ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಒಂದು ಪವಿತ್ರ ರಹಸ್ಯವನ್ನು ಹೊರಗೆಡಹುವುದು
    ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
    • 17. (ಎ) ಗೋದಿ ಮತ್ತು ಹಣಜಿಯ ಯೇಸುವಿನ ಸಾಮ್ಯವು ಏನನ್ನು ಮುಂತಿಳಿಸಿತು? (ಬಿ) 1918 ರಲ್ಲಿ ಏನು ಸಂಭವಿಸಿತು, ಇದರಿಂದ ಯಾವ ತ್ಯಜಿಸುವಿಕೆ ಮತ್ತು ಯಾವ ನೇಮಕವು ಫಲಿತಾಂಶವಾಗಿ ಉಂಟಾಯಿತು?

      17 ಗೋದಿ ಮತ್ತು ಹಣಜಿಯ ಸಾಮ್ಯದಲ್ಲಿ, ಯೇಸುವು ಕ್ರೈಸ್ತಪ್ರಪಂಚವು ಪರಮಾಧಿಕಾರದಿಂದ ಆಳುವಾಗ ಇರುವ ಒಂದು ಅಂಧಕಾರದ ಸಮಯದ ಕುರಿತು ಮುಂತಿಳಿಸಿದನು. ಆದಾಗ್ಯೂ, ಧರ್ಮಭ್ರಷ್ಟತೆಯ ಶತಮಾನಗಳಲ್ಲಿಲ್ಲಾ, ಗೋದಿಯಂತಹ ಒಬ್ಬೊಬ್ಬ ಕ್ರೈಸ್ತರು, ಅಪ್ಪಟ ಅಭಿಷಿಕ್ತರು ಅಸ್ತಿತ್ವದಲ್ಲಿರುವರು. (ಮತ್ತಾಯ 13:24-29, 36-43) ಈ ರೀತಿಯಲ್ಲಿ, ಅಕ್ಟೋಬರ 1914 ರಲ್ಲಿ ಕರ್ತನ ದಿನವು ಉದಯಿಸಿದಾಗ, ಸತ್ಯ ಕ್ರೈಸ್ತರು ಭೂಮಿಯ ಮೇಲೆ ಇನ್ನೂ ಇದ್ದರು. (ಪ್ರಕಟನೆ 1:10) ಮೂರುವರೆ ವರ್ಷಗಳ ನಂತರ, 1918 ರಲ್ಲಿ, ಯೆಹೋವನು ತನ್ನ “ಒಡಂಬಡಿಕೆಯ ದೂತನಾದ” ಯೇಸುವಿನೊಂದಿಗೆ ತನ್ನ ಆತ್ಮಿಕ ದೇವಾಲಯಕ್ಕೆ, ನ್ಯಾಯತೀರ್ಪು ಮಾಡಲು ಆಗಮಿಸಿದನು ಎಂದು ತೋರುತ್ತದೆ. (ಮಲಾಕಿಯ 3:1; ಮತ್ತಾಯ 13:47-50) ಯಜಮಾನನು ಸುಳ್ಳು ಕ್ರೈಸ್ತರನ್ನು ಕಟ್ಟಕಡೆಗೆ ತ್ಯಜಿಸುವ ಮತ್ತು ‘ನಂಬಿಗಸ್ತನೂ ವಿವೇಕಿಯೂ ಆದ ಆಳನ್ನು ಅವನ ಎಲ್ಲಾ ಆಸ್ತಿಯ ಮೇಲೆ’ ನೇಮಕ ಮಾಡುವ ಸಮಯವು ಅದಾಗಿತ್ತು.—ಮತ್ತಾಯ 7:22, 23; 24:45-47.

      18. ಯಾವ “ತಾಸು” 1914 ರಲ್ಲಿ ಬಂತು, ಮತ್ತು ಆಳು ಯಾವದನ್ನು ಮಾಡಲು ಅದು ಸಮಯವಾಗಿತ್ತು?

      18 ಅಲ್ಲಿ ತಿಳಿಸಿರುವ ಸಂಗತಿಗಳಿಂದ ನಾವು ನೋಡುವಂತೆ, ಏಳು ಸಭೆಗಳಿಗೆ ಯೇಸುವಿನ ಸಂದೇಶಗಳಲ್ಲಿ ಬರೆದಿರುವ ಸಂಗತಿಗಳಿಗೆ ಈ ಆಳು ವಿಶೇಷ ಗಮನ ಕೊಡುವ ಸಮಯವು ಕೂಡ ಅದಾಗಿತ್ತು. ಉದಾಹರಣೆಗೆ, ಯಾವ ನ್ಯಾಯತೀರ್ಪು 1918 ರಲ್ಲಿ ಆರಂಭಗೊಂಡಿತೋ ಆ ಸಭೆಗಳ ನ್ಯಾಯತೀರ್ಪು ಮಾಡಲು ತಾನು ಬರುವುದರ ಕುರಿತಾಗಿ ಯೇಸುವು ಸೂಚಿಸುತ್ತಾನೆ. (ಪ್ರಕಟನೆ 2:5, 16, 22, 23; 3:3) “ಲೋಕದ ಮೇಲ್ಲೆಲಾ ಬರುವದಕ್ಕಿರುವ ಶೋಧನೆಯ ತಾಸಿನಲ್ಲಿ” ಫಿಲದೆಲ್ಫಿಯ ಸಭೆಯನ್ನು ಸುರಕ್ಷಿತವಾಗಿಡುವದರ ಕುರಿತು ಅವನು ಮಾತಾಡುತ್ತಾನೆ. (ಪ್ರಕಟನೆ 3:10, 11, NW) ಈ “ಶೋಧನೆಯ ತಾಸು” 1914 ರಲ್ಲಿ ಕರ್ತನ ದಿನವು ಉದಯಿಸುವುದರೊಂದಿಗೆ ಮಾತ್ರ ಆಗಮಿಸುತ್ತದೆ, ತದನಂತರ ದೇವರ ಸ್ಥಾಪಿತ ರಾಜ್ಯದ ಕಡೆಗಿನ ಅವರ ನಿಷ್ಠೆಯ ಕುರಿತಾಗಿ ಕ್ರೈಸ್ತರು ಪರೀಕ್ಷಿಸಲ್ಪಟ್ಟರು.—ಹೋಲಿಸಿರಿ ಮತ್ತಾಯ 24:3, 9-13.

  • ಒಂದು ಪವಿತ್ರ ರಹಸ್ಯವನ್ನು ಹೊರಗೆಡಹುವುದು
    ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
    • [ಪುಟ 43 ರಲ್ಲಿರುವ ಚೌಕ]

      ಪರೀಕ್ಷಿಸುವ ಮತ್ತು ನ್ಯಾಯವಿಚಾರಣೆ ಮಾಡುವ ಒಂದು ಸಮಯ

      ಯೇಸುವು ಸಾ.ಶ. 29ರ ಅಕ್ಟೋಬರದ ಸುಮಾರಿಗೆ ಯೊರ್ದನ್‌ ಹೊಳೆಯಲ್ಲಿ ದೀಕ್ಷಾಸ್ನಾನ ಪಡೆದನು ಮತ್ತು ನಿಯುಕ್ತ ರಾಜನಾದನು. ಮೂರುವರೆ ವರ್ಷಗಳ ನಂತರ, ಸಾ.ಶ. 33 ರಲ್ಲಿ, ಅವನು ಯೆರೂಸಲೇಮಿನ ದೇವಾಲಯಕ್ಕೆ ಆಗಮಿಸಿದನು ಮತ್ತು ಅದನ್ನು ಕಳ್ಳರ ಗವಿಯನ್ನಾಗಿ ಮಾಡಿದವರನ್ನು ಹೊರಗೆ ದಬ್ಬಿದನು. ಇದಕ್ಕೆ, ಯೇಸು ಸ್ವರ್ಗದಲ್ಲಿ ಅಕ್ಟೋಬರ 1914 ರಿಂದ ‘ಮಹಿಮೆಯ ಸಿಂಹಾಸದಲ್ಲಿ ಕುಳಿತುಕೊಂಡಂದಿನಿಂದ’ ದೇವರ ಮನೆಯಲ್ಲಿ ನ್ಯಾಯವಿಚಾರಣೆ ತೊಡಗಿ, ಅವನು ನಾಮಮಾತ್ರದ ಕ್ರೈಸ್ತರನ್ನು ಪರೀಕ್ಷಿಸಲು ಬರುವ ವರೆಗೆ ಇರುವ ಮೂರುವರೆ ವರ್ಷಗಳ ಅವಧಿಯಲ್ಲಿ ಒಂದು ಪರಸ್ಪರವಾದ ಹೋಲಿಕೆಯಿದೆ ಎಂದು ಕಂಡುಬರುತ್ತದೆ. (ಮತ್ತಾಯ 21:12, 13; 25:31-33; 1 ಪೇತ್ರ 4:17) ಯೆಹೋವನ ಜನರ ರಾಜ್ಯಚಟುವಟಿಕೆಗೆ 1918ರ ಆರಂಭದಲ್ಲಿ ಮಹಾ ವಿರೋಧವು ಬಂತು. ಇದು ಭೂವ್ಯಾಪಕವಾಗಿ ಒಂದು ಪರೀಕ್ಷಾ ಸಮಯವಾಗಿತ್ತು, ಮತ್ತು ಹೆದರಿಕೆಯುಳ್ಳವರು ಬೇರ್ಪಡಿಸಲ್ಪಟ್ಟರು. ಮೇ 1918 ರಲ್ಲಿ, ಕ್ರೈಸ್ತಪ್ರಪಂಚದ ವೈದಿಕರುಗಳು ವಾಚ್‌ ಟವರ್‌ ಸೊಸೈಟಿಯ ಅಧಿಕಾರಿಗಳ ಸೆರೆವಾಸವನ್ನು ಪ್ರೇರಿಸಿದರು. ಆದರೆ ಒಂಬತ್ತು ತಿಂಗಳ ಅನಂತರ ಇವರು ಬಿಡುಗಡೆ ಹೊಂದಿದರು. ತದನಂತರ ಅವರನ್ನು ಸುಳ್ಳು ಆರೋಪಗಳಿಂದ ಪೂರ್ಣವಾಗಿ ದೋಷಮುಕ್ತರನ್ನಾಗಿ ಮಾಡಲಾಯಿತು. ಪರೀಕ್ಷಿಸಲ್ಪಟ್ಟ ಮತ್ತು ಪರಿಶೋಧಿಸಲ್ಪಟ್ಟ ದೇವಜನರ ಸಂಸ್ಥೆಯು 1919 ರಿಂದ ಕ್ರಿಸ್ತ ಯೇಸುವಿನಿಂದಾಳಲ್ಪಡುವ ಯೆಹೋವನ ರಾಜ್ಯವೊಂದೇ ಮಾನವಕುಲದ ನಿರೀಕ್ಷೆಯಾಗಿದೆ ಎಂದು ಪ್ರಚುರಿಸಲು ಹುರುಪಿನಿಂದ ಮುಂದಕ್ಕೆ ಚಲಿಸಿತು.—ಮಲಾಕಿಯ 3:1-3.

      ಯೇಸುವು 1918 ರಲ್ಲಿ ತನ್ನ ಪರೀಕ್ಷಣೆಯನ್ನು ಆರಂಭಿಸಿದಂತೆಯೇ, ಕ್ರೈಸ್ತಪ್ರಪಂಚದ ವೈದಿಕರು ಪ್ರತಿಕೂಲ ನ್ಯಾಯತೀರ್ಪನ್ನು ನಿಸ್ಸಂದೇಹವಾಗಿ ಪಡೆದರು. ದೇವಜನರ ವಿರುದ್ಧ ಅವರು ಹಿಂಸೆಯನ್ನು ತೀವ್ರಗೊಳಿಸಿದ್ದು ಮಾತ್ರವಲ್ಲದೆ, ಮೊದಲನೆಯ ಲೋಕ ಯುದ್ಧದ ಸಮಯದಲ್ಲಿ ಹೋರಾಡುವ ರಾಷ್ಟ್ರಗಳಿಗೆ ಬೆಂಬಲಿಸುವದರ ಮೂಲಕ ಘೋರ ರಕ್ತಾಪರಾಧಕ್ಕೂ ತುತ್ತಾಗಿದ್ದರು. (ಪ್ರಕಟನೆ 18:21, 24) ಅನಂತರ ಈ ವೈದಿಕರು ಅವರ ನಿರೀಕ್ಷೆಯನ್ನು ಮಾನವ-ನಿರ್ಮಿತ ಜನಾಂಗ ಸಂಘದ ಮೇಲೆ ಇಟ್ಟರು. ಸುಳ್ಳು ಧರ್ಮದ ಪೂರ್ತಿ ಲೋಕ ಸಾಮ್ರಾಜ್ಯದೊಂದಿಗೆ, ಕ್ರೈಸ್ತಪ್ರಪಂಚವು 1919 ರಿಂದ ದೇವರ ಮೆಚ್ಚಿಕೆಯಿಂದ ಪೂರ್ಣವಾಗಿ ಬಿದ್ದುಹೋಗಿದೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ