ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g20 ನಂ. 2 ಪು. 8-9
  • 2. ನಮ್ಮ ಕಷ್ಟಗಳಿಗೆ ನಾವೇ ಕಾರಣನಾ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • 2. ನಮ್ಮ ಕಷ್ಟಗಳಿಗೆ ನಾವೇ ಕಾರಣನಾ?
  • ಎಚ್ಚರ!—2020
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಈ ಪ್ರಶ್ನೆಗೆ ಉತ್ತರ ತಿಳುಕೊಳ್ಳೋದು ಯಾಕೆ ಮುಖ್ಯ
  • ನೀವೇ ಯೋಚಿಸಿ . . .
  • ಬೈಬಲ್‌ ಏನು ಹೇಳುತ್ತೆ
  • ಬೈಬಲ್‌ ಏನು ಹೇಳುತ್ತದೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2017
  • ಪರಿವಿಡಿ
    ಎಚ್ಚರ!—2020
  • ಯಾಕಿದೆ ಇಷ್ಟೊಂದು ಕಷ್ಟ?
    ಎಚ್ಚರ!—2012
  • 4. ಕಷ್ಟಪಡಬೇಕು ಅಂತನೇ ದೇವರು ನಮ್ಮನ್ನ ಸೃಷ್ಟಿಸಿದ್ನಾ?
    ಎಚ್ಚರ!—2020
ಇನ್ನಷ್ಟು
ಎಚ್ಚರ!—2020
g20 ನಂ. 2 ಪು. 8-9
ತನ್ನ ಮನೆಯ ಹಾಲ್‌ನಲ್ಲಿ ಕೂತಿರುವ ವ್ಯಕ್ತಿಯ ಒಂದು ಕೈಯಲ್ಲಿ ಸಿಗರೇಟ್‌ ಇದೆ ಮತ್ತು ಇನ್ನೊಂದು ಕೈಯಲ್ಲಿ ಬಿಯರ್‌ ಬಾಟಲ್‌ ಇದೆ.

2. ನಮ್ಮ ಕಷ್ಟಗಳಿಗೆ ನಾವೇ ಕಾರಣನಾ?

ಈ ಪ್ರಶ್ನೆಗೆ ಉತ್ತರ ತಿಳುಕೊಳ್ಳೋದು ಯಾಕೆ ಮುಖ್ಯ

ಒಂದು ವೇಳೆ ಕಷ್ಟಗಳಿಗೆ ನಾವೇ ಕಾರಣರಾದ್ರೆ ಅದನ್ನ ಕಮ್ಮಿ ಮಾಡೋಕೂ ನಮ್ಮ ಕೈಲಿ ಆಗಬಹುದು.

ನೀವೇ ಯೋಚಿಸಿ . . .

ಕೆಳಗಿನ ಕಷ್ಟ ಸಮಸ್ಯೆಗಳಲ್ಲಿ ಮನುಷ್ಯರ ಕೈವಾಡ ಎಷ್ಟರ ಮಟ್ಟಿಗೆ ಇದೆ?

  • ಮುಷ್ಟಿ ಹಿಡಿದಿರುವ ಚಿತ್ರ, ಇದು ದೌರ್ಜನ್ಯನಾ ಸೂಚಿಸುತ್ತೆ.

    ದೌರ್ಜನ್ಯ.

    25% ಜನ ತಮ್ಮ ಬಾಲ್ಯದ ಯಾವುದಾದ್ರು ಒಂದು ಹಂತದಲ್ಲಿ ಶಾರೀರಿಕ ದೌರ್ಜನ್ಯಕ್ಕೆ ಒಳಗಾಗಿರುತ್ತಾರೆ ಮತ್ತು 33.33% ಸ್ತ್ರೀಯರು ತಮ್ಮ ಜೀವನದ ಯಾವುದಾದ್ರು ಒಂದು ಹಂತದಲ್ಲಿ ಶಾರೀರಿಕ ಅಥವಾ ಲೈಂಗಿಕ ದೌರ್ಜನ್ಯನಾ (ಕೆಲವೊಮ್ಮೆ ಎರಡನ್ನೂ) ಅನುಭವಿಸಿರುತ್ತಾರೆ ಅಂತ ವಿಶ್ವ ಆರೋಗ್ಯ ಸಂಸ್ಥೆ ಅಂದಾಜು ಮಾಡಿದೆ.

  • ಸಮಾಧಿ ಕಲ್ಲುಗಳ ಚಿತ್ರ, ಇದು ಸ್ಮಶಾನನಾ ಸೂಚಿಸುತ್ತೆ.

    ಸಾವಿನ ನೋವು.

    ವಿಶ್ವ ಆರೋಗ್ಯ ಸಂಸ್ಥೆಯ ಒಂದು ವರದಿಯ ಪ್ರಕಾರ “ಇಸವಿ 2016 ರಲ್ಲೇ ಇಡೀ ಲೋಕದಲ್ಲಿ ಸುಮಾರು 4,77,000ದಷ್ಟು ಕೊಲೆಗಳು ನಡೆದಿವೆ.” ಇದರ ಜೊತೆ ಅದೇ ವರ್ಷದಲ್ಲಿ 1,80,000ದಷ್ಟು ಜನ ಯುದ್ಧ, ಜಗಳದಿಂದ ಸಾವಿಗೆ ತುತ್ತಾಗಿದ್ದಾರೆ.

  • ಹೃದಯದ ಮೇಲೆ ಇಕೆಜಿ ಲೈನ್‌ ಇರೋ ಚಿತ್ರ, ಇದು ಆರೋಗ್ಯ ಸಮಸ್ಯೆನಾ ಸೂಚಿಸುತ್ತೆ.

    ಆರೋಗ್ಯ ಸಮಸ್ಯೆ.

    ನೂರು ಕೋಟಿಗಿಂತ ಹೆಚ್ಚು ಜನರು ಬೀಡಿ, ಸಿಗರೇಟ್‌ ಸೇದುತ್ತಾರೆ. ಇದ್ರಿಂದ ಲಂಗ್‌ ಕ್ಯಾನ್ಸರ್‌, ಹೃದಯ ರೋಗ, ಲಕ್ವಗಳಂಥ ಗಂಭೀರ ಕಾಯಿಲೆಗಳಿಗೆ ಅವರು ತುತ್ತಾಗಿದ್ದಾರೆ ಅಂತ ನ್ಯಾಷನಲ್‌ ಜಿಯಾಗ್ರಫಿಕ್‌ ಪತ್ರಿಕೆಯಲ್ಲಿ ಬಂದ ಒಂದು ಲೇಖನದಲ್ಲಿ ಫ್ರಾನ್‌ ಸ್ಮಿತ್‌ ಬರೆದಿದ್ದಾರೆ.

  • ಸಮತೂಕ ಇಲ್ಲದ ತಕ್ಕಡಿಯ ಚಿತ್ರ, ಇದು ಜನರ ಮಧ್ಯೆ ಇರೋ ಅಸಮಾನತೆಯನ್ನು ಸೂಚಿಸುತ್ತೆ.

    ಜನರ ಮಧ್ಯೆ ಅಸಮಾನತೆ.

    ಇಂದು ಜನರಲ್ಲಿ ಆತಂಕ, ಮಾನಸಿಕ ಒತ್ತಡ ಜಾಸ್ತಿ ಆಗೋದಕ್ಕೆ ಬಡತನ, ಜಾತಿ-ಕುಲ ಗಂಡು-ಹೆಣ್ಣು ಅನ್ನೋ ಬೇಧಭಾವ, ಧಿಡೀರ್‌ ಅಂತ ತಮ್ಮ ಊರು ಬಿಟ್ಟು ಬೇರೆ ಕಡೆ ಹೋಗೋ ಪರಿಸ್ಥಿತಿ, ಜನರಲ್ಲಿರೋ ಪೈಪೋಟಿ ಮನೋಭಾವಗಳೇ ಕಾರಣ ಅಂತ ಜೇ ವಾಟ್ಸ್‌ ಅನ್ನೋ ಸೈಕಾಲಜಿಷ್ಟ್‌ ಹೇಳುತ್ತಾರೆ.

    ಹೆಚ್ಚಿನ ಮಾಹಿತಿ ಪಡೆಯಿರಿ

    jw.orgಯಲ್ಲಿ ದೇವರು ಭೂಮಿಯನ್ನು ಯಾಕೆ ಸೃಷ್ಟಿಸಿದನು? ಅನ್ನೋ ವಿಡಿಯೋ ನೋಡಿ.

ಬೈಬಲ್‌ ಏನು ಹೇಳುತ್ತೆ

ಆಗಲೇ ನೋಡಿದ ಅದೇ ವ್ಯಕ್ತಿ ಆಸ್ಪತ್ರೆಯ ಹಾಸಿಗೆಯ ಮೇಲೆ ಇದ್ದಾನೆ, ಡಾಕ್ಟರ್‌ ಗಂಡನ ಬಗ್ಗೆ ಕೆಟ್ಟ ಸುದ್ದಿಯನ್ನು ಕೊಟ್ಟಾಗ ಹೆಂಡತಿ ಬೇರೆ ಕಡೆ ತಿರುಗುತ್ತಿದ್ದಾರೆ.

ಲೋಕದಲ್ಲಿ ಇರೋ ಅನೇಕ ಕಷ್ಟಗಳಿಗೆ ಮನುಷ್ಯರೇ ಕಾರಣ.

ಹೆಚ್ಚಿನ ಕಷ್ಟಗಳಿಗೆ ಮಾನವ ಸರ್ಕಾರಗಳೇ ಕಾರಣ. ಅವರು ಆಳ್ವಿಕೆ ನಡೆಸೋ ರೀತಿಯಿಂದ ಪ್ರಜೆಗಳು ಕಷ್ಟಗಳನ್ನ ಅನುಭವಿಸುತ್ತಿದ್ದಾರೆ.

‘ಮಾನವನು ಮತ್ತೊಬ್ಬ ಮಾನವನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿಯನ್ನು ಉಂಟುಮಾಡುತ್ತಿದ್ದಾನೆ.’—ಪ್ರಸಂಗಿ 8:9.

ಕಷ್ಟಗಳನ್ನು ಕಮ್ಮಿ ಮಾಡಬಹುದು.

ಬೈಬಲ್‌ ಸಲಹೆಗಳನ್ನ ಪಾಲಿಸಿದ್ರೆ ಒಳ್ಳೇ ಆರೋಗ್ಯ ಇರುತ್ತೆ ಮತ್ತು ಜನರೊಂದಿಗೆ ಸ್ನೇಹ ಸಂಬಂಧನೂ ಚೆನ್ನಾಗಿರುತ್ತೆ.

‘ಶಾಂತಿಗುಣ ದೇಹಕ್ಕೆ ಜೀವಾಧಾರ; ಕ್ರೋಧ ಎಲುಬಿಗೆ ಕ್ಷಯ.’—ಜ್ಞಾನೋಕ್ತಿ 14:30.

“ಎಲ್ಲ ದ್ವೇಷಭರಿತ ವೈಷಮ್ಯ, ಕೋಪ, ಕ್ರೋಧ, ಕಿರಿಚಾಟ ಮತ್ತು ನಿಂದಾತ್ಮಕ ಮಾತುಗಳನ್ನು ಸಕಲ ವಿಧವಾದ ಕೆಟ್ಟತನದೊಂದಿಗೆ ನಿಮ್ಮಿಂದ ತೆಗೆದುಹಾಕಿರಿ.”—ಎಫೆಸ 4:31.

ನಮ್ಮ ಕಷ್ಟಗಳಿಗೆ ನಾವೇ ಕಾರಣನಾ?

“ಮನುಷ್ಯನು ಏನು ಬಿತ್ತುತ್ತಿದ್ದಾನೊ ಅದನ್ನೇ ಕೊಯ್ಯುವನು” ಅಂತ ಬೈಬಲ್‌ ಹೇಳುತ್ತೆ. (ಗಲಾತ್ಯ 6:7) ನಾವು ಮಾಡೋ ತಪ್ಪಾದ ಆಯ್ಕೆಯಿಂದನೂ ಕೆಲವೊಮ್ಮೆ ಕಷ್ಟಗಳು ಬರುತ್ತೆ. ಅದಕ್ಕೆ ಡಾಕ್ಟರ್‌ಗಳು ಸಹ ಪೌಷ್ಠಿಕ ಆಹಾರ ತಿನ್ನೋಕೆ, ವ್ಯಾಯಾಮ ಮಾಡೋಕೆ ಮತ್ತು ಕೆಟ್ಟ ಚಟಗಳನ್ನು ಬಿಟ್ಟು ಬಿಡೋಕೆ ಹೇಳುತ್ತಾರೆ. ಆದ್ರೆ ಎಲ್ಲಾ ಕಷ್ಟಗಳಿಗೂ ಮನುಷ್ಯರೇ ಕಾರಣ ಅಂತ ಹೇಳಕ್ಕಾಗಲ್ಲ. ಯಾಕಂದ್ರೆ ಏನೂ ತಪ್ಪು ಮಾಡದ ಒಳ್ಳೇ ಜನರಿಗೂ ಅಪಘಾತಗಳು, ದುರಂತಗಳು ತಪ್ಪಿದ್ದಲ್ಲ.

ಹಾಗಾದ್ರೆ ಒಳ್ಳೇ ಜನರಿಗೆ ಯಾಕೆ ಕಷ್ಟ ಬರುತ್ತೆ?

ಮುಂದಿನ ಪುಟ ನೋಡಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ