ಪ್ರಕಟಣೆಗಳು
◼ ಸಾಹಿತ್ಯ ನೀಡುವಿಕೆ ಮಾರ್ಚ್: ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಮೊದಲ ಭೇಟಿಯಲ್ಲೇ ಬೈಬಲ್ ಅಧ್ಯಯನ ಆರಂಭಿಸಲು ಪ್ರಯತ್ನಿಸಿ. ಮನೆಯವನ ಬಳಿ ಈಗಾಗಲೇ ಈ ಪುಸ್ತಕವಿದ್ದಲ್ಲಿ ಮತ್ತು ಬೈಬಲ್ ಅಧ್ಯಯನ ಬೇಡವೆಂದಲ್ಲಿ, ಆ ವ್ಯಕ್ತಿಯ ಆಸಕ್ತಿಗೆ ತಕ್ಕಂಥ ಯಾವುದೇ ಹಿಂದಿನ ಹಳೇ ಪತ್ರಿಕೆ ಅಥವಾ ಬ್ರೋಷರನ್ನು ಪ್ರಚಾರಕರು ನೀಡಬಹುದು. ಏಪ್ರಿಲ್ ಮತ್ತು ಮೇ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು. ಆಸಕ್ತಿ ತೋರಿಸಿದವರಿಗೆ, ಈ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಬಯಸುತ್ತೀರೋ? ಎಂಬ ಟ್ರ್ಯಾಕ್ಟ್ ನೀಡಿ ಬೈಬಲ್ ಅಧ್ಯಯನ ಆರಂಭಿಸಲು ಪ್ರಯತ್ನಿಸಿ. ಸಭೆಯೊಂದಿಗೆ ಸಕ್ರಿಯವಾಗಿ ಸಹವಾಸಿಸದಿದ್ದರೂ ಯೇಸುವಿನ ಮರಣದ ಸ್ಮರಣೆ ಮತ್ತು ಸಮ್ಮೇಳನ, ಅಧಿವೇಶನಗಳಂಥ ವಿಶೇಷ ಕೂಟಗಳಿಗೆ ಹಾಜರಾಗುವವರನ್ನು ಮತ್ತು ಇತರ ಆಸಕ್ತ ಜನರನ್ನು ಪುನರ್ಭೇಟಿ ಮಾಡುವಾಗ ಬೈಬಲ್ ಬೋಧಿಸುತ್ತದೆ ಪುಸ್ತಕದಿಂದ ಅಧ್ಯಯನ ಆರಂಭಿಸಲು ಪ್ರಯತ್ನಿಸಿ. ಜೂನ್: ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಮೊದಲ ಭೇಟಿಯಲ್ಲೇ ಬೈಬಲ್ ಅಧ್ಯಯನ ಆರಂಭಿಸಲು ಪ್ರಯತ್ನಿಸಿ. ಮನೆಯವನ ಬಳಿ ಈಗಾಗಲೇ ಈ ಪುಸ್ತಕವಿದ್ದಲ್ಲಿ ಮತ್ತು ಬೈಬಲ್ ಅಧ್ಯಯನ ಬೇಡವೆಂದಲ್ಲಿ, ಆ ವ್ಯಕ್ತಿಯ ಆಸಕ್ತಿಗೆ ತಕ್ಕಂಥ ಯಾವುದೇ ಹಿಂದಿನ ಹಳೇ ಪತ್ರಿಕೆ ಅಥವಾ ಬ್ರೋಷರನ್ನು ಪ್ರಚಾರಕರು ನೀಡಬಹುದು.
◼ ಕ್ರಿಸ್ತನ ಮರಣದ ಸ್ಮರಣೆಯ ದಿನಾಂಕ ಏಪ್ರಿಲ್ 5, 2012 ಗುರುವಾರ. ನಿಮ್ಮ ಸಭಾ ಕೂಟಗಳು ಸಾಮಾನ್ಯವಾಗಿ ಗುರುವಾರ ನಡೆಯುವಲ್ಲಿ ಅವನ್ನು ಆ ವಾರದ ಇನ್ನೊಂದು ದಿನ ನಡೆಸಲು ಪ್ರಯತ್ನಿಸಿ. ಆದರೆ ಬೇರೆ ದಿನದಲ್ಲಿ ರಾಜ್ಯ ಸಭಾಗೃಹ ಲಭ್ಯವಿಲ್ಲವಾದರೆ, ನಿಮ್ಮ ಸಭೆಗೆ ವಿಶೇಷವಾಗಿ ಅನ್ವಯವಾಗುವ ಸೇವಾ ಕೂಟದ ಭಾಗಗಳನ್ನು ಇನ್ನೊಂದು ಸೇವಾ ಕೂಟದಲ್ಲಿ ಸೇರಿಸಬಹುದು.
◼ ಲಭ್ಯವಿರುವ ಹೊಸ ಪ್ರಕಾಶನಗಳು:
ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ—ಮಣಿಪುರಿ, ಒರಿಯ
ದೇವರ ಮಾತನ್ನು ಆಲಿಸಿ—ಮಣಿಪುರಿ, ಒರಿಯ
◼ ಪುನಃ ಲಭ್ಯವಿರುವ ಪ್ರಕಾಶನಗಳು:
‘ಒಳ್ಳೆಯ ದೇಶವನ್ನು ನೋಡಿ’—ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಹಿಂದಿ
ಸರ್ವ ದೇಶಗಳ ಜನರಿಗಾಗಿ ಸುವಾರ್ತೆ—ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಹಿಂದಿ