ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • my ಕಥೆ 74
  • ಭಯಪಡದ ಒಬ್ಬ ಮನುಷ್ಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಭಯಪಡದ ಒಬ್ಬ ಮನುಷ್ಯ
  • ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಅನುರೂಪ ಮಾಹಿತಿ
  • ಯೆರೆಮೀಯ ಯೆಹೋವನ ಬಗ್ಗೆ ಮಾತಾಡುವುದನ್ನು ನಿಲ್ಲಿಸಲಿಲ್ಲ
    ನಿಮ್ಮ ಮುದ್ದು ಮಕ್ಕಳಿಗೆ ಕಲಿಸಿರಿ
  • ಯೆಹೋವನು ಯೆರೆಮೀಯನನ್ನು ಸಾರಲು ಕಳುಹಿಸಿದ
    ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಯೆರೆಮೀಯ ಪುಸ್ತಕದ ಮುಖ್ಯಾಂಶಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
  • ಯೆರೆಮೀಯನಂತೆ ಧೈರ್ಯದಿಂದಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
ಇನ್ನಷ್ಟು
ಬೈಬಲ್‌ ಕಥೆಗಳ ನನ್ನ ಪುಸ್ತಕ
my ಕಥೆ 74
ಪ್ರವಾದಿ ಯೆರೆಮೀಯನು ಧೈರ್ಯದಿಂದ ಇಸ್ರಾಯೇಲ್ಯರಿಗೆ ಎಚ್ಚರಿಸುತ್ತಾನೆ ಆದರೆ ಅವರು ಅವನನ್ನು ನೋಡಿ ನಗುತ್ತಾರೆ

ಅಧ್ಯಾಯ 74

ಭಯಪಡದ ಒಬ್ಬ ಮನುಷ್ಯ

ಈ ತರುಣನಿಗೆ ಜನರು ಗೇಲಿ ಮಾಡುತ್ತಾ ಕೇಕೆ ಹಾಕಿ ನಗುತ್ತಿದ್ದಾರೆ ನೋಡಿರಿ. ಅವನು ಯಾರೆಂದು ನಿಮಗೆ ಗೊತ್ತೋ? ಅವನೇ ಯೆರೆಮೀಯ. ಅವನು ದೇವರ ಒಬ್ಬ ಮುಖ್ಯ ಪ್ರವಾದಿ.

ರಾಜ ಯೋಷೀಯನು ದೇಶದೊಳಗಿಂದ ವಿಗ್ರಹಗಳನ್ನು ನಾಶಮಾಡಲಾರಂಭಿಸಿದ ತರುವಾಯ ತುಸು ಸಮಯದಲ್ಲೇ ಯೆಹೋವನು ಯೆರೆಮೀಯನಿಗೆ ತನ್ನ ಪ್ರವಾದಿಯಾಗುವಂತೆ ಹೇಳುತ್ತಾನೆ. ಆದರೆ, ಯೆರೆಮೀಯನು ತಾನು ಪ್ರವಾದಿಯಾಗಲು ತೀರ ಚಿಕ್ಕವನೆಂದು ನೆನಸುತ್ತಾನೆ. ಆದರೆ ತಾನೇ ಸಹಾಯ ನೀಡುವೆನೆಂದು ಯೆಹೋವನು ಅವನಿಗೆ ಹೇಳುತ್ತಾನೆ.

ದುಷ್ಕೃತ್ಯಗಳನ್ನು ಮಾಡುವುದನ್ನು ನಿಲ್ಲಿಸುವಂತೆ ಯೆರೆಮೀಯನು ಇಸ್ರಾಯೇಲ್ಯರಿಗೆ ಹೇಳುತ್ತಾನೆ. ‘ಬೇರೆ ಜನಾಂಗಗಳು ಆರಾಧಿಸುವ ದೇವರುಗಳು ಸುಳ್ಳು’ ಎಂದು ಹೇಳುತ್ತಾನೆ ಅವನು. ಆದರೆ ಅನೇಕ ಇಸ್ರಾಯೇಲ್ಯರು ಸತ್ಯದೇವರಾದ ಯೆಹೋವನನ್ನು ಆರಾಧಿಸದೆ ಮೂರ್ತಿಗಳನ್ನೇ ಆರಾಧಿಸುತ್ತಾರೆ. ಅವರ ಆ ಕೆಟ್ಟತನಕ್ಕಾಗಿ ದೇವರು ಅವರನ್ನು ಖಂಡಿತ ಶಿಕ್ಷಿಸುವನೆಂದು ಯೆರೆಮೀಯನು ಜನರಿಗೆ ಹೇಳುವಾಗ, ಅವರು ಅವನನ್ನು ನೋಡಿ ನಗುತ್ತಾರಷ್ಟೇ.

ವರ್ಷಗಳು ದಾಟುತ್ತವೆ. ಯೋಷೀಯನು ತೀರಿಹೋಗುತ್ತಾನೆ. ಮೂರು ತಿಂಗಳುಗಳ ಅನಂತರ ಅವನ ಮಗ ಯೆಹೋಯಾಕೀನನು ಅರಸನಾಗುತ್ತಾನೆ. ಯೆರೆಮೀಯನು ಜನರಿಗೆ ‘ನೀವು ದುರ್ಮಾರ್ಗಗಳನ್ನು ಬಿಟ್ಟು ಹಿಂದಿರುಗದಿದ್ದರೆ ಯೆರೂಸಲೇಮ್‌ ನಾಶವಾಗುವುದು’ ಎಂದು ಹೇಳುತ್ತಾ ಇರುತ್ತಾನೆ. ಅದಕ್ಕೆ ಯಾಜಕರು ಯೆರೆಮೀಯನನ್ನು ಹಿಡಿದು, ‘ನೀನು ಇಂಥದ್ದನ್ನೆಲ್ಲಾ ನುಡಿಯುತ್ತಿರುವುದರಿಂದ ನಿನ್ನನ್ನು ಸುಮ್ಮನೆ ಬಿಡಬಾರದು, ಕೊಂದುಬಿಡಬೇಕು’ ಎಂದು ಕೂಗುತ್ತಾರೆ. ಬಳಿಕ ಅವರು ಇಸ್ರಾಯೇಲಿನ ಸರದಾರರಿಗೆ, ‘ಯೆರೆಮೀಯನನ್ನು ಕೊಂದುಹಾಕಬೇಕು, ಯಾಕೆಂದರೆ ಅವನು ನಮ್ಮ ಪಟ್ಟಣದ ವಿರುದ್ಧವಾಗಿ ಮಾತಾಡಿದ್ದಾನೆ’ ಎಂದು ಹೇಳುತ್ತಾರೆ.

ಯೆರೆಮೀಯನು ಈಗ ಏನು ಮಾಡುವನು? ಅವನು ಭಯಪಡುವುದಿಲ್ಲ! ಅವನು ಅವರೆಲ್ಲರಿಗೆ ಹೇಳುವುದು: ‘ಈ ಮಾತುಗಳನ್ನು ನಿಮಗೆ ಹೇಳುವುದಕ್ಕೆ ಯೆಹೋವನು ನನ್ನನ್ನು ಕಳುಹಿಸಿದ್ದಾನೆ. ನೀವು ದುರ್ಮಾರ್ಗವನ್ನು ಬಿಟ್ಟು ಹಿಂದಿರುಗದೆ ಹೋದಲ್ಲಿ ಯೆಹೋವನು ಯೆರೂಸಲೇಮನ್ನು ನಾಶಮಾಡುವನು. ಒಂದುವೇಳೆ, ನೀವು ನನ್ನನ್ನು ಕೊಂದುಹಾಕುವಲ್ಲಿ ಯಾವ ತಪ್ಪನ್ನೂ ಮಾಡದ ಒಬ್ಬ ವ್ಯಕ್ತಿಯನ್ನು ನೀವು ಕೊಲ್ಲುವವರಾಗುತ್ತೀರಿ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಿ.’

ಸರದಾರರು ಯೆರೆಮೀಯನನ್ನು ಕೊಲ್ಲುವುದಿಲ್ಲ. ಇಸ್ರಾಯೇಲ್ಯರು ತಮ್ಮ ದುರ್ಮಾರ್ಗಗಳನ್ನು ಬಿಡುವುದೇ ಇಲ್ಲ. ತದನಂತರ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಬಂದು ಯೆರೂಸಲೇಮಿನ ವಿರುದ್ಧವಾಗಿ ಯುದ್ಧಮಾಡುತ್ತಾನೆ. ಕೊನೆಗೆ ನೆಬೂಕದ್ನೆಚ್ಚರನು ಇಸ್ರಾಯೇಲ್ಯರನ್ನು ತನ್ನ ದಾಸರನ್ನಾಗಿ ಮಾಡಿಕೊಳ್ಳುತ್ತಾನೆ. ಅವನು ಸಾವಿರಾರು ಮಂದಿಯನ್ನು ಸೆರೆಹಿಡಿದು ಬಾಬೆಲಿಗೆ ಕರೆದುಕೊಂಡು ಹೋಗುತ್ತಾನೆ. ಅಪರಿಚಿತ ಜನರು ನಿಮ್ಮನ್ನು ನಿಮ್ಮ ಮನೆಯಿಂದ ಅಪರಿಚಿತ ದೇಶಕ್ಕೆ ಎಳೆದೊಯ್ದರೆ ಹೇಗಿರುವುದೆಂದು ಸ್ವಲ್ಪ ಯೋಚಿಸಿರಿ!

ಯೆರೆಮೀಯ 1:1-8; 10:1-5; 26:1-16; 2 ಅರಸುಗಳು 24:1-17.

ಅಧ್ಯಯನ ಪ್ರಶ್ನೆಗಳು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ