ಬೈಬಲಿನಲ್ಲಿರುವ ರತ್ನಗಳು | ಎಸ್ತೇರಳು 6-10
ಎಸ್ತೇರಳು ಯೆಹೋವನ ಮತ್ತು ಆತನ ಜನರ ಪರವಾಗಿ ನಿಸ್ವಾರ್ಥದಿಂದ ಕ್ರಿಯೆಗೈದಳು
ಯೆಹೋವ ಮತ್ತು ಆತನ ಜನರನ್ನು ಸಮರ್ಥಿಸಲು ಎಸ್ತೇರಳು ಧೈರ್ಯ ಮತ್ತು ನಿಸ್ವಾರ್ಥ ಗುಣ ತೋರಿಸಿದಳು
ಎಸ್ತೇರಳು ಮತ್ತು ಮೊರ್ದೆಕೈ ಸುರಕ್ಷಿತರಾಗಿದ್ದರು. ಆದರೆ ಎಲ್ಲ ಯೆಹೂದ್ಯರನ್ನು ಕೊಲ್ಲಬೇಕೆಂಬ ಹಾಮಾನನ ಆಜ್ಞೆ ರಾಜ್ಯದ ಮೂಲೆ ಮೂಲೆಯನ್ನು ತಲುಪಿತ್ತು
ಎಸ್ತೇರಳು ತನ್ನ ಜೀವವನ್ನು ಮತ್ತೆ ಅಪಾಯಕ್ಕೊಡ್ಡಿಕೊಂಡು ರಾಜನ ಅಪ್ಪಣೆಯಿಲ್ಲದೆ ಅವನ ಆಸ್ಥಾನಕ್ಕೆ ಹೋದಳು. ಆಕೆ ರಾಜನ ಮುಂದೆ ಅತ್ತು, ಹಾಮಾನನು ಹೊರಡಿಸಿದ ಆಜ್ಞೆಯನ್ನು ರದ್ದುಮಾಡುವಂತೆ ಕೇಳಿಕೊಂಡಳು
ರಾಜನ ಹೆಸರಿನಲ್ಲಿ ಹೊರಡಿಸಲಾದ ಆಜ್ಞೆಯನ್ನು ಹಿಂತೆಗೆದುಕೊಳ್ಳಲು ಸಾಧ್ಯವಿರಲಿಲ್ಲ. ಆದ್ದರಿಂದ ಎಸ್ತೇರಳು ಮತ್ತು ಮೊರ್ದೆಕೈ ಹೊಸ ಆಜ್ಞೆಯನ್ನು ಹೊರಡಿಸುವಂತೆ ರಾಜನೇ ಅಪ್ಪಣೆ ನೀಡಿದನು
ಯೆಹೋವನು ತನ್ನ ಜನರಿಗೆ ಮಹಾ ಜಯವನ್ನು ಕೊಟ್ಟನು
ಯೆಹೂದ್ಯರು ತಮ್ಮ ರಕ್ಷಣೆಗಾಗಿ ಹೋರಾಡುವಂತೆ ಎರಡನೇ ಘೋಷಣೆ ಹೊರಡಿಸಲಾಯಿತು
ಸವಾರರು ಸಾಮ್ರಾಜ್ಯದ ಮೂಲೆ ಮೂಲೆಯಲ್ಲೆಲ್ಲಾ ವಿಷಯವನ್ನು ಸಾರಿದರು ಮತ್ತು ಯೆಹೂದ್ಯರು ಯುದ್ಧಕ್ಕೆ ಸಿದ್ಧರಾದರು
ದೇವರ ಅನುಗ್ರಹವನ್ನು ನೋಡಿದ ಅನೇಕರು ಯೆಹೂದಿ ಮತಾವಲಂಬಿಗಳಾದರು