ಭವಿಷ್ಯದ ಬಗ್ಗೆ ಸತ್ಯ
ಭವಿಷ್ಯದಲ್ಲಿ ಏನಾಗುತ್ತೆ ಅಂತ ನೀವು ಯಾವತ್ತಾದರೂ ಯೋಚಿಸಿದ್ದೀರಾ? ಇದಕ್ಕೆ ಉತ್ತರ ಬೈಬಲ್ನಲ್ಲಿದೆ.
ಯೇಸು ಭವಿಷ್ಯದ ಬಗ್ಗೆ ಮಾತಾಡುತ್ತಾ, “ದೇವರ ರಾಜ್ಯವು ಹತ್ತಿರದಲ್ಲಿದೆ” ಅಂತ ಹೇಳಿದನು. (ಲೂಕ 21:31) ಆ ಸಮಯದಲ್ಲಿ ದೊಡ್ಡ-ದೊಡ್ಡ ಯುದ್ಧಗಳು, ಭೂಕಂಪಗಳು, ಆಹಾರದ ಕೊರತೆ, ಅಂಟುರೋಗಗಳು ಜಾಸ್ತಿ ಆಗುತ್ತೆ ಅಂತ ತಿಳಿಸಿದನು. (ಲೂಕ 21:10-17) ಇಂದು, ಇದನ್ನೆಲ್ಲಾ ನಾವು ಕಣ್ಣಾರೆ ನೋಡುವಾಗ ದೇವರ ರಾಜ್ಯ ಹತ್ತಿರದಲ್ಲಿದೆ ಅಂತ ಗೊತ್ತಾಗುತ್ತೆ.
ಮಾನವ ಆಳ್ವಿಕೆಯ ಈ “ಕಡೇ ದಿವಸಗಳಲ್ಲಿ” ಎಂಥ ಜನ ಇರುತ್ತಾರೆ ಅಂತ ಕೂಡ ಬೈಬಲ್ ಹೇಳುತ್ತೆ. ಉದಾಹರಣೆಗೆ, ಕಡೇ ದಿವಸಗಳಲ್ಲಿ ಸ್ವಾರ್ಥ ತುಂಬಿರುವ, ಹಣಪ್ರೇಮ ಇರುವ, ಚಾಡಿಹೇಳುವ ಜನರೇ ಜಾಸ್ತಿ ಇರುತ್ತಾರೆ ಅಂತ 2 ತಿಮೊಥೆಯ 3:1-5 ರಲ್ಲಿ ನಾವು ಓದಬಹುದು. ಈಗಿನ ಜನರ ಹಾವ-ಭಾವ ನೋಡಿದ್ರೆ, ಬೈಬಲಿನ ಈ ಮಾತು ಸತ್ಯ ಅನ್ನೋದರಲ್ಲಿ ಎರಡು ಮಾತಿಲ್ಲ.
ಇದೆಲ್ಲಾ ಏನು ತೋರಿಸಿಕೊಡುತ್ತೆ? ಸಮಸ್ಯೆಗಳಿಂದ ತುಂಬಿರುವ ನಮ್ಮ ಈ ಜೀವನವನ್ನು ಬದಲಾಯಿಸುವ ದೇವರ ಸರ್ಕಾರ ತುಂಬ ಹತ್ರ ಇದೆ ಅನ್ನೋದನ್ನು ತೋರಿಸಿಕೊಡುತ್ತೆ. (ಲೂಕ 21:36) ಈ ಭೂಮಿಗೂ ನಮ್ಮೆಲ್ಲರಿಗೂ ಒಳ್ಳೇದನ್ನು ಮಾಡ್ತೀನಿ ಅಂತ ದೇವರು ಮಾತು ಕೊಟ್ಟಿರೋದನ್ನು ನಾವು ಬೈಬಲ್ನಲ್ಲಿ ಓದಬಹುದು. ಅದಕ್ಕೆ ಕೆಲವು ಉದಾಹರಣೆಗಳನ್ನು ನೋಡೋಣ.
ಒಳ್ಳೇ ಆಡಳಿತ
“ಸಕಲಜನಾಂಗಕುಲಭಾಷೆಗಳವರು ಅವನನ್ನು (ಯೇಸುವನ್ನು) ಸೇವಿಸಲೆಂದು ಅವನಿಗೆ ದೊರೆತನವೂ ಘನತೆಯೂ ರಾಜ್ಯವೂ ಕೊಡೋಣವಾದವು; ಅವನ ಆಳಿಕೆಯು ಅಂತ್ಯವಿಲ್ಲದ್ದು, ಶಾಶ್ವತವಾದದ್ದು; ಅವನ ರಾಜ್ಯವು ಎಂದಿಗೂ ಅಳಿಯದು.”—ದಾನಿಯೇಲ 7:14.
ಇದರ ಅರ್ಥ: ದೇವರ ಸರ್ಕಾರದಲ್ಲಿ ಯೇಸು ರಾಜನಾಗಿ ಆಳುತ್ತಾನೆ. ಆ ಸರ್ಕಾರ ಭೂಮಿಯನ್ನು ಆಳುವಾಗ ನಾವೆಲ್ಲರೂ ಖುಷಿಯಾಗಿರಬಹುದು.
ಒಳ್ಳೇ ಆರೋಗ್ಯ
“ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.”—ಯೆಶಾಯ 33:24.
ಇದರ ಅರ್ಥ: ಅಲ್ಲಿ ಯಾರೂ ನಮಗೆ ಹುಷಾರಿಲ್ಲ ಅಂತ ಹೇಳುವುದಿಲ್ಲ. ಅಲ್ಲಿ ಯಾವುದೇ ರೀತಿಯ ಅಂಗವಿಕಲತೆ ಇರುವುದಿಲ್ಲ. ಅಷ್ಟೇ ಅಲ್ಲ, ಸಾವು ಸಹ ಇರಲ್ಲ.
ಸಂಪೂರ್ಣ ಶಾಂತಿ
‘ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿಬಿಡುತ್ತಾನೆ.’—ಕೀರ್ತನೆ 46:9.
ಇದರ ಅರ್ಥ: ಯುದ್ಧಗಳೇ ಇರಲ್ಲ ಅಂದಮೇಲೆ, ಯುದ್ಧದಿಂದ ಆಗೋ ಸಾವು-ನೋವುಗಳ ಭಯನೂ ಇರಲ್ಲ.
ಭೂಮಿ ತುಂಬ ಒಳ್ಳೇ ಜನರೇ ಇರುತ್ತಾರೆ
“ದುಷ್ಟನು ಕಾಣಿಸದೆ ಹೋಗುವನು . . . ದೀನರು ದೇಶವನ್ನು ಅನುಭವಿಸುವರು.”—ಕೀರ್ತನೆ 37:10, 11.
ಇದರ ಅರ್ಥ: ಈ ಭೂಮೀಲಿ ಕೆಟ್ಟವರೇ ಇರಲ್ಲ. ದೇವರ ಮಾತನ್ನು ಕೇಳೋರು ಮಾತ್ರ ಇರ್ತಾರೆ.
ಇಡೀ ಭೂಮಿ ಸುಂದರ ತೋಟ ಆಗುತ್ತೆ
“ಅಲ್ಲಿನ ಜನರು ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, ತಾವು ಮಾಡಿದ ತೋಟಗಳ ಫಲವನ್ನು ತಾವೇ ಅನುಭವಿಸುವರು.”—ಯೆಶಾಯ 65:21.
ಇದರ ಅರ್ಥ: ದೇವರ ಇಷ್ಟದಂತೆ ಈ ಭೂಮಿ ಆಗುತ್ತೆ ಅಂದರೆ, ದೇವರು ಇಡೀ ಭೂಮಿಯನ್ನು ಒಂದು ಸುಂದರ ತೋಟದಂತೆ ಮಾಡುತ್ತಾನೆ.—ಮತ್ತಾಯ 6:10.