್ಟ ವಿಷಯಗಳ ವ್ಯವಸ್ಥೆಯ ಮೇಲೆ ದೇವರ ಕ್ರೋಧ ನೆಲೆಗೊಂಡಿದೆ ಎಂಬುದನ್ನು ಯಾವುದು ರುಜುಪಡಿಸುತ್ತದೆ?
4 ಆದಾಮನು ಪಾಪ ಮಾಡಿದಂದಿನಿಂದ ಮಾನವಕುಲದ ಮೇಲೆ ‘ದೇವರ ಕ್ರೋಧವು ನೆಲೆಗೊಂಡಿದೆ’ ಎಂದು ಬೈಬಲ್ ಮತ್ತು ಇತಿಹಾಸದ ಕಟು ನಿಜತ್ವಗಳು ತೋರಿಸುತ್ತವೆ. (ಯೋಹಾನ 3:36) ಯಾವ ಮಾನವನೂ ಕಟ್ಟಕಡೆಗೆ ಮರಣದಿಂದ ಪಾರಾಗಲು ಶಕ್ತನಾಗಿಲ್ಲ ಎಂಬುದೇ ಅದಕ್ಕೆ ಪುರಾವೆ. ಸೈತಾನನ ಪ್ರತಿಸ್ಪರ್ಧಾತ್ಮಕ ಆಳಿಕೆಯು ಇಂದು ನಡಿಯುತ್ತಿರುವ ವಿಪತ್ಕಾರಕ ಪರಿಸ್ಥಿತಿಗಳಿಂದ ಮಾನವಕುಲವನ್ನು ರಕ್ಷಿಸಲು ಪೂರ್ಣ ಅಶಕ್ಯ. ಯಾವುದೇ ಮಾನವ ಸರಕಾರವು ತನ್ನ ಪ್ರಜೆಗಳೆಲ್ಲರ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ಶಕ್ತವಾಗಿಲ್ಲ. (1 ಯೋಹಾ. 5:19) ಆದುದರಿಂದ ಮಾನವಕುಲವು ಯುದ್ಧ, ಅಪರಾಧ ಮತ್ತು ಬಡತನದಿಂದ ಸಂಕಟಪಡುತ್ತಾ ಇದೆ.
-
-
ವಿಮೋಚನಾ ಮೌಲ್ಯವು ನಮ್ಮನ್ನು ರಕ್ಷಿಸುವ ವಿಧಕಾವಲಿನಬುರುಜು—2010 | ಆಗಸ್ಟ್ 15
-
-
7 ಯೇಸು, ‘ಬರಲಿರುವ ದೇವರ ಕ್ರೋಧದಿಂದ ನಮ್ಮನ್ನು ತಪ್ಪಿಸುವವನಾಗಿದ್ದಾನೆ’ ಎಂದು ಅಪೊಸ್ತಲ ಪೌಲನು ಹೇಳಿದ್ದಾನೆ. (1 ಥೆಸ. 1:10) ಯೆಹೋವನ ಕ್ರೋಧದ ಆ ಕೊನೆಯ ಅಭಿವ್ಯಕ್ತಿಯು ಪಶ್ಚಾತ್ತಾಪಪಡದ ಪಾಪಿಗಳ ನಿತ್ಯನಾಶನದಲ್ಲಿ ಅಂತ್ಯಗೊಳ್ಳುವುದು. (2 ಥೆಸ. 1:6-9) ಯಾರು ಪಾರಾಗುವರು? ಬೈಬಲ್ ಹೇಳುವುದು: “ಮಗನಲ್ಲಿ ನಂಬಿಕೆಯಿಡುವವನಿಗೆ ನಿತ್ಯಜೀವ ಉಂಟು; ಮಗನಿಗೆ ಅವಿಧೇಯನಾಗುವವನು ಜೀವವನ್ನು ಕಾಣುವುದಿಲ್ಲ, ಆದರೆ ದೇವರ ಕ್ರೋಧವು ಅವನ ಮೇಲೆ ನೆಲೆಗೊಳ್ಳುತ್ತದೆ.” (ಯೋಹಾ. 3:36) ಹೌದು, ಈ ವಿಷಯಗಳ ವ್ಯವಸ್ಥೆಯು ತನ್ನ ಅಂತ್ಯವನ್ನು ತಲಪುವಾಗ, ಜೀವಂತವಾಗಿದ್ದು ಯೇಸುವಿನಲ್ಲಿ ಮತ್ತು ವಿಮೋಚನಾ ಮೌಲ್ಯದಲ್ಲಿ ನಂಬಿಕೆಯನ್ನು ಇಡುವ ಎಲ್ಲರೂ ದೇವರ ಕ್ರೋಧದ ಕೊನೆಯ ದಿನದ ನಾಶನವನ್ನು ಪಾರಾಗುವರು.
-