ಕೀರ್ತನೆ
ಗಾಯಕರ ನಿರ್ದೇಶಕನಿಗೆ ಸೂಚನೆ, ದಾವೀದನ ಮಧುರ ಗೀತೆ.
64 ದೇವರೇ, ನಾನು ಆತಂಕದಲ್ಲಿದ್ದೀನಿ, ದಯವಿಟ್ಟು ನನ್ನ ಮಾತನ್ನ ಕೇಳಿಸ್ಕೊ,+
ಶತ್ರುಗಳ ಘೋರ ಆಕ್ರಮಣಗಳಿಂದ ನನ್ನ ಜೀವವನ್ನ ರಕ್ಷಿಸು.
3 ಕತ್ತಿ ತರ ಅವರು ತಮ್ಮ ನಾಲಿಗೆನ ಚೂಪು ಮಾಡ್ತಾರೆ,
ಚುಚ್ಚೋ ಮಾತುಗಳನ್ನ ಬಾಣಗಳ ತರ ಗುರಿ ಇಡ್ತಾರೆ,
4 ರಹಸ್ಯ ಜಾಗದಿಂದ ನಿರ್ದೋಷಿ ಮೇಲೆ ಆಕ್ರಮಣ ಮಾಡೋಕೆ ಹೀಗೆ ಮಾಡ್ತಾರೆ.
ಯಾವ ಭಯನೂ ಇಲ್ಲದೇ ತಕ್ಷಣ ಅವನ ಮೇಲೆ ಬಾಣ ಬಿಡ್ತಾರೆ.
5 ಅವ್ರಿಗೆ ಅವ್ರ ಕೆಟ್ಟ ಉದ್ದೇಶಗಳು ನಿಜ ಆದ್ರೆ ಸಾಕು,
ಅವ್ರ ಬಲೆಗಳನ್ನ ಹೇಗೆ ಬಚ್ಚಿಡಬೇಕು ಅಂತ ಅವರು ತಮ್ಮಲ್ಲೇ ಮಾತಾಡ್ಕೊಳ್ತಾರೆ.
“ಈ ಬಲೆಗಳನ್ನ ಯಾರು ನೋಡ್ತಾರೆ?” ಅಂತ ಅವರು ಹೇಳ್ತಾರೆ.+
6 ತಪ್ಪು ಮಾಡೋಕೆ ಹೊಸಹೊಸ ದಾರಿ ಹುಡುಕ್ತಾರೆ,
ಯಾರಿಗೂ ಗೊತ್ತಾಗದ ಹಾಗೆ ಬುದ್ಧಿವಂತಿಕೆಯಿಂದ ಉಪಾಯ ಮಾಡ್ತಾರೆ,+
ಅವ್ರ ಹೃದಯದ ಆಳ ತಿಳ್ಕೊಳ್ಳೋಕೆ ಆಗಲ್ಲ.
7 ಆದ್ರೆ ದೇವರು ಅವ್ರ ಮೇಲೆ ಬಾಣಗಳನ್ನ ಬಿಡ್ತಾನೆ,+
ತಕ್ಷಣ ಅವ್ರಿಗೆ ಗಾಯ ಆಗುತ್ತೆ.
8 ಅವರು ಬಿದ್ದುಹೋಗೋಕೆ ಅವ್ರ ಬಾಯೇ ಕಾರಣ ಆಗುತ್ತೆ,+
ಅವ್ರನ್ನ ನೋಡೋರೆಲ್ಲ ತಲೆ ಆಡಿಸ್ತಾರೆ.
9 ಆಮೇಲೆ ಎಲ್ರೂ ಭಯಪಟ್ಟು,
ದೇವರು ಮಾಡಿದ್ದನ್ನ ನೋಡಿ ಅದನ್ನ ಎಲ್ರಿಗೂ ಹೇಳ್ತಾರೆ,