-
ಯೆಹೋವನು ಒದಗಿಸುವ ಸಾಂತ್ವನದಲ್ಲಿ ಪಾಲಿಗರಾಗುವುದುಕಾವಲಿನಬುರುಜು—1996 | ನವೆಂಬರ್ 1
-
-
ಏಷಿಯದಲ್ಲಿ ಪೌಲನ ಸಂಕಟ
13, 14. (ಎ) ಏಷಿಯದಲ್ಲಿ ತನಗಾದ ಕಠಿನ ಸಂಕಟದ ಒಂದು ಸಮಯವನ್ನು ಪೌಲನು ಹೇಗೆ ವರ್ಣಿಸಿದನು? (ಬಿ) ಯಾವ ಘಟನೆಯು ಪೌಲನ ಮನಸ್ಸಿನಲ್ಲಿದ್ದಿರಬಹುದು?
13 ಈ ಹಂತದ ತನಕ ಕೊರಿಂಥ ಸಭೆಯು ಅನುಭವಿಸಿದ್ದ ರೀತಿಯ ಬಾಧೆಯನ್ನು, ಪೌಲನು ತಾಳಿಕೊಳ್ಳಬೇಕಾಗಿದ್ದ ಅನೇಕ ಸಂಕಟಗಳಿಗೆ ಹೋಲಿಸಲು ಸಾಧ್ಯವಾಗದು. ಆದಕಾರಣ, ಅವನು ಅವರಿಗೆ ಹೀಗೆ ಜ್ಞಾಪಕ ಹುಟ್ಟಿಸಲು ಸಾಧ್ಯವಾಗಿತ್ತು: “ಸಹೋದರರೇ, ಆಸ್ಯ ಸೀಮೆಯಲ್ಲಿ ನಮಗೆ ಸಂಭವಿಸಿದ ಸಂಕಟವನ್ನು ಕುರಿತು ವಿಚಾರಿಸುತ್ತೀರೋ ಅದರಲ್ಲಿ ನಾವು ಬಲವನ್ನು ಮೀರಿದಂಥ ಅತ್ಯಧಿಕವಾದ ಭಾರದಿಂದ ಕುಗ್ಗಿಹೋಗಿ ಜೀವವುಳಿಯುವ ಮಾರ್ಗವನ್ನು ಕಾಣದವರಾದೆವೆಂಬದನ್ನು ನೀವು ತಿಳಿಯಬೇಕೆಂದು ಅಪೇಕ್ಷಿಸುತ್ತೇನೆ. ಮರಣವಾಗುತ್ತದೆಂಬ ನಿಶ್ಚಯವು ನಮ್ಮೊಳಗೆ ಉಂಟಾಯಿತು; ನಾವು ನಮ್ಮ ಮೇಲೆ ಭರವಸವಿಟ್ಟುಕೊಳ್ಳದೆ ಸತ್ತವರನ್ನು ಎಬ್ಬಿಸುವ ದೇವರ ಮೇಲೆಯೇ ಭರವಸವಿಡುವವರಾಗಬೇಕೆಂದು ಹೀಗಾಯಿತು. ಆತನು ನಮ್ಮನ್ನು ಎಂಥ ಭಯಂಕರ ಮರಣದಿಂದ ತಪ್ಪಿಸಿದನು, ಮುಂದೆಯೂ ತಪ್ಪಿಸುವನು. . . . ಆತನು ಇನ್ನು ಮೇಲೆಯೂ ತಪ್ಪಿಸುವನೆಂದು ಆತನಲ್ಲಿ ನಿರೀಕ್ಷೆಯಿಟ್ಟವರಾಗಿದ್ದೇವೆ.”—2 ಕೊರಿಂಥ 1:8-10.
14 ಕೆಲವು ಮಂದಿ ಬೈಬಲ್ ತಜ್ಞರು, ಪೌಲನು ಎಫೆಸದಲ್ಲಿ ನಡೆದ ದೊಂಬಿಯನ್ನು ಸೂಚಿಸುತ್ತಿದ್ದನೆಂದು ನಂಬುತ್ತಾರೆ. ಅದರಲ್ಲಿ ಪೌಲನ ಹಾಗೂ ಅವನ ಇಬ್ಬರು ಮಕೆದೋನ್ಯದ ಪಯಣ ಸಂಗಾತಿಗಳಾಗಿದ್ದ ಗಾಯ ಮತ್ತು ಅರಿಸ್ತಾರ್ಕ ಎಂಬವರ ಜೀವಗಳು ನಷ್ಟವಾಗುತ್ತಿದ್ದವು. ಈ ಇಬ್ಬರು ಕ್ರೈಸ್ತರನ್ನು ಎಲ್ಲಿ ಒಂದು ಗಲಭೆಯ ಗುಂಪು, “ಎಫೆಸದವರ ಅರ್ತೆಮೀದೇವಿ ಮಹಾದೇವಿ ಎಂದು ಎರಡು ಘಂಟೆ ಹೊತ್ತು” ಕೂಗಿತೊ, ಆ ನಾಟಕಶಾಲೆಯೊಳಗೆ ಬಲಾತ್ಕಾರದಿಂದ ಕೊಂಡೊಯ್ಯಲಾಯಿತು. ಕಟ್ಟಕಡೆಗೆ ಪಟ್ಟಣದ ಒಬ್ಬ ಅಧಿಕಾರಿಯು ಜನರ ಗುಂಪನ್ನು ಮೌನವಾಗಿರಿಸುವುದರಲ್ಲಿ ಸಫಲನಾದನು. ಗಾಯ ಮತ್ತು ಅರಿಸ್ತಾರ್ಕರ ಜೀವಕ್ಕಿದ್ದ ಈ ಅಪಾಯವು ಪೌಲನನ್ನು ಮಹತ್ತಾಗಿ ಸಂಕಟಕ್ಕೊಳಪಡಿಸಿದ್ದಿರಬೇಕು. ವಾಸ್ತವವೇನಂದರೆ, ಪೌಲನು ಆ ಮತಾಂಧ ಗುಂಪಿದ್ದಲ್ಲಿಗೆ ಹೋಗಿ ಅವರೊಂದಿಗೆ ತರ್ಕಿಸಬೇಕೆಂದಿದ್ದನು, ಆದರೆ ತನ್ನ ಜೀವವನ್ನು ಈ ರೀತಿ ಅಪಾಯಕ್ಕೊಳಪಡಿಸುವುದರಿಂದ ಅವನನ್ನು ತಡೆಯಲಾಯಿತು.—ಅ. ಕೃತ್ಯಗಳು 19:26-41.
15. 1 ಕೊರಿಂಥ 15:32ರಲ್ಲಿ ಯಾವ ಉಗ್ರ ಸ್ಥಿತಿಯು ವರ್ಣಿಸಲ್ಪಟ್ಟಿರಬಹುದು?
15 ಆದರೂ, ಪೌಲನು ಈ ಮೇಲಿನ ಘಟನೆಗಿಂತಲೂ ಎಷ್ಟೋ ಹೆಚ್ಚು ಉಗ್ರ ಸ್ಥಿತಿಯ ಒಂದು ಸನ್ನಿವೇಶವನ್ನು ವರ್ಣಿಸುತ್ತಿದ್ದಿರಬಹುದು. ಕೊರಿಂಥದವರಿಗೆ ಬರೆದ ತನ್ನ ಮೊದಲನೆಯ ಪತ್ರದಲ್ಲಿ, “ನಾನು ಎಫೆಸದಲ್ಲಿ ಮೃಗಗಳೊಂದಿಗೆ ಯುದ್ಧಮಾಡಿದ್ದು ಕೇವಲ ಮಾನುಷಾಭಿಪ್ರಾಯದಿಂದಾದರೆ ನನಗೇನು ಪ್ರಯೋಜನ?” ಎಂದು ಪೌಲನು ಕೇಳಿದನು. (1 ಕೊರಿಂಥ 15:32) ಇದರ ಅರ್ಥವು, ಪೌಲನ ಜೀವವು ಅಪಾಯಕ್ಕೊಳಗಾದದ್ದು ಪಶುಪ್ರಾಯರಾದ ಜನರಿಂದ ಮಾತ್ರವಲ್ಲ, ಎಫೆಸದ ಕ್ರೀಡಾಂಗಣದಲ್ಲಿ ಅಕ್ಷರಾರ್ಥವಾದ ಕಾಡುಮೃಗಗಳಿಂದಲೂ ಎಂದಾಗಿರಬಹುದು. ಪಾತಕಿಗಳನ್ನು ಕೆಲವು ಬಾರಿ, ರಕ್ತದಾಹವಿರುವ ಜನಸ್ತೋಮವು ಪ್ರೇಕ್ಷಿಸುತ್ತಿರುವಾಗ, ಅವರು ಕಾಡುಮೃಗಗಳೊಂದಿಗೆ ಹೋರಾಡುವಂತೆ ನಿರ್ಬಂಧಿಸಲಾಗುತ್ತಿತ್ತು. ತಾನು ಅಕ್ಷರಾರ್ಥವಾದ ಕಾಡುಮೃಗಗಳ ಎದುರಾಗಿದ್ದೆನೆಂದು ಪೌಲನು ಅರ್ಥೈಸಿದ್ದರೆ, ದಾನಿಯೇಲನು ಅಕ್ಷರಾರ್ಥದ ಸಿಂಹಗಳ ಬಾಯಿಂದ ರಕ್ಷಿಸಲ್ಪಟ್ಟಂತೆಯೇ, ಅವನು ಕೊನೆಯ ಕ್ಷಣದಲ್ಲಿ ಕ್ರೂರವಾದ ಮರಣದಿಂದ ಅದ್ಭುತಕರವಾಗಿ ಉಳಿಸಲ್ಪಟ್ಟಿದ್ದಿರಲೇಬೇಕು.—ದಾನಿಯೇಲ 6:22.
-
-
ಯೆಹೋವನು ಒದಗಿಸುವ ಸಾಂತ್ವನದಲ್ಲಿ ಪಾಲಿಗರಾಗುವುದುಕಾವಲಿನಬುರುಜು—1996 | ನವೆಂಬರ್ 1
-
-
16. (ಎ) ಯೆಹೋವನ ಸಾಕ್ಷಿಗಳಲ್ಲಿ ಅನೇಕರು, ಪೌಲನು ಅನುಭವಿಸಿದ ಸಂಕಟಗಳೊಂದಿಗೆ ಏಕೆ ಗುರುತಿಸಲ್ಪಡಸಾಧ್ಯವಿದೆ? (ಬಿ) ತಮ್ಮ ನಂಬಿಕೆಯ ಕಾರಣ ಸತ್ತವರ ಸಂಬಂಧದಲ್ಲಿ ನಾವು ಯಾವ ಖಾತ್ರಿಯಿಂದಿರಸಾಧ್ಯವಿದೆ? (ಸಿ) ಕ್ರೈಸ್ತರು ಮರಣವನ್ನು ಅಲ್ಪ ಅಂತರದಲ್ಲಿ ತಪ್ಪಿಸಿಕೊಳ್ಳುವಾಗ, ಯಾವ ಒಳ್ಳೆಯ ಪರಿಣಾಮವು ಒದಗಿಬಂದಿದೆ?
16 ಪ್ರಸಕ್ತ ದಿನದ ಅನೇಕ ಮಂದಿ ಕ್ರೈಸ್ತರು, ಪೌಲನಿಂದ ಅನುಭವಿಸಲ್ಪಟ್ಟ ಸಂಕಟಗಳಿಗೆ ಸಂಬಂಧ ಕಲ್ಪಿಸಬಲ್ಲರು. (2 ಕೊರಿಂಥ 11:23-27) ಇಂದು ಸಹ, ಕ್ರೈಸ್ತರು “[ಅವರ] ಬಲವನ್ನು ಮೀರಿದಂಥ ಅತ್ಯಧಿಕ ಭಾರ” ಉಳ್ಳವರಾಗಿದ್ದಾರೆ ಮತ್ತು ಅನೇಕರು ‘ತಮ್ಮ ಜೀವಗಳ ವಿಷಯ ಅನಿಶ್ಚಿತರಾಗಿದ್ದ’ ಸನ್ನಿವೇಶಗಳನ್ನು ಎದುರಿಸಿದ್ದಾರೆ. (2 ಕೊರಿಂಥ 1:8) ಕೆಲವರು ಸಾಮೂಹಿಕ ಕೊಲೆಗಾರರ ಮತ್ತು ಕ್ರೂರ ಹಿಂಸಕರ ಕೈಗಳಲ್ಲಿ ಸತ್ತಿದ್ದಾರೆ. ದೇವರ ಸಾಂತ್ವನದಾಯಕ ಶಕ್ತಿಯು, ಅವರು ಸಹಿಸಿಕೊಳ್ಳುವಂತೆ ಸಾಮರ್ಥ್ಯವನ್ನಿತ್ತಿತು ಮತ್ತು ಅವರು ತಮ್ಮ ಹೃದಮನಗಳನ್ನು ಸ್ವರ್ಗದ ಅಥವಾ ಭೂಮಿಯ ತಮ್ಮ ನಿರೀಕ್ಷೆಯ ನೆರವೇರಿಕೆಯ ಮೇಲೆ ದೃಢವಾಗಿ ಸ್ಥಿರೀಕರಿಸುತ್ತ ಮೃತರಾದರು ಎಂಬ ಖಾತರಿಯಿಂದ ನಾವಿರಬಲ್ಲೆವು. (1 ಕೊರಿಂಥ 10:13; ಫಿಲಿಪ್ಪಿ 4:13; ಪ್ರಕಟನೆ 2:10) ಬೇರೆ ಸಂದರ್ಭಗಳಲ್ಲಿ, ಯೆಹೋವನು ವಿಷಯಗಳನ್ನು ಕೌಶಲದಿಂದ ನಿರ್ವಹಿಸಿದ್ದಾನೆ ಮತ್ತು ನಮ್ಮ ಸಹೋದರರು ಮರಣದಿಂದ ರಕ್ಷಿಸಲ್ಪಟ್ಟಿದ್ದಾರೆ. ಇಂತಹ ರಕ್ಷಣೆಯನ್ನು ಅನುಭವಿಸಿರುವವರು, “ಸತ್ತವರನ್ನು ಎಬ್ಬಿಸುವ ದೇವರ ಮೇಲೆ” ವರ್ಧಿಸಿದ ಭರವಸೆಯನ್ನು ವಿಕಸಿಸಿದ್ದಾರೆಂಬುದು ನಿಸ್ಸಂಶಯ. (2 ಕೊರಿಂಥ 1:9) ಅನಂತರ, ಅವರು ದೇವರ ಸಾಂತ್ವನದಾಯಕ ಸಂದೇಶದಲ್ಲಿ ಇತರರೊಂದಿಗೆ ಭಾಗಿಗಳಾದಾಗ, ಇನ್ನೂ ಹೆಚ್ಚಿನ ಮನವರಿಕೆಯಿಂದ ಮಾತಾಡಶಕ್ತರಾದರು.—ಮತ್ತಾಯ 24:14.
-