ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • hf ಭಾಗ 8 ಪು. 26-28
  • ಸಂಕಷ್ಟದ ಸುಳಿಯಲ್ಲಿ ಸಿಲುಕಿದಾಗ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸಂಕಷ್ಟದ ಸುಳಿಯಲ್ಲಿ ಸಿಲುಕಿದಾಗ
  • ಸುಖೀ ಸಂಸಾರ ಸಾಧ್ಯ!
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • 1 ಯೆಹೋವನನ್ನು ಅವಲಂಬಿಸಿ
  • 2 ನಿಮ್ಮ ಮತ್ತು ನಿಮ್ಮ ಕುಟುಂಬದವರ ಕಾಳಜಿ ವಹಿಸಿ
  • 3 ಸಹಾಯ ಸ್ವೀಕರಿಸಿ
  • ಆರೋಗ್ಯ ಸಮಸ್ಯೆ ನಿಭಾಯಿಸೋದು ಹೇಗೆ?
    ಇತರ ವಿಷಯಗಳು
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
  • ಯೆಹೋವ ನಮ್ಮನ್ನ ತನ್ನ ಕಣ್ಗಾವಲಲ್ಲಿ ಇಟ್ಟುಕೊಂಡಿದ್ದಾನೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • ಹತಾಶೆಯ ನಡುವೆಯೂ ನಿರೀಕ್ಷೆಯನ್ನು ಕಂಡುಕೊಳ್ಳುವ ವಿಧ
    ಕಾವಲಿನಬುರುಜು—1997
ಇನ್ನಷ್ಟು
ಸುಖೀ ಸಂಸಾರ ಸಾಧ್ಯ!
hf ಭಾಗ 8 ಪು. 26-28
ಸಾವಿನಲ್ಲಿ ಕಳೆದುಕೊಂಡ ತಮ್ಮ ಮಗುವನ್ನು ನೆನಪಿಸಿಕೊಂಡು ಅಳುತ್ತಿರುವ ಅಪ್ಪ-ಅಮ್ಮ

ಭಾಗ 8

ಸಂಕಷ್ಟದ ಸುಳಿಯಲ್ಲಿ ಸಿಲುಕಿದಾಗ . . .

‘ನೀವು ಸದ್ಯಕ್ಕೆ ಸ್ವಲ್ಪಕಾಲ ನಾನಾ ವಿಧವಾದ ಪರೀಕ್ಷೆಗಳಿಂದ ದುಃಖಿಸುವವರಾಗಿದ್ದರೂ ಬಹಳವಾಗಿ ಹರ್ಷಿಸುವವರಾಗಿದ್ದೀರಿ.’ —1 ಪೇತ್ರ 1:6

ನಿಮ್ಮ ಸಂಸಾರದಲ್ಲಿ ಸಂತೋಷವಿರಬೇಕೆಂದು ನೀವೆಷ್ಟೇ ಪ್ರಯತ್ನಿಸಿದರೂ, ಕೆಲವೊಮ್ಮೆ ಅನಿರೀಕ್ಷಿತ ಘಟನೆಗಳು ನಿಮ್ಮ ಆನಂದವನ್ನು ಕಸಿದುಕೊಳ್ಳುತ್ತವೆ. (ಪ್ರಸಂಗಿ 9:11) ಆದರೆ ಸಂಕಷ್ಟಗಳನ್ನು ಎದುರಿಸುವಾಗ ದೇವರು ಪ್ರೀತಿಪೂರ್ವಕವಾಗಿ ಸಹಾಯಹಸ್ತ ನೀಡುತ್ತಾನೆ. ಕೆಳಗಿನ ಬೈಬಲ್‌ ತತ್ವಗಳನ್ನು ನೀವು ಮತ್ತು ನಿಮ್ಮ ಕುಟುಂಬದವರು ಅನ್ವಯಿಸುವಲ್ಲಿ, ಕಡು ಕಷ್ಟಕರ ಸನ್ನಿವೇಶಗಳನ್ನು ಸಹ ನಿಭಾಯಿಸಲು ಸಾಧ್ಯವಾಗುತ್ತದೆ.

1 ಯೆಹೋವನನ್ನು ಅವಲಂಬಿಸಿ

ಬೈಬಲಿನ ಹಿತವಚನ: “ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಏಕೆಂದರೆ ಆತನು ನಿಮಗೋಸ್ಕರ ಚಿಂತಿಸುತ್ತಾನೆ.” (1 ಪೇತ್ರ 5:7) ನಿಮ್ಮ ಕಷ್ಟಸಂಕಟಗಳಿಗೆ ದೇವರು ಕಾರಣನಲ್ಲ ಎನ್ನುವುದನ್ನು ಯಾವಾಗಲೂ ನೆನಪಿನಲ್ಲಿಡಿ. (ಯಾಕೋಬ 1:13) ನೀವು ಆತನಿಗೆ ಆಪ್ತರಾಗುವಲ್ಲಿ ಆತನು ನಿಮಗೆ ಅತ್ಯುತ್ತಮ ರೀತಿಯಲ್ಲಿ ಸಹಾಯ ಮಾಡುತ್ತಾನೆ. (ಯೆಶಾಯ 41:10) ಪ್ರಾರ್ಥನೆಯಲ್ಲಿ “ನಿಮ್ಮ ಹೃದಯವನ್ನು ಆತನ ಮುಂದೆ ಬಿಚ್ಚಿರಿ.” —ಕೀರ್ತನೆ 62:8.

ಪ್ರತಿದಿನ ಬೈಬಲನ್ನು ಓದಿ ಅಧ್ಯಯನ ಮಾಡುವುದರಿಂದ ಸಾಂತ್ವನ ಸಿಗುತ್ತದೆ. ಫಲಿತಾಂಶವಾಗಿ, ಯೆಹೋವನು “ನಮ್ಮ ಎಲ್ಲ ಸಂಕಟಗಳಲ್ಲಿ . . . ನಮ್ಮನ್ನು ಸಾಂತ್ವನಗೊಳಿಸುತ್ತಾನೆ” ಎನ್ನುವುದನ್ನು ಸ್ವತಃ ತಿಳಿದುಕೊಳ್ಳುವಿರಿ. (2 ಕೊರಿಂಥ 1:3, 4; ರೋಮನ್ನರಿಗೆ 15:4) ‘ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿಯನ್ನು’ ನಿಮಗೆ ಕೊಡುವನೆಂದು ಆತನು ಮಾತು ಕೊಟ್ಟಿದ್ದಾನೆ.—ಫಿಲಿಪ್ಪಿ 4:6, 7, 13.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯೊಬ್ಬನು ತನ್ನ ಕುಟುಂಬದೊಟ್ಟಿಗೆ ಪ್ರಾರ್ಥಿಸುತ್ತಿರುವುದು

ಹೀಗೆ ಮಾಡಿ:

  • ಸಮಾಧಾನದಿಂದಿರಲು ಮತ್ತು ಸರಿಯಾಗಿ ಯೋಚಿಸಲು ಸಹಾಯಕ್ಕಾಗಿ ಯೆಹೋವನಿಗೆ ಪ್ರಾರ್ಥಿಸಿ

  • ನಿಮಗೆ ಎದುರಾಗಿರುವ ಪರಿಸ್ಥಿತಿಯನ್ನು ನಿಭಾಯಿಸಲು ಏನೇನು ಮಾಡಬಹುದೆಂದು ಯೋಚಿಸಿ, ತಕ್ಕ ಕ್ರಮ ಕೈಗೊಳ್ಳಿ

2 ನಿಮ್ಮ ಮತ್ತು ನಿಮ್ಮ ಕುಟುಂಬದವರ ಕಾಳಜಿ ವಹಿಸಿ

ಬೈಬಲಿನ ಹಿತವಚನ: “ವಿವೇಕಿಯ ಹೃದಯವು ತಿಳುವಳಿಕೆಯನ್ನು ಸಂಪಾದಿಸುವದು; ಜ್ಞಾನಿಯ ಕಿವಿಯು ತಿಳುವಳಿಕೆಯನ್ನು ಹುಡುಕುವದು.” (ಜ್ಞಾನೋಕ್ತಿ 18:15) ಈ ಸಲಹೆಯಂತೆ, ನೀವು ನಿಜ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಕುಟುಂಬದಲ್ಲಿರುವ ಪ್ರತಿಯೊಬ್ಬರಿಗೆ ಯಾವುದರ ಅವಶ್ಯಕತೆಯಿದೆ ಅಂತ ತಿಳಿದುಕೊಳ್ಳಿ. ಹೇಗೆ? ಹೇಗೆಂದರೆ ಅವರೊಟ್ಟಿಗೆ ಮಾತಾಡಿ, ಅವರು ಹೇಳೋ ಮಾತಿಗೂ ಕಿವಿಗೊಡಿ.—ಜ್ಞಾನೋಕ್ತಿ 20:5.

ನೀವು ತುಂಬಾ ಪ್ರೀತಿಸುವ ಯಾರಾದರೂ ತೀರಿಕೊಂಡಾಗ ಆಗುವ ದುಃಖವನ್ನು ಮಾತಿನಲ್ಲಿ ಹೇಳಲು ಅಸಾಧ್ಯ. ಆದ್ದರಿಂದ ಮನಸ್ಸು ಹಗುರವಾಗುವ ತನಕ ಅತ್ತುಬಿಡಿ. ‘ಯೇಸು ಸಹ ಕಣ್ಣೀರು ಸುರಿಸಿದನು’ ಅಂತ ಬೈಬಲ್‌ ಹೇಳುತ್ತದೆ. (ಯೋಹಾನ 11:35; ಪ್ರಸಂಗಿ 3:4) ನೆಮ್ಮದಿಗಾಗಿ ಸಾಕಷ್ಟು ವಿಶ್ರಾಂತಿ ಪಡೆಯಿರಿ. (ಪ್ರಸಂಗಿ 4:6) ಹೀಗೆ ಮಾಡುವಲ್ಲಿ ಯಾವುದೇ ಸಂಕಷ್ಟಕರ ಪರಿಸ್ಥಿತಿಯನ್ನು ಸುಲಭವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ.

ಹೀಗೆ ಮಾಡಿ:

  • ನಿಮ್ಮ ಕುಟುಂಬದವರ ಜೊತೆ ಮಾತಾಡುವ ರೂಢಿ ನಿಮಗಿರುವುದಾದರೆ ಸಂಕಷ್ಟಗಳು ಬರುವಾಗ ಅವರು ನಿಮ್ಮ ಜೊತೆ ಮಾತಾಡಲು ಹಿಂಜರಿಯುವುದಿಲ್ಲ

  • ನಿಮ್ಮಂಥದ್ದೇ ಸಮಸ್ಯೆಯನ್ನು ಎದುರಿಸಿರುವವರೊಂದಿಗೆ ಮಾತಾಡಿ ಅವರ ಸಲಹೆ ಪಡೆಯಿರಿ

3 ಸಹಾಯ ಸ್ವೀಕರಿಸಿ

ಬೈಬಲಿನ ಹಿತವಚನ: “ಮಿತ್ರನ ಪ್ರೀತಿಯು ನಿರಂತರ; ಸಹೋದರನ ಜನ್ಮವು ಆಪತ್ತಿನಲ್ಲಿ ಸಾರ್ಥಕ.” (ಜ್ಞಾನೋಕ್ತಿ 17:17) ನಿಮಗೆ ಸಹಾಯ ಮಾಡಬೇಕು ಅಂತ ನಿಮ್ಮ ಸ್ನೇಹಿತರು ಬಯಸುತ್ತಾರೆ, ಆದರೆ ಅವರಿಗೆ ಏನು ಮಾಡಬೇಕೆಂದು ತೋಚದೆ ಇರಬಹುದು. ಹಾಗಾಗಿ, ನಿಮಗೆ ಯಾವ ಸಹಾಯಬೇಕು ಅಂತ ಹೇಳೋದಕ್ಕೆ ಹಿಂಜರಿಯಬೇಡಿ. (ಜ್ಞಾನೋಕ್ತಿ 12:25) ಅದರೊಂದಿಗೆ ಬೈಬಲಿನ ಒಳ್ಳೆಯ ಜ್ಞಾನವಿರುವ ವ್ಯಕ್ತಿಗಳಿಂದ ಆಧ್ಯಾತ್ಮಿಕ ಸಹಾಯ ಪಡೆಯಿರಿ. ಅವರು ಬೈಬಲಿನಿಂದ ಕೊಡುವ ಮಾರ್ಗದರ್ಶನ ನಿಮಗೆ ಹೆಚ್ಚು ಪ್ರಯೋಜನ ತರುವುದು.—ಯಾಕೋಬ 5:14.

ದೇವರಲ್ಲಿ ನಂಬಿಕೆ ಇಟ್ಟು, ಆತನ ವಾಗ್ದಾನಗಳು ಖಂಡಿತ ನೆರವೇರುತ್ತವೆಂದು ಭರವಸೆ ಇಟ್ಟಿರುವ ಜನರೊಂದಿಗೆ ಸಹವಾಸ ಮಾಡಿ. ಆಗ ನಿಮಗೆ ಬೇಕಾದ ಬೆಂಬಲ ಸಿಗುತ್ತದೆ. ಪ್ರೋತ್ಸಾಹದ ಅಗತ್ಯವಿರುವವರಿಗೆ ಸಹಾಯ ಮಾಡುವಾಗಲೂ ನಿಮಗೆ ಸಾಂತ್ವನ ಸಿಗುತ್ತದೆ. ಯೆಹೋವನ ಮೇಲೆ ಮತ್ತು ಆತನ ವಾಗ್ದಾನಗಳ ಮೇಲೆ ನಿಮಗಿರುವ ನಂಬಿಕೆಯನ್ನು ಅವರೊಂದಿಗೆ ಹಂಚಿಕೊಳ್ಳಿ. ಅಗತ್ಯವಿರುವವರಿಗೆ ಸಹಾಯ ಮಾಡುವುದರಲ್ಲಿ ಕಾರ್ಯಮಗ್ನರಾಗಿರಿ. ನಿಮ್ಮ ಬಗ್ಗೆ ಕಾಳಜಿವಹಿಸುವ ಮತ್ತು ನಿಮ್ಮನ್ನು ಪ್ರೀತಿಸುವ ಜನರಿಂದ ಎಂದಿಗೂ ದೂರವಿರಬೇಡಿ.—ಜ್ಞಾನೋಕ್ತಿ 18:1; 1 ಕೊರಿಂಥ 15:58.

ಹೀಗೆ ಮಾಡಿ:

  • ನಿಮ್ಮ ಆಪ್ತ ಗೆಳೆಯ/ಗೆಳತಿಯ ಜೊತೆ ಮಾತಾಡಿ, ಅವರ ಸಹಾಯ ಪಡೆಯಿರಿ

  • ನಿಮಗೆ ಯಾವ ಸಹಾಯ ಬೇಕೊ ಅದನ್ನು ನಿರ್ದಿಷ್ಟವಾಗಿ, ಪ್ರಾಮಾಣಿಕವಾಗಿ ಹೇಳಿ

ನಿಮ್ಮ ಕಷ್ಟಗಳ ಬಗ್ಗೆನೇ ಯೋಚಿಸುತ್ತಿರಬೇಡಿ

ಸಂಕಷ್ಟಗಳಿಂದ ನೀವು ತತ್ತರಿಸಿ ಹೋಗಿದ್ದರೂ, ಯೆಹೋವನ ಮೇಲೆ ನಿಮ್ಮ ಮನಸ್ಸಿಡಿ. ನಮ್ಮಂಥ ಕಷ್ಟಗಳನ್ನೇ ಅನುಭವಿಸಿದ ಯೋಬ “ಯೆಹೋವನ ನಾಮಕ್ಕೆ ಸ್ತೋತ್ರವಾಗಲಿ” ಎಂದು ಹೇಳಿದನು. (ಯೋಬ 1:21, 22) ಕೇವಲ ನಿಮ್ಮ ಕಷ್ಟಗಳ ಬಗ್ಗೆನೇ ಚಿಂತಿಸದೆ, ಯೋಬನಂತೆ ನೀವು ಸಹ ಯೆಹೋವನ ನಾಮ ಮತ್ತು ಆತನ ಚಿತ್ತದ ಬಗ್ಗೆ ಚಿಂತಿಸಬೇಕು. ಎಲ್ಲ ವಿಷಯಗಳು ನೀವು ಅಂದುಕೊಂಡಂತೆ ಆಗದಿದ್ದಾಗ ಬೇಸರಪಟ್ಟು ಕೈಚೆಲ್ಲಿ ಕೂರಬೇಡಿ. ದೇವರ ಮೇಲೆ ಪೂರ್ಣ ಭರವಸೆಯಿಡಿ. ಏಕೆಂದರೆ ಯೆಹೋವನ ಆಶ್ವಾಸನೆ ಹೀಗಿದೆ: “‘ಇವರಿಗೆ . . . ನಿರೀಕ್ಷೆಯಿರಲಿ ಎಂದು ನಾನು ನಿಮ್ಮ ವಿಷಯದಲ್ಲಿ ಮಾಡಿಕೊಳ್ಳುತ್ತಿರುವ ಆಲೋಚನೆಗಳನ್ನು ನಾನೇ ಬಲ್ಲೆನು; ಅವು ಅಹಿತದ ಯೋಚನೆಗಳಲ್ಲ, ಹಿತದ ಯೋಚನೆಗಳೇ.’”—ಯೆರೆಮೀಯ 29:11.

ನಿಮ್ಮನ್ನೇ ಕೇಳಿಕೊಳ್ಳಿ:

  • ಸಣ್ಣಪುಟ್ಟ ವಿಷಯಗಳಲ್ಲೂ ನಾನು ಯೆಹೋವನ ಮೇಲೆ ಪೂರ್ಣ ಭರವಸೆಯಿಡುತ್ತೇನಾ?

  • ಯೆಹೋವನು ನನಗಾಗಿ ಮಾಡಿರೋ ಒಳ್ಳೇ ವಿಷಯಗಳಿಗೆ ನಾನು ಪ್ರತಿದಿನ ಕೃತಜ್ಞತೆ ಹೇಳ್ತೀನಾ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ