ಬೈಬಲಿನಲ್ಲಿರುವ ರತ್ನಗಳು | ಯೆರೆಮೀಯ 25-28
ಯೆರೆಮೀಯನಂತೆ ಧೈರ್ಯವಾಗಿರಿ
ಯೆರೂಸಲೇಮ್ ಶಿಲೋವಿನಂತೆ ನಾಶವಾಗುವುದೆಂದು ಯೆರೆಮೀಯ ಎಚ್ಚರಿಸಿದನು
ಯೆಹೋವನ ಸಾನಿಧ್ಯವನ್ನು ಪ್ರತಿನಿಧಿಸುತ್ತಿದ್ದ ಒಡಂಬಡಿಕೆಯ ಮಂಜೂಷವು ಒಂದು ಕಾಲದಲ್ಲಿ ಶಿಲೋವಿನಲ್ಲಿತ್ತು
ಆ ಮಂಜೂಷವನ್ನು ಫಿಲಿಷ್ಟಿಯರು ವಶಪಡಿಸಿಕೊಳ್ಳುವಂತೆ ಯೆಹೋವನು ಅನುಮತಿಸಿದನು. ಆಮೇಲೆ ಮಂಜೂಷ ಪುನಃ ಎಂದಿಗೂ ಶಿಲೋವಿಗೆ ಬರಲೇ ಇಲ್ಲ
ಯಾಜಕರು, ಪ್ರವಾದಿಗಳು ಮತ್ತು ಜನರು ಯೆರೆಮೀಯನಿಗೆ ಕೊಲ್ಲುವ ಬೆದರಿಕೆ ಹಾಕಿದರು
ಯೆರೂಸಲೇಮ್ ಮತ್ತು ದೇವಾಲಯದ ವಿರುದ್ಧ ಪ್ರವಾದಿಸಿದ್ದರಿಂದ ಜನರು ಯೆರೆಮೀಯನನ್ನು ಸುತ್ತುವರಿದರು
ಯೆರೆಮೀಯ ಭಯಪಟ್ಟು ಓಡಿ ಹೋಗಲಿಲ್ಲ
ಯೆಹೋವನು ಯೆರೆಮೀಯನನ್ನು ಕಾಪಾಡಿದನು
ಯೆರೆಮೀಯ ಧೈರ್ಯದಿಂದ ಇದ್ದನು ಮತ್ತು ಯೆಹೋವನು ಅವನ ಕೈ ಬಿಡಲಿಲ್ಲ
ಧೀರ ಅಹೀಕಾಮನ ಮೂಲಕ ಯೆರೆಮೀಯನನ್ನು ದೇವರು ಕಾಪಾಡಿದನು
ಯೆಹೋವನ ಸಹಾಯ ಮತ್ತು ಪ್ರೋತ್ಸಾಹದಿಂದ ಯೆರೆಮೀಯನು ಜನರಿಗೆ ಇಷ್ಟವಿಲ್ಲದ ಸಂದೇಶವನ್ನು 40 ವರ್ಷ ಸಾರಲು ಸಾಧ್ಯವಾಯಿತು