ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • “ದೇವರಲ್ಲಿ ನಾನೂ ನಿರೀಕ್ಷೆ ಇಟ್ಟಿದ್ದೇನೆ”
    ಕಾವಲಿನಬುರುಜು (ಅಧ್ಯಯನ)—2017 | ಡಿಸೆಂಬರ್‌
    • 15. ಯೇಸುವನ್ನು “ಪ್ರಥಮಫಲ” ಎಂದು ಯಾಕೆ ಕರೆಯಲಾಗಿದೆ?

      15 ಸ್ವರ್ಗದಲ್ಲಿ ಒಬ್ಬ ಆತ್ಮಜೀವಿಯಾಗಿರಲು ಎಬ್ಬಿಸಲ್ಪಟ್ಟ ಮೊದಲನೇ ವ್ಯಕ್ತಿ ಯೇಸು. ಅಷ್ಟೇ ಅಲ್ಲ ಆತನ ಪುನರುತ್ಥಾನವೇ ಅತಿ ಪ್ರಾಮುಖ್ಯ ಪುನರುತ್ಥಾನ. (ಅ. ಕಾ. 26:23) ಆದರೆ ಪುನರುತ್ಥಾನಗೊಂಡು ಸ್ವರ್ಗಕ್ಕೆ ಹೋಗುವ ವ್ಯಕ್ತಿ ಯೇಸು ಒಬ್ಬನೇ ಅಲ್ಲ. ತನ್ನ ನಂಬಿಗಸ್ತ ಅಪೊಸ್ತಲರು ಸಹ ತನ್ನೊಂದಿಗೆ ಸ್ವರ್ಗದಿಂದ ಆಳುವರು ಎಂದು ಯೇಸು ಮಾತು ಕೊಟ್ಟಿದ್ದನು. (ಲೂಕ 22:28-30) ಅವರು ತೀರಿಹೋದ ನಂತರವೇ ಅವರಿಗೆ ಈ ಬಹುಮಾನ ಸಿಗುತ್ತದೆ. ಅವರನ್ನು ಆತ್ಮಜೀವಿಯಾಗಿ ಪುನರುತ್ಥಾನ ಮಾಡಲಾಗುತ್ತದೆ. ಪೌಲನು ಹೀಗೆ ಬರೆದನು: “ಕ್ರಿಸ್ತನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟಿದ್ದಾನೆ; ಮರಣದಲ್ಲಿ ನಿದ್ರೆಹೋದವರಲ್ಲಿ ಪ್ರಥಮಫಲವಾಗಿದ್ದಾನೆ.” ಸ್ವರ್ಗದಲ್ಲಿ ಜೀವಿಸಲಿಕ್ಕಾಗಿ ಪುನರುತ್ಥಾನ ಮಾಡಲ್ಪಡುವ ವ್ಯಕ್ತಿಗಳೂ ಇರುತ್ತಾರೆ ಎಂದು ಪೌಲನು ಹೇಳಿದನು. “ಪ್ರತಿಯೊಬ್ಬನು ತನ್ನ ಸ್ವಂತ ದರ್ಜೆಯಲ್ಲಿ ಎಬ್ಬಿಸಲ್ಪಡುವನು: ಕ್ರಿಸ್ತನು ಪ್ರಥಮಫಲ, ಅನಂತರ ಕ್ರಿಸ್ತನ ಸಾನ್ನಿಧ್ಯದ ಸಮಯದಲ್ಲಿ ಅವನಿಗೆ ಸೇರಿದವರು ಎಬ್ಬಿಸಲ್ಪಡುವರು” ಎಂದನು.—1 ಕೊರಿಂ. 15:20, 23.

      16. ಸ್ವರ್ಗೀಯ ಪುನರುತ್ಥಾನ ಯಾವಾಗ ಆಗುತ್ತದೆ ಎಂಬುದಕ್ಕೆ ಯಾವ ಸುಳಿವಿದೆ?

      16 ಸ್ವರ್ಗೀಯ ಪುನರುತ್ಥಾನ ಯಾವಾಗ ಆಗುತ್ತದೆ ಎಂಬುದಕ್ಕೆ ಪೌಲನ ಮಾತುಗಳಲ್ಲಿ ಒಂದು ಸುಳಿವಿದೆ. ಇದು “ಕ್ರಿಸ್ತನ ಸಾನ್ನಿಧ್ಯದ ಸಮಯದಲ್ಲಿ” ಆಗುತ್ತದೆ. ಕ್ರಿಸ್ತನ “ಸಾನ್ನಿಧ್ಯ” 1914​ರಲ್ಲಿ ಆರಂಭವಾಯಿತೆಂದು ಬೈಬಲಿನ ಆಧಾರದಿಂದ ಯೆಹೋವನ ಸಾಕ್ಷಿಗಳು ಅನೇಕ ವರ್ಷಗಳಿಂದ ಸಾಬೀತುಪಡಿಸುತ್ತಾ ಬಂದಿದ್ದಾರೆ. ನಾವಿನ್ನೂ ಆತನ “ಸಾನ್ನಿಧ್ಯದ” ಸಮಯದಲ್ಲೇ ಜೀವಿಸುತ್ತಿದ್ದೇವೆ ಮತ್ತು ಈ ದುಷ್ಟ ವ್ಯವಸ್ಥೆಯ ಅಂತ್ಯ ತುಂಬ ಹತ್ತಿರವಿದೆ.

      17, 18. ಕ್ರಿಸ್ತನ ಸಾನ್ನಿಧ್ಯದ ಸಮಯದಲ್ಲಿ ಕೆಲವು ಅಭಿಷಿಕ್ತರಿಗೆ ಏನಾಗುವುದು?

      17 ಸ್ವರ್ಗೀಯ ಪುನರುತ್ಥಾನದ ಬಗ್ಗೆ ಬೈಬಲು ಇನ್ನೂ ಕೆಲವು ವಿಷಯಗಳನ್ನು ಹೇಳುತ್ತದೆ: “ಮರಣದಲ್ಲಿ ನಿದ್ರೆಹೋಗುತ್ತಿರುವವರ ವಿಷಯದಲ್ಲಿ ನೀವು ಅಜ್ಞಾನಿಗಳಾಗಿರಬಾರದೆಂಬುದು ನಮ್ಮ ಅಪೇಕ್ಷೆ; . . . ಯೇಸು ಸತ್ತು ಜೀವಿತನಾಗಿ ಎದ್ದುಬಂದನು ಎಂಬುದು ನಮ್ಮ ನಂಬಿಕೆಯಾಗಿದ್ದರೆ, . . . ಮರಣದಲ್ಲಿ ನಿದ್ರೆಹೋದವರನ್ನು ಸಹ ದೇವರು ಅವನೊಂದಿಗೆ ಎಬ್ಬಿಸುವನು ಎಂಬುದನ್ನು ನಂಬುತ್ತೇವೆ. . . . ಕರ್ತನ ಸಾನ್ನಿಧ್ಯದ ವರೆಗೆ ಜೀವದಿಂದುಳಿಯುವ ನಾವು ಯಾವುದೇ ರೀತಿಯಲ್ಲಿ ಮರಣದಲ್ಲಿ ನಿದ್ರೆಹೋದವರಿಗಿಂತ ಮುಂದಾಗುವುದೇ ಇಲ್ಲ; ಏಕೆಂದರೆ ಕರ್ತನು ತಾನೇ ಆಜ್ಞಾಘೋಷದೊಡನೆ . . . ಸ್ವರ್ಗದಿಂದ ಇಳಿದುಬರುವನು ಮತ್ತು ಕ್ರಿಸ್ತನೊಂದಿಗೆ ಐಕ್ಯದಲ್ಲಿ ಸತ್ತವರು ಮೊದಲು ಎದ್ದುಬರುವರು. ಅನಂತರ ಜೀವದಿಂದುಳಿದಿರುವ ನಾವು ಆಕಾಶದಲ್ಲಿ ಕರ್ತನನ್ನು ಎದುರುಗೊಳ್ಳಲು ಅವರೊಂದಿಗೆ ಮೇಘಗಳಲ್ಲಿ ಕೊಂಡೊಯ್ಯಲ್ಪಡುವೆವು; ಹೀಗೆ ನಾವು ಯಾವಾಗಲೂ ಕರ್ತನೊಂದಿಗೆ ಇರುವಂತಾಗುವುದು.”—1 ಥೆಸ. 4:13-17.

      18 ಮೊದಲನೆಯ ಪುನರುತ್ಥಾನ ಕ್ರಿಸ್ತನ ಸಾನ್ನಿಧ್ಯ ಆರಂಭವಾಗಿ ಸ್ವಲ್ಪ ಸಮಯದ ನಂತರ ಶುರುವಾಯಿತು. ಮಹಾ ಸಂಕಟದ ಸಮಯದಲ್ಲಿ ಭೂಮಿಯಲ್ಲಿರುವ ಅಭಿಷಿಕ್ತರು ‘ಮೇಘಗಳಲ್ಲಿ ಕೊಂಡೊಯ್ಯಲ್ಪಡುವರು.’ (ಮತ್ತಾ. 24:31) ಇದರ ಅರ್ಥ ಏನು? ‘ಮೇಘಗಳಲ್ಲಿ ಕೊಂಡೊಯ್ಯಲ್ಪಡುವವರು’ “ಮರಣದಲ್ಲಿ ನಿದ್ರೆಹೋಗುವುದಿಲ್ಲ.” ಅಂದರೆ ಅವರು ತುಂಬ ಸಮಯದ ವರೆಗೆ ಮೃತ ಸ್ಥಿತಿಯಲ್ಲಿರುವುದಿಲ್ಲ. ಅವರು ಸಾಯುವಾಗ ‘ಒಂದೇ ಕ್ಷಣದಲ್ಲಿ, ಕಣ್ಣುರೆಪ್ಪೆ ಬಡಿಯುವಷ್ಟರೊಳಗೆ ಮಾರ್ಪಡುವರು. ಕೊನೆಯ ತುತೂರಿಯು ಊದಲ್ಪಡುವಾಗ’ ಇದು ನಡೆಯುವುದು.—1 ಕೊರಿಂ. 15:51, 52.

  • “ದೇವರಲ್ಲಿ ನಾನೂ ನಿರೀಕ್ಷೆ ಇಟ್ಟಿದ್ದೇನೆ”
    ಕಾವಲಿನಬುರುಜು (ಅಧ್ಯಯನ)—2017 | ಡಿಸೆಂಬರ್‌
    • 20. ಪುನರುತ್ಥಾನ ಒಂದು ಕ್ರಮದಲ್ಲಿ ನಡೆಯುತ್ತದೆ ಎಂದು ಏಕೆ ನಂಬಬಹುದು?

      20 ಸ್ವರ್ಗಕ್ಕೆ ಹೋಗುವವರಲ್ಲಿ “ಪ್ರತಿಯೊಬ್ಬನು ತನ್ನ ಸ್ವಂತ ದರ್ಜೆಯಲ್ಲಿ ಎಬ್ಬಿಸಲ್ಪಡುವನು” ಎಂದು ಬೈಬಲ್‌ ಹೇಳುತ್ತದೆ. (1 ಕೊರಿಂ. 15:23) ಆದ್ದರಿಂದ ಭೂಮಿಯ ಮೇಲೆ ಆಗುವ ಪುನರುತ್ಥಾನ ಸಹ ಒಂದು ಕ್ರಮದಲ್ಲಿ ನಡೆಯುವುದು ಎಂದು ನಂಬಬಹುದು. ಇದರಿಂದಾಗಿ ಇಂಥ ಕೆಲವು ಪ್ರಶ್ನೆಗಳು ಏಳಬಹುದು: ಇತ್ತೀಚೆಗೆ ತೀರಿಕೊಂಡವರನ್ನು ಅವರಿಗೆ ತಿಳಿದಿರುವ ಪ್ರೀತಿಯ ಜನರು ಪುನಃ ಬರಮಾಡಿಕೊಳ್ಳಲು ಸಾಧ್ಯವಾಗುವಂತೆ ಅವರನ್ನು ಕ್ರಿಸ್ತನ ಸಾವಿರ ವರ್ಷದ ಆಳ್ವಿಕೆಯ ಆರಂಭದಲ್ಲಿ ಪುನರುತ್ಥಾನ ಮಾಡಲಾಗುವುದಾ? ಹೊಸ ಲೋಕದಲ್ಲಿ ದೇವಜನರನ್ನು ಸಂಘಟಿಸುವುದರಲ್ಲಿ ಸಹಾಯ ನೀಡಲಿಕ್ಕಾಗಿ ಒಳ್ಳೇ ನಾಯಕರಾಗಿದ್ದ ಹಿಂದಿನ ಕಾಲದ ನಂಬಿಗಸ್ತ ಪುರುಷರನ್ನು ಬೇಗನೆ ಪುನರುತ್ಥಾನ ಮಾಡಲಾಗುವುದಾ? ಯೆಹೋವನ ಸೇವೆಯನ್ನು ಯಾವತ್ತೂ ಮಾಡಿಲ್ಲದ ಜನರ ವಿಷಯದಲ್ಲಿ ಏನಾಗುವುದು? ಅವರನ್ನು ಯಾವಾಗ ಮತ್ತು ಎಲ್ಲಿ ಪುನರುತ್ಥಾನ ಮಾಡಲಾಗುವುದು? ನಮ್ಮಲ್ಲಿ ಇಂಥ ಎಷ್ಟೋ ಪ್ರಶ್ನೆಗಳು ಇರಬಹುದು. ಆದರೆ ನಾವು ಈ ವಿಷಯಗಳ ಕುರಿತು ಈಗ ಚಿಂತಿಸಬೇಕಾಗಿಲ್ಲ. ಮುಂದೆ ಏನಾಗುತ್ತದೆ ಎಂದು ನೋಡಲು ಕಾಯುವುದು ಒಳ್ಳೇದು. ಆದರೆ ಯೆಹೋವನು ಈ ವಿಷಯಗಳನ್ನೆಲ್ಲಾ ಮಾಡುವಾಗ ನಾವು ವಿಸ್ಮಯಗೊಳ್ಳುವುದಂತೂ ಖಂಡಿತ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ