ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb18 ಮಾರ್ಚ್‌ ಪು. 7
  • “ಸದಾ ಎಚ್ಚರವಾಗಿರಿ”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಸದಾ ಎಚ್ಚರವಾಗಿರಿ”
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
  • ಅನುರೂಪ ಮಾಹಿತಿ
  • “ಸದಾ ಎಚ್ಚರವಾಗಿ” ಇರುವಿರಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
  • ಎಚ್ಚೆತ್ಕೊಳ್ಳಿ! ಇದು ಯೇಸು ಕೊಟ್ಟ ಎಚ್ಚರಿಕೆ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ‘ನಂಬಿಗಸ್ತನಾದ ಆಳು’ ಪರೀಕ್ಷೆಯಲ್ಲಿ ಉತ್ತೀರ್ಣನಾಗುತ್ತಾನೆ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
  • ನಿಯಮರಾಹಿತ್ಯನನ್ನು ಬಯಲಿಗೆ ಎಳೆಯಲಾಗುತ್ತದೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
mwb18 ಮಾರ್ಚ್‌ ಪು. 7
ಯೇಸು ಹೇಳಿದ ದೃಷ್ಟಾಂತದಲ್ಲಿರುವ ಹತ್ತು ಕನ್ಯೆಯರು

ಬೈಬಲಿನಲ್ಲಿರುವ ರತ್ನಗಳು | ಮತ್ತಾಯ 25

“ಸದಾ ಎಚ್ಚರವಾಗಿರಿ”

25:1-12

ಯೇಸು ಹತ್ತು ಕನ್ಯೆಯರ ಕುರಿತ ದೃಷ್ಟಾಂತವನ್ನು ತನ್ನ ಅಭಿಷಿಕ್ತ ಹಿಂಬಾಲಕರನ್ನು ಮನಸ್ಸಿನಲ್ಲಿಟ್ಟು ಹೇಳಿದನಾದರೂ ಅದರಲ್ಲಿರುವ ಸಂದೇಶ ಎಲ್ಲಾ ಕ್ರೈಸ್ತರಿಗೆ ಅನ್ವಯವಾಗುತ್ತದೆ. (w15 3/15 ಪುಟ 12-16) “ಆದುದರಿಂದ ಆ ದಿನವಾಗಲಿ ಗಳಿಗೆಯಾಗಲಿ ನಿಮಗೆ ತಿಳಿಯದ ಕಾರಣ ಸದಾ ಎಚ್ಚರವಾಗಿರಿ.” (ಮತ್ತಾ 25:13) ಯೇಸು ಕೊಟ್ಟ ದೃಷ್ಟಾಂತವನ್ನು ನೀವು ವಿವರಿಸಬಲ್ಲಿರಾ?

  • ಮದುಮಗ (ವಚನ 1)—ಯೇಸು

  • ಸಿದ್ಧವಾಗಿದ್ದ ಬುದ್ಧಿವಂತೆಯರಾದ ಕನ್ಯೆಯರು (ವಚನ 2)—ತಮ್ಮ ನೇಮಕವನ್ನು ನಂಬಿಗಸ್ತಿಕೆಯಿಂದ ಪೂರೈಸಲು ಸಿದ್ಧವಾಗಿರುವ ಮತ್ತು ಕೊನೆಯ ತನಕ ಬೆಳಕು ಕೊಡುವ ವ್ಯಕ್ತಿಗಳಾಗಿ ಹೊಳೆಯುವ ಅಭಿಷಿಕ್ತ ಕ್ರೈಸ್ತರು (ಫಿಲಿ 2:15)

  • “ಮದುಮಗನು ಬರುತ್ತಿದ್ದಾನೆ!” ಎಂಬ ಕೂಗು (ವಚನ 6) —ಯೇಸುವಿನ ಸಾನ್ನಿಧ್ಯದ ಪುರಾವೆ

  • ಬುದ್ಧಿಹೀನೆಯರಾದ ಕನ್ಯೆಯರು (ವಚನ 8)—ಮದುಮಗನನ್ನು ಬರಮಾಡಿಕೊಳ್ಳಲು ಹೋದವರು, ಆದರೆ ಎಚ್ಚರವಾಗಿರಲು ತಪ್ಪಿಹೋದ ಮತ್ತು ಸಮಗ್ರತೆ ಕಾಪಾಡಿಕೊಳ್ಳದೆ ಹೋದ ಅಭಿಷಿಕ್ತ ಕ್ರೈಸ್ತರು

  • ಬುದ್ಧಿವಂತೆಯರಾದ ಕನ್ಯೆಯರು ತಮ್ಮ ಎಣ್ಣೆಯನ್ನು ಕೊಡುವುದಿಲ್ಲ (ವಚನ 9)—ಕೊನೆಯ ಮುದ್ರೆ ಒತ್ತಿಯಾದ ಮೇಲೆ ನಂಬಿಗಸ್ತ ಅಭಿಷಿಕ್ತರು ಅಪನಂಬಿಗಸ್ತರಾದವರಿಗೆ ಸಹಾಯ ಮಾಡಲು ಸಾಧ್ಯವಿಲ್ಲ

  • “ಮದುಮಗನು ಬಂದನು” (ವಚನ 10)—ಮಹಾ ಸಂಕಟ ಅಂತ್ಯಗೊಳ್ಳುವಾಗ ಯೇಸು ನ್ಯಾಯತೀರಿಸಲು ಬರುವನು

  • ಬುದ್ಧಿವಂತೆಯರಾದ ಕನ್ಯೆಯರು ಮದುಮಗನೊಂದಿಗೆ ಮದುವೆಯ ಔತಣಕ್ಕೆ ಹೋಗುತ್ತಾರೆ ಮತ್ತು ಬಾಗಿಲನ್ನು ಮುಚ್ಚಲಾಗುತ್ತದೆ (ವಚನ 10)—ಯೇಸು ತನ್ನ ನಂಬಿಗಸ್ತ ಅಭಿಷಿಕ್ತರನ್ನು ಸ್ವರ್ಗಕ್ಕೆ ಕೊಂಡೊಯ್ಯುತ್ತಾನೆ, ಆದರೆ ಅಪನಂಬಿಗಸ್ತರು ತಮ್ಮ ಸ್ವರ್ಗೀಯ ಬಹುಮಾನವನ್ನು ಕಳಕೊಳ್ಳುತ್ತಾರೆ

ಅಭಿಷಿಕ್ತರಲ್ಲಿ ತುಂಬ ಮಂದಿ ಅಪನಂಬಿಗಸ್ತರಾಗುತ್ತಾರೆ ಮತ್ತು ಅವರ ಸ್ಥಾನದಲ್ಲಿ ಬೇರೆಯವರನ್ನು ನೇಮಿಸಲಾಗುತ್ತದೆ ಎಂದು ದೃಷ್ಟಾಂತ ಹೇಳುತ್ತಿಲ್ಲ. ಬದಲಿಗೆ ಇದರಲ್ಲಿ ಒಂದು ಎಚ್ಚರಿಕೆ ಇದೆ. ಪ್ರತಿಯೊಬ್ಬ ಅಭಿಷಿಕ್ತ ಕ್ರೈಸ್ತನು ಸಿದ್ಧವಾಗಿದ್ದು ನಂಬಿಗಸ್ತನಾಗಿರುತ್ತಾನಾ ಅಥವಾ ಎಚ್ಚರವಾಗಿಲ್ಲದೆ ಅಪನಂಬಿಗಸ್ತನಾಗುವನಾ ಎಂದು ಸ್ವತಃ ತೀರ್ಮಾನಿಸಬೇಕು. ಆದ್ದರಿಂದ “ನಿಮ್ಮನ್ನು ಸಿದ್ಧರಾಗಿಟ್ಟುಕೊಳ್ಳಿರಿ” ಎಂದು ಯೇಸು ಉತ್ತೇಜಿಸಿದನು. (ಮತ್ತಾ 24:44) ನಮ್ಮ ನಿರೀಕ್ಷೆ ಯಾವುದೇ ಇರಲಿ, ನಾವೆಲ್ಲರೂ ನಮ್ಮ ಹೃದಯವನ್ನು ಸಿದ್ಧಪಡಿಸಿಕೊಂಡು ನಂಬಿಗಸ್ತ ಸೇವೆ ಸಲ್ಲಿಸಬೇಕು ಮತ್ತು ಸದಾ ಎಚ್ಚರ ವಹಿಸಬೇಕೆಂದು ಯೇಸು ಬಯಸುತ್ತಾನೆ.

ನಾನು ಎಚ್ಚರವಾಗಿದ್ದೇನೆ ಎಂದು ಹೇಗೆ ತೋರಿಸುತ್ತಿದ್ದೇನೆ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ