-
“ನಿನ್ನ ಹರಕೆಯನ್ನು ಒಪ್ಪಿಸು”ಕಾವಲಿನಬುರುಜು (ಅಧ್ಯಯನ)—2017 | ಏಪ್ರಿಲ್
-
-
7. (ಎ) ಹನ್ನ ದೇವರಿಗೆ ಏನೆಂದು ಮಾತು ಕೊಟ್ಟಳು? ಯಾಕೆ? ಆಮೇಲೆ ಏನಾಯಿತು? (ಬಿ) ಹನ್ನ ದೇವರಿಗೆ ಹರಕೆ ಹೊತ್ತದ್ದರಿಂದ ಸಮುವೇಲನ ಜೀವನ ಹೇಗಿರಬೇಕಿತ್ತು? (ಪಾದಟಿಪ್ಪಣಿ ನೋಡಿ.)
7 ಹನ್ನಳು ಕೂಡ ಜೀವನದಲ್ಲಿ ತುಂಬ ಒತ್ತಡ ತುಂಬಿದ್ದ ಸಮಯದಲ್ಲಿ ಯೆಹೋವನಿಗೆ ಒಂದು ಮಾತು ಕೊಟ್ಟಳು. ಅವಳಿಗೆ ಮಕ್ಕಳಿರಲಿಲ್ಲ. ಆ ನೋವು ಅವಳನ್ನು ಕಿತ್ತು ತಿನ್ನುತ್ತಿತ್ತು. ಆಡಿಕೊಳ್ಳುವವರ ಬಾಯಿಗೆ ಆಹಾರವಾಗಿದ್ದಳು. (1 ಸಮು. 1:4-7, 10, 16) ಆಗ ಅವಳು ತನ್ನ ನೋವನ್ನು ಯೆಹೋವನ ಹತ್ತಿರ ತೋಡಿಕೊಂಡಳು. “ಸೇನಾಧೀಶ್ವರನಾದ ಯೆಹೋವನೇ, ನಿನ್ನ ದಾಸಿಯ ದುಃಖವನ್ನು ಪರಾಂಬರಿಸು; ನನ್ನನ್ನು ತಿರಸ್ಕರಿಸದೆ ಕನಿಕರವಿಟ್ಟು ನನಗೊಬ್ಬ ಮಗನನ್ನು ಕೊಡಬೇಕು; ಅವನು ಜೀವದಿಂದಿರುವ ತನಕ ನಿನ್ನವನಾಗಿಯೇ ಇರುವ ಹಾಗೆ ನಿನಗೆ ಪ್ರತಿಷ್ಠಿಸಿ ಕೊಡುವೆನು; ಅವನ ತಲೆಯ ಮೇಲೆ ಕ್ಷೌರ ಕತ್ತಿಯನ್ನು ಬರಗೊಡುವದಿಲ್ಲ ಎಂದು ಪ್ರಾರ್ಥಿಸಿ ಹರಕೆಮಾಡಿದಳು.”a (1 ಸಮು. 1:11) ಆ ಪ್ರಾರ್ಥನೆಯನ್ನು ಯೆಹೋವನು ಕೇಳಿದನು. ಮುಂದಿನ ವರ್ಷವೇ ಅವಳಿಗೆ ಮುದ್ದಾದ ಮಗ ಹುಟ್ಟಿದ. ಆಗ ಅವಳ ಸಂತೋಷಕ್ಕೆ ಎಲ್ಲೆನೇ ಇರಲಿಲ್ಲ! “ಯೆಹೋವನನ್ನು ಬೇಡಿ ಪಡಕೊಂಡೆನೆಂದು” ಹೇಳಿ ಮಗುವಿಗೆ ಸಮುವೇಲ ಎಂದು ಹೆಸರಿಟ್ಟಳು. (1 ಸಮು. 1:20) ಮಗ ಹುಟ್ಟಿದ ಮೇಲೆ ಅವಳು ದೇವರಿಗೆ ಕೊಟ್ಟ ಮಾತನ್ನು ಮರೆಯಲಿಲ್ಲ.
-