ಯೆರೆಮೀಯ
2 ಬಾಬೆಲಿಗೆ ಜನ್ರನ್ನ ಕಳಿಸ್ತೀನಿ,
ಗಾಳಿ ಹೊಟ್ಟನ್ನ ತೂರಿ ಬಿಡೋ ತರ ಅವರು ಬಾಬೆಲ್ ದೇಶವನ್ನ ಸೂರೆ ಮಾಡಿ ಖಾಲಿ ಮಾಡ್ತಾರೆ,
ಕಷ್ಟದ ದಿನದಲ್ಲಿ ಅವರು ಎಲ್ಲಾ ಕಡೆಯಿಂದ ಅದ್ರ ಮೇಲೆ ದಾಳಿ ಮಾಡ್ತಾರೆ.+
3 ಬಿಲ್ಲುಗಾರ ತನ್ನ ಬಿಲ್ಲನ್ನ ಬಗ್ಗಿಸದಿರಲಿ.
ಯಾರೂ ಯುದ್ಧಕವಚ ಹಾಕೊಂಡು ನಿಲ್ಲಬೇಡಿ.
ಯುವಕರಿಗೆ ಸ್ವಲ್ಪನೂ ಕನಿಕರ ತೋರಿಸಬೇಡಿ.+
ಸೈನ್ಯವನ್ನೆಲ್ಲ ಪೂರ್ತಿ ನಾಶಮಾಡಿ.
4 ಅವರು ಕಸ್ದೀಯರ ದೇಶದಲ್ಲಿ ಸತ್ತು ಬೀಳ್ತಾರೆ,
ಅವ್ರನ್ನ ಇರಿದು ಬೀದಿಗಳಲ್ಲಿ ಬಿಸಾಕ್ತಾರೆ.+
5 ಯಾಕಂದ್ರೆ ಇಸ್ರಾಯೇಲ್, ಯೆಹೂದವನ್ನ ಅವ್ರ ದೇವರು, ಸೈನ್ಯಗಳ ದೇವರಾದ ಯೆಹೋವ ಕೈಬಿಟ್ಟಿಲ್ಲ, ಅವರು ವಿಧವೆಯರ ತರ ಆಗಿಲ್ಲ.+
ಆದ್ರೆ ಕಸ್ದೀಯರ ದೇಶ ಇಸ್ರಾಯೇಲ್ಯರ ಪವಿತ್ರ ದೇವರ ದೃಷ್ಟಿಯಲ್ಲಿ ತಪ್ಪು ಮಾಡಿದೆ.
ಅದು ಮಾಡಿದ ತಪ್ಪಿಗಾಗಿ ನೀವು ಸಾಯಬೇಡಿ.
ಯಾಕಂದ್ರೆ ಯೆಹೋವ ಅದಕ್ಕೆ ಸೇಡು ತೀರಿಸೋ ಸಮಯ ಇದು.
ಬಾಬೆಲ್ ಮಾಡಿದ್ದಕ್ಕೆ ಸರಿಯಾಗಿ ದೇವರು ಸೇಡು ತೀರಿಸ್ತಾ ಇದ್ದಾನೆ.+
7 ಬಾಬೆಲ್ ಯೆಹೋವನ ಕೈಯಲ್ಲಿ ಚಿನ್ನದ ಲೋಟದ ತರ ಇತ್ತು,
ಭೂಮಿಯಲ್ಲಿ ಇರೋರೆಲ್ಲ ಕುಡಿದು ಅಮಲೇರೋ ತರ ಆ ಪಟ್ಟಣ ಮಾಡಿತ್ತು.
8 ತಟ್ಟಂತ ಬಾಬೆಲ್ ಬಿದ್ದು ಒಡೆದುಹೋಗಿದೆ.+
ಅದಕ್ಕಾಗಿ ಗೋಳಾಡಿ!+
ಅದ್ರ ನೋವನ್ನ ಕಮ್ಮಿ ಮಾಡೋಕೆ ಸುಗಂಧ ತೈಲ ತನ್ನಿ, ಅದ್ರಿಂದ ವಾಸಿ ಆಗಬಹುದು.”
9 “ಬಾಬೆಲನ್ನ ವಾಸಿ ಮಾಡೋಕೆ ಪ್ರಯತ್ನ ಮಾಡಿದ್ವಿ, ಆದ್ರೆ ಆಗಲಿಲ್ಲ.
ಅದನ್ನ ಬಿಟ್ಟು ನಮ್ಮ ನಮ್ಮ ದೇಶಗಳಿಗೆ ಹೋಗೋಣ.+
ಯಾಕಂದ್ರೆ ಅವಳ ಅಪರಾಧಗಳು ಆಕಾಶದಷ್ಟು ಎತ್ರ ಬೆಳೆದಿವೆ,
ಅವು ಮುಗಿಲು ಮುಟ್ಟಿವೆ.+
10 ಯೆಹೋವ ನಮಗೆ ನ್ಯಾಯ ಸಿಗೋ ತರ ಮಾಡಿದ್ದಾನೆ.+
ಬನ್ನಿ, ನಾವು ಹೋಗಿ ನಮ್ಮ ದೇವರಾದ ಯೆಹೋವ ಮಾಡಿದ್ದನ್ನೆಲ್ಲ ಚೀಯೋನಲ್ಲಿ ಹೇಳೋಣ.”+
11 “ಬಾಣಗಳನ್ನ ಉಜ್ಜಿ,+ ವೃತ್ತಾಕಾರದ ಗುರಾಣಿಗಳನ್ನ ತಗೊಳ್ಳಿ.*
ಯೆಹೋವ ಮೇದ್ಯರ ರಾಜರ ಮನಸ್ಸನ್ನ ಪ್ರಚೋದಿಸಿದ್ದಾನೆ,+
ಯಾಕಂದ್ರೆ ಆತನಿಗೆ ಬಾಬೆಲನ್ನ ನಾಶ ಮಾಡಬೇಕನ್ನೋ ಉದ್ದೇಶ ಇದೆ.
ಯೆಹೋವ ಸೇಡು ತೀರಿಸ್ತಿದ್ದಾನೆ, ತನ್ನ ಆಲಯಕ್ಕಾಗಿ ಆತನು ಸೇಡು ತೀರಿಸ್ತಿದ್ದಾನೆ.
12 ಬಾಬೆಲಿನ ಗೋಡೆಗಳನ್ನ ದಾಳಿ ಮಾಡಬೇಕಂತ ಸೂಚಿಸೋಕೆ ಬಾವುಟ*+ ಎತ್ತಿ.
ಕಾವಲುಪಡೆಗಳನ್ನ ಹೆಚ್ಚಿಸಿ, ಕಾವಲುಗಾರರನ್ನ ನಿಲ್ಲಿಸಿ.
ಹೊಂಚುಹಾಕಿ ದಾಳಿ ಮಾಡೋರನ್ನ ಸಿದ್ಧಮಾಡಿಸಿ.
ಯಾಕಂದ್ರೆ ಯೆಹೋವ ಅವ್ರ ಮೇಲೆ ಯುದ್ಧ ಮಾಡ್ತಾನೆ,
ಬಾಬೆಲಿನ ಜನ್ರಿಗೆ ಏನು ಮಾಡ್ತೀನಿ ಅಂತ ಆತನು ಹೇಳಿದ್ದಾನೋ ಅದನ್ನ ಮಾಡ್ತಾನೆ.”+
13 “ನದಿ-ಕಾಲುವೆಗಳ ಮೇಲೆ ವಾಸ ಮಾಡೋ ಸ್ತ್ರೀಯೇ,+
ಬೇಕಾದಷ್ಟು ಸಿರಿಸಂಪತ್ತು ಮಾಡಿದವಳೇ,+
ನಿನಗೆ ಅಂತ್ಯ ಕಾದಿದೆ, ನೀನು ಅನ್ಯಾಯವಾಗಿ ಲಾಭ ಮಾಡ್ತಾ ಇರೋದಕ್ಕೆ ಕೊನೆ ಬಂದಿದೆ.+
14 ಸೈನ್ಯಗಳ ದೇವರಾದ ಯೆಹೋವ ತನ್ನ ಮೇಲೆ ಆಣೆ ಇಟ್ಟು,
‘ಮಿಡತೆಗಳ ಹಾಗೆ ತುಂಬ ಜಾಸ್ತಿ ಜನ್ರು ನಿನ್ನಲ್ಲಿ ತುಂಬೋ ತರ ಮಾಡ್ತೀನಿ,
ಅವರು ನಿನ್ನನ್ನ ಸೋಲಿಸಿ ಗೆದ್ದ ಸಂತೋಷದಿಂದ ಕೂಗ್ತಾರೆ’+ ಅಂತ ಹೇಳಿದ್ದಾನೆ.
15 ಭೂಮಿಯನ್ನ ತನ್ನ ಶಕ್ತಿಯಿಂದ ಸೃಷ್ಟಿ ಮಾಡಿದವನು ಆತನೇ,
ತನ್ನ ವಿವೇಕದಿಂದ ಭೂಗೋಳವನ್ನ* ಅಲುಗಾಡದೆ ನಿಲ್ಲಿಸಿದವನು,+
ತಿಳುವಳಿಕೆಯಿಂದ ಆಕಾಶವನ್ನ ಹರಡಿದವನೂ ಆತನೇ.+
16 ಆತನ ಧ್ವನಿಗೆ ಆಕಾಶದಲ್ಲಿ ಇರೋ ನೀರು ಅಲ್ಲೋಲ ಕಲ್ಲೋಲ ಆಗುತ್ತೆ,
ಆತನು ಭೂಮಿಯ ಮೂಲೆಮೂಲೆಯಿಂದ ಮೋಡಗಳು* ಮೇಲೆ ಬರೋ ಹಾಗೆ ಮಾಡ್ತಾನೆ.
ಮಳೆಗಾಗಿ ಮಿಂಚು* ಬರೋ ಹಾಗೆ ಮಾಡ್ತಾನೆ.
ತನ್ನ ಭಂಡಾರಗಳಿಂದ ಗಾಳಿ ತರ್ತಾನೆ.+
17 ಎಲ್ಲ ಮನುಷ್ಯರೂ ವಿವೇಚನೆ, ಬುದ್ಧಿ ಇಲ್ಲದೆ ನಡೀತಿದ್ದಾರೆ.
ಕೆತ್ತಿದ ಮೂರ್ತಿಗಳನ್ನ ಮಾಡಿದ್ದಕ್ಕಾಗಿ ಲೋಹದ ಕೆಲಸಗಾರರಲ್ಲಿ ಪ್ರತಿಯೊಬ್ಬನಿಗೂ ಅವಮಾನ ಆಗುತ್ತೆ,+
ಯಾಕಂದ್ರೆ ಅವರು ಅಚ್ಚಲ್ಲಿ ಮಾಡಿದ ಲೋಹದ ಮೂರ್ತಿಗಳೆಲ್ಲ ಬರೀ ಮೋಸ,
18 ಆ ಮೂರ್ತಿಗಳಿಂದ ಯಾವ ಪ್ರಯೋಜನನೂ ಇಲ್ಲ,*+ ಜನ್ರು ಅವುಗಳನ್ನ ಗೇಲಿ ಮಾಡ್ತಾರೆ ಅಷ್ಟೇ.
ಅವುಗಳಿಗೆ ಶಿಕ್ಷೆ ಕೊಡೋ ದಿನ ಬಂದಾಗ ಅವು ನಾಶ ಆಗಿಹೋಗುತ್ತೆ.
19 ಆದ್ರೆ ಯಾಕೋಬನ ಪಾಲು ಆಗಿರೋ ದೇವರು ಆ ಮೂರ್ತಿಗಳ ತರ ಅಲ್ಲ,
ಯಾಕಂದ್ರೆ ಪ್ರತಿಯೊಂದನ್ನ ಮಾಡಿದವನು ಆತನೇ,
ಆತನ ಆಸ್ತಿಯ ಕೋಲು ಸಹ ಆತನೇ.+
ಸೈನ್ಯಗಳ ದೇವರಾದ ಯೆಹೋವ ಅನ್ನೋದೇ ಆತನ ಹೆಸ್ರು.”+
20 “ನೀನು ನನ್ನ ಕೈಯಲ್ಲಿರೋ ಯುದ್ಧದ ದಂಡ, ಯುದ್ಧದ ಆಯುಧ,
ನಾನು ನಿನ್ನ ಮೂಲಕ ದೇಶಗಳನ್ನ ಪುಡಿಪುಡಿ ಮಾಡ್ತೀನಿ.
ನಿನ್ನ ಮೂಲಕ ಸಾಮ್ರಾಜ್ಯಗಳನ್ನ ನಾಶಮಾಡ್ತೀನಿ.
21 ನಿನ್ನ ಮೂಲಕ ಕುದುರೆಯನ್ನ ಅದ್ರ ಮೇಲೆ ಸವಾರಿ ಮಾಡೋನನ್ನ ಜಜ್ಜಿ ಹಾಕ್ತೀನಿ.
ನಿನ್ನ ಮೂಲಕ ಯುದ್ಧರಥವನ್ನ ಅದ್ರ ಸವಾರನನ್ನ ಜಜ್ಜಿ ಹಾಕ್ತೀನಿ.
22 ನಿನ್ನ ಮೂಲಕ ನಾನು ಗಂಡಸರನ್ನ ಹೆಂಗಸರನ್ನ ಜಜ್ಜಿ ಹಾಕ್ತೀನಿ.
ನಿನ್ನ ಮೂಲಕ ವಯಸ್ಸಾದವರನ್ನ ಹುಡುಗರನ್ನ ಜಜ್ಜಿ ಹಾಕ್ತೀನಿ.
ನಿನ್ನ ಮೂಲಕ ಯುವಕರನ್ನ ಯುವತಿರನ್ನ ಜಜ್ಜಿ ಹಾಕ್ತೀನಿ.
23 ನಿನ್ನ ಮೂಲಕ ಕುರುಬರನ್ನ ಅವನ ಕುರಿಗಳನ್ನ ಜಜ್ಜಿ ಹಾಕ್ತೀನಿ.
ನಿನ್ನ ಮೂಲಕ ರೈತನನ್ನ ಅವನ ಸಾಕುಪ್ರಾಣಿಗಳನ್ನ ಜಜ್ಜಿ ಹಾಕ್ತೀನಿ.
ನಿನ್ನ ಮೂಲಕ ರಾಜ್ಯಪಾಲರನ್ನ ಉಪಾಧಿಪತಿಗಳನ್ನ ಜಜ್ಜಿ ಹಾಕ್ತೀನಿ.
24 ನಾನು ಬಾಬೆಲಿಗೆ, ಕಸ್ದೀಯದ ಎಲ್ಲ ಜನ್ರಿಗೆ ಸೇಡು ತೀರಿಸ್ತೀನಿ,
ಯಾಕಂದ್ರೆ ಅವರು ಚೀಯೋನಲ್ಲಿ ನಿಮ್ಮ ಕಣ್ಮುಂದೆ ತುಂಬ ಕೆಟ್ಟ ಕೆಲಸಗಳನ್ನ ಮಾಡಿದ್ರು”+ ಅಂತ ಯೆಹೋವ ಹೇಳ್ತಾನೆ.
ಕೈ ಚಾಚಿ ನಿನ್ನನ್ನ ಬಂಡೆಗಳ ಮೇಲಿಂದ ಕೆಳಗೆ ಉರುಳಿಸಿ ಬಿಡ್ತೀನಿ.
ನಿನ್ನನ್ನ ಸುಟ್ಟುಹೋದ ಬೆಟ್ಟವಾಗಿ ಮಾಡ್ತೀನಿ.”
26 ಯೆಹೋವ ಹೇಳೋದು ಏನಂದ್ರೆ
“ಮೂಲೆಗಲ್ಲಿಗಾಗಿ, ಅಡಿಪಾಯಕ್ಕಾಗಿ ಜನ ನಿನ್ನಿಂದ ಕಲ್ಲು ತಗೊಳ್ಳಲ್ಲ,
ಯಾಕಂದ್ರೆ ನೀನು ಶಾಶ್ವತವಾಗಿ ಹಾಳುಬೀಳ್ತೀಯ.+
ದೇಶಗಳ ಮಧ್ಯ ಕೊಂಬೂದಿ.
ಅದ್ರ ವಿರುದ್ಧ ಹೋರಾಡೋಕೆ ದೇಶಗಳನ್ನ ನೇಮಿಸಿ.
ದಾಳಿ ಮಾಡೋಕೆ ಅರರಾಟ್,+ ಮಿನ್ನಿ, ಅಷ್ಕೆನಸ್+ ಸಾಮ್ರಾಜ್ಯಗಳನ್ನ ಕರೆಸಿ.
ಅದ್ರ ಜೊತೆ ಹೋರಾಡೋಕೆ ಸೈನಿಕರನ್ನ ಭರ್ತಿ ಮಾಡಿಸೋ ಅಧಿಕಾರಿಯನ್ನ ಇಡಿ.
ಬಿರುಗೂದಲು ಇರೋ ಮಿಡತೆಗಳ ತರ ಕುದುರೆಗಳು ದಾಳಿ ಮಾಡ್ಲಿ.
28 ಅದ್ರ ಮೇಲೆ ದಾಳಿ ಮಾಡೋಕೆ ದೇಶಗಳನ್ನ,
ಮೇದ್ಯದ+ ರಾಜರನ್ನ, ಅಲ್ಲಿನ ರಾಜ್ಯಪಾಲರನ್ನ, ಅಲ್ಲಿನ ಎಲ್ಲ ಉಪಾಧಿಪತಿಗಳನ್ನ,
ಅವ್ರ ಆಳ್ವಿಕೆ ಕೆಳಗಿರೋ ಎಲ್ಲ ದೇಶಗಳನ್ನ ನೇಮಿಸಿ.
29 ಭೂಮಿ ಕಂಪಿಸುತ್ತೆ, ನಡುಗುತ್ತೆ,
ಯಾಕಂದ್ರೆ ಯೆಹೋವ ಬಾಬೆಲಿಗೆ ಏನು ಮಾಡಬೇಕಂತ ಯೋಚ್ನೆ ಮಾಡಿದ್ದಾನೋ ಅದನ್ನ ಮಾಡೇ ಮಾಡ್ತಾನೆ,
ಆತನು ಬಾಬೆಲ್ ದೇಶಕ್ಕೆ ಎಂಥ ಗತಿ ತರ್ತಾನೆ ಅಂದ್ರೆ ಅದನ್ನ ನೋಡೋರು ಭಯ ಪಡ್ತಾರೆ, ಅಲ್ಲಿ ಒಬ್ರೂ ಇರದ ಹಾಗೆ ಮಾಡ್ತಾನೆ.+
30 ಬಾಬೆಲಿನ ವೀರ ಸೈನಿಕರು ಯುದ್ಧ ಮಾಡೋದನ್ನ ಬಿಟ್ಟುಬಿಟ್ಟಿದ್ದಾರೆ.
ಅವರು ತಮ್ಮ ಭದ್ರಕೋಟೆಗಳಲ್ಲಿ ಕೂತಿದ್ದಾರೆ.
ಅವ್ರ ಬಲವೆಲ್ಲ ಕಮ್ಮಿ ಆಗಿದೆ.+
ಅವರು ಹೆಂಗಸರ ತರ ಆಗಿದ್ದಾರೆ.+
ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ.
ಬಾಗಿಲುಗಳ ಕಂಬಿಗಳನ್ನ ಮುರಿದುಹಾಕಿದ್ದಾರೆ.+
31 ಒಬ್ಬ ವೇಗದೂತ ಇನ್ನೊಬ್ಬ ವೇಗದೂತನನ್ನ ನೋಡೋಕೆ,
ಒಬ್ಬ ಸಂದೇಶವಾಹಕ ಇನ್ನೊಬ್ಬ ಸಂದೇಶವಾಹಕನನ್ನ ನೋಡೋಕೆ ಓಡ್ತಿದ್ದಾನೆ.
ಅವರು ಬಾಬೆಲಿನ ರಾಜನಿಗೆ ‘ಬಾಬೆಲ್ ಪಟ್ಟಣವನ್ನ ಎಲ್ಲ ಕಡೆಯಿಂದ ಶತ್ರುಗಳು ದಾಳಿ ಮಾಡಿದ್ದಾರೆ,+
32 ಹಾಯ್ಗಡಗಳನ್ನ* ವಶ ಮಾಡ್ಕೊಂಡಿದ್ದಾರೆ,+
ಪಪೈರಸ್ ದೋಣಿಗಳನ್ನ ಬೆಂಕಿಯಿಂದ ಸುಟ್ಟಿದ್ದಾರೆ,
ಸೈನಿಕರಿಗೆ ತುಂಬ ಭಯ ಆಗಿದೆ
ಅನ್ನೋ ಸುದ್ದಿ ಹೇಳೋಕೆ ಓಡ್ತಿದ್ದಾರೆ.”
33 ಸೈನ್ಯಗಳ ದೇವರಾದ ಇಸ್ರಾಯೇಲಿನ ದೇವರಾದ ಯೆಹೋವ ಹೇಳೋದು ಏನಂದ್ರೆ
“ಬಾಬೆಲ್ ಕಣದ ತರ ಇದೆ.
ಅದನ್ನ ಚೆನ್ನಾಗಿ ತುಳಿಯೋ ಸಮಯ ಇದೇ.
ತುಂಬ ಬೇಗ ಕೊಯ್ಲಿನ ಕಾಲ ಬರುತ್ತೆ.”
ಅವನು ನನ್ನನ್ನ ಖಾಲಿ ಪಾತ್ರೆ ತರ ಮಾಡಿದ್ದಾನೆ.
ಅವನು ಒಂದು ದೊಡ್ಡ ಹಾವಿನ ತರ ನನ್ನನ್ನ ನುಂಗಿದ್ದಾನೆ,+
ನನ್ನಲ್ಲಿರೋ ಒಳ್ಳೊಳ್ಳೆ ವಸ್ತುಗಳನ್ನ ತಿಂದು ಅವನು ಹೊಟ್ಟೆ ತುಂಬಿಸ್ಕೊಂಡಿದ್ದಾನೆ.
ಅವನು ನನ್ನನ್ನ ತೊಳೆದು ಬಿಸಾಕಿದ್ದಾನೆ.
35 ‘ನನಗೂ ನನ್ನ ದೇಹಕ್ಕೂ ಕೊಟ್ಟ ಹಿಂಸೆನ ಬಾಬೆಲ್ ಸಹ ಅನುಭವಿಸಬೇಕು’ ಅಂತ ಚೀಯೋನಿನ ಜನ ಹೇಳ್ತಾ ಇದ್ದಾರೆ.+
‘ನನ್ನ ರಕ್ತವನ್ನ ಸುರಿಸಿದ ದೋಷ ಕಸ್ದೀಯದ ಜನ್ರ ತಲೆ ಮೇಲೆ ಬರಬೇಕು’ ಅಂತ ಯೆರೂಸಲೇಮ್ ಹೇಳ್ತಿದ್ದಾಳೆ.”
36 ಹಾಗಾಗಿ ಯೆಹೋವ ಹೇಳೋದು ಏನಂದ್ರೆ
“ನಿನ್ನ* ಮೊಕದ್ದಮೆಯಲ್ಲಿ ನಿನ್ನ ಪರ ವಾದಿಸ್ತಾ ಇದ್ದೀನಿ,+
ನಿನಗೋಸ್ಕರ ಸೇಡು ತೀರಿಸ್ತೀನಿ.+
ಅವ್ರ ಸಮುದ್ರವನ್ನ ಒಣಗಿಸ್ತೀನಿ, ಅವ್ರ ಬಾವಿಗಳನ್ನ ಬತ್ತಿಸಿಬಿಡ್ತೀನಿ.+
37 ಬಾಬೆಲ್ ಕಲ್ಲುಗಳ ಗುಡ್ಡೆ ಆಗುತ್ತೆ,+
ಗುಳ್ಳೆನರಿಗಳು ವಾಸ ಮಾಡೋ ಜಾಗ ಆಗುತ್ತೆ,+
ಅದಕ್ಕೆ ಎಂಥ ಗತಿ ಬರುತ್ತೆ ಅಂದ್ರೆ ಅದನ್ನ ನೋಡೋರು ಬೆಚ್ಚಿಬೀಳ್ತಾರೆ,
ಅವರು ಸೀಟಿ ಹೊಡೆದು ಅದನ್ನ ಅವಮಾನ ಮಾಡ್ತಾರೆ, ಅಲ್ಲಿ ಯಾರೂ ವಾಸ ಮಾಡಲ್ಲ.+
38 ಅವ್ರೆಲ್ಲ ಸೇರಿ ಪ್ರಾಯದ ಸಿಂಹಗಳ ತರ ಗರ್ಜಿಸ್ತಾರೆ.
ಅವರು ಸಿಂಹದ ಮರಿಗಳ ತರ ಕೂಗ್ತಾರೆ.”
39 ಯೆಹೋವ ಹೇಳೋದು ಏನಂದ್ರೆ “ಅವ್ರ ಬಯಕೆಯ ಬೆಂಕಿ ಹೊತ್ತಿ ಉರಿದಾಗ ನಾನು ಅವ್ರಿಗಾಗಿ ಭರ್ಜರಿ ಊಟ ಬಡಿಸ್ತೀನಿ, ಅವರು ಕುಡಿದು ಅಮಲೇರೋ ಹಾಗೆ ಮಾಡ್ತೀನಿ,
ಅವರು ಆನಂದದಲ್ಲಿ ತೇಲಾಡ್ಲಿ ಅಂತ ಹೀಗೆಲ್ಲ ಮಾಡ್ತೀನಿ,+
ಆಮೇಲೆ ಅವರು ಶಾಶ್ವತವಾಗಿ ನಿದ್ದೆ ಮಾಡ್ತಾರೆ,
ಯಾವತ್ತೂ ಎದ್ದೇಳಲ್ಲ.+
40 ಕಡಿಯೋಕೆ ಕರ್ಕೊಂಡು ಹೋಗೋ ಕುರಿಮರಿಗಳ ತರ, ಟಗರುಗಳ ತರ, ಆಡುಗಳ ತರ
ಅವ್ರನ್ನ ಕೊಲ್ಲೋಕೆ ಕರ್ಕೊಂಡು ಹೋಗ್ತೀನಿ.”
41 “ಶೇಷಕನ್ನ* ಹೇಗೆ ವಶ ಮಾಡ್ಕೊಂಡಿದ್ದಾರೆ ಅಂತ ನೋಡಿ!+
ಭೂಮಿಯ ಜನ್ರೆಲ್ಲ ಹಾಡಿಹೊಗಳ್ತಿದ್ದ ಪಟ್ಟಣ ಹೇಗೆ ಶತ್ರು ವಶ ಆಗಿದೆ ಅಂತ ನೋಡಿ!+
ಬಾಬೆಲಿಗೆ ಎಂಥ ಗತಿ ಬಂದಿದೆ! ಅದನ್ನ ನೋಡಿದ ದೇಶಗಳಿಗೆಲ್ಲ ಗಾಬರಿ ಆಗ್ತಿದೆ.
42 ಬಾಬೆಲಿನ ಮೇಲೆ ಸಮುದ್ರ ನುಗ್ಗಿ ಬಂದಿದೆ.
ಅದ್ರ ಅಲೆಗಳು ಒಂದರ ಮೇಲೊಂದು ಬಂದು ಮುಚ್ಚಿಬಿಟ್ಟಿವೆ.
43 ಅದ್ರ ಪಟ್ಟಣಗಳಿಗೆ ಎಂಥ ಗತಿ ಬಂದಿದೆ ಅಂದ್ರೆ ನೋಡೋರಿಗೆ ತುಂಬ ಭಯ ಆಗ್ತಿದೆ.
ಅವು ನೀರಿಲ್ಲದ ಪ್ರದೇಶ ಆಗಿಬಿಟ್ಟಿದೆ, ಮರುಭೂಮಿ ಆಗಿದೆ.
ಅವು ಯಾರೂ ವಾಸ ಮಾಡದ, ಯಾರೂ ದಾಟಿ ಹೋಗದ ಜಾಗ ಆಗುತ್ತೆ.+
ಅವನ ಕಡೆಗೆ ಪ್ರವಾಹದ ಹಾಗೆ ಹರಿದು ಬರ್ತಿದ್ದ ದೇಶಗಳು ಇನ್ಮುಂದೆ ಬರಲ್ಲ.
ಬಾಬೆಲಿನ ಗೋಡೆ ಬಿದ್ದುಹೋಗುತ್ತೆ.+
45 ನನ್ನ ಜನ್ರೇ, ಅದನ್ನ ಬಿಟ್ಟು ಹೊರಗೆ ಬನ್ನಿ!+
ಯೆಹೋವನ ಕೋಪದಿಂದ+ ತಪ್ಪಿಸ್ಕೊಂಡು ನಿಮ್ಮ ಜೀವ ಉಳಿಸ್ಕೊಳ್ಳಿ!+
46 ದೇಶದಲ್ಲಿ ನಿಮಗೆ ಒಂದು ಸುದ್ದಿ ಸಿಗುತ್ತೆ, ಅದನ್ನ ಕೇಳಿ ಅಂಜಬೇಡಿ, ಹೆದ್ರಬೇಡಿ.
ಇನ್ನು ಒಂದು ವರ್ಷದಲ್ಲಿ ಆ ಸುದ್ದಿ ಬರುತ್ತೆ,
ಮುಂದಿನ ವರ್ಷ ಇನ್ನೊಂದು ಸುದ್ದಿ ಬರುತ್ತೆ,
‘ದೇಶದಲ್ಲಿ ಹಿಂಸಾಚಾರ ನಡಿತಿದೆ, ಒಬ್ಬ ಅಧಿಕಾರಿ ಇನ್ನೊಬ್ಬ ಅಧಿಕಾರಿ ವಿರುದ್ಧ ಹೋರಾಡ್ತಾ ಇದ್ದಾನೆ’ ಅನ್ನೋದೇ ಆ ಸುದ್ದಿ.
47 ಹಾಗಾಗಿ ನೋಡಿ! ಬಾಬೆಲಿನ ಕೆತ್ತಿದ ಮೂರ್ತಿಗಳಿಗೆ ಶಿಕ್ಷೆ ಕೊಡೋ ದಿನ ಬರುತ್ತೆ.
ಆಗ ಆ ಇಡೀ ದೇಶಕ್ಕೆ ಅವಮಾನ ಆಗುತ್ತೆ.
ಅದ್ರ ಜನ್ರೆಲ್ಲ ಅಲ್ಲೇ ಸತ್ತು ಬೀಳ್ತಾರೆ.+
48 ಬಾಬೆಲನ್ನ ಪೂರ್ತಿ ನಾಶ ಮಾಡೋರು ಉತ್ತರದಿಂದ ಬರ್ತಾರೆ,+
ಆ ಪಟ್ಟಣ ನಾಶ ಆಗೋದನ್ನ ನೋಡಿ ಸ್ವರ್ಗ, ಭೂಮಿ, ಅವುಗಳಲ್ಲಿ ಇರೋದೆಲ್ಲ ಖುಷಿಯಿಂದ ಕೂಗ್ತಾರೆ”+ ಅಂತ ಯೆಹೋವ ಹೇಳ್ತಾನೆ.
49 “ಇಸ್ರಾಯೇಲನ್ನ ಬಾಬೆಲ್ ಕೊಂದಿದ್ದು ಮಾತ್ರ ಅಲ್ಲ,+
ಇಡೀ ಭೂಮಿಯ ಜನ್ರು ಬಾಬೆಲಲ್ಲಿ ಸತ್ತು ಬೀಳೋ ಹಾಗೆ ಅದು ಮಾಡಿದೆ.
50 ಕತ್ತಿಯಿಂದ ತಪ್ಪಿಸ್ಕೊಂಡವರೇ, ಎಲ್ಲೂ ನಿಲ್ಲಬೇಡಿ, ಹೋಗ್ತಾ ಇರಿ!+
ದೂರದಲ್ಲಿ ಇರೋರೇ, ಯೆಹೋವನನ್ನ ನೆನಪಿಸ್ಕೊಳ್ಳಿ,
ನೀವು ಯೆರೂಸಲೇಮ್ ಬಗ್ಗೆ ಯೋಚಿಸಿ.”+
51 “ನಮ್ಮನ್ನ ಅವಮಾನ ಮಾಡಿದ್ದಾರೆ, ಯಾಕಂದ್ರೆ ಹಂಗಿಸಿ ಮಾತಾಡಿದ್ದಾರೆ.
52 ಯೆಹೋವ ಹೇಳೋದು ಏನಂದ್ರೆ “ಹಾಗಾಗಿ ನೋಡಿ! ಅಲ್ಲಿರೋ ಕೆತ್ತಿದ ಮೂರ್ತಿಗಳಿಗೆ ಶಿಕ್ಷೆ ಕೊಡೋ ದಿನ ಬರುತ್ತೆ.
ಆಗ ಆ ದೇಶದಲ್ಲೆಲ್ಲ ಗಾಯ ಆಗಿರೋರು ನರಳ್ತಾರೆ.”+
53 “ಬಾಬೆಲ್ ಆಕಾಶಕ್ಕೆ ಏರಿ ಹೋದ್ರೂ+
ಅದು ದೊಡ್ಡದೊಡ್ಡ ಭದ್ರಕೋಟೆಗಳನ್ನ ತುಂಬ ಭದ್ರಪಡಿಸಿದ್ರೂ
ಅದನ್ನ ನಾಶ ಮಾಡೋರನ್ನ ನಾನು ಕಳಿಸೇ ಕಳಿಸ್ತೀನಿ”+ ಅಂತ ಯೆಹೋವ ಹೇಳ್ತಾನೆ.
54 “ಕೇಳಿಸ್ಕೊಳ್ಳಿ! ಬಾಬೆಲಿಂದ ಜೋರಾಗಿ ಕೂಗಾಡೋ ಸದ್ದು ಕೇಳಿಸುತ್ತೆ,+
ಕಸ್ದೀಯರ ದೇಶದಿಂದ ದೊಡ್ಡ ಕಷ್ಟ ಬರೋ ಸದ್ದು ಕೇಳಿಸ್ತಿದೆ,+
55 ಯಾಕಂದ್ರೆ ಯೆಹೋವ ಬಾಬೆಲನ್ನ ನಾಶ ಮಾಡ್ತಾ ಇದ್ದಾನೆ,
ಅದ್ರ ಜೋರಾದ ಸದ್ದನ್ನ ಆತನು ಅಡಗಿಸ್ತಾನೆ,
ಅದನ್ನ ದಾಳಿ ಮಾಡೋರ ಶಬ್ದ ಸಮುದ್ರದ ಅಲೆಗಳ ಆರ್ಭಟದ ಹಾಗಿರುತ್ತೆ.
ಅವ್ರ ಅಬ್ಬರ ಜಾಸ್ತಿ ಜಾಸ್ತಿ ಆಗುತ್ತೆ.
56 ನಾಶ ಮಾಡೋನು ಬಾಬೆಲಿನ ಮೇಲೆ ದಾಳಿ ಮಾಡ್ತಾನೆ,+
ಅವ್ರ ವೀರ ಸೈನಿಕರು ಕೈದಿಗಳಾಗ್ತಾರೆ,+
ಅವ್ರ ಬಿಲ್ಲುಗಳು ನುಚ್ಚುನೂರಾಗುತ್ತೆ,
ಯಾಕಂದ್ರೆ ಯೆಹೋವ ಸೇಡು ತೀರಿಸೋ ದೇವರು.+
ಆತನು ಸೇಡು ತೀರಿಸದೆ ಬಿಡಲ್ಲ.+
57 ಅದ್ರ ಅಧಿಕಾರಿಗಳು, ವಿವೇಕಿಗಳು,
ರಾಜ್ಯಪಾಲರು, ಉಪಾಧಿಪತಿಗಳು, ವೀರ ಸೈನಿಕರು
ಕುಡಿದು ಮತ್ತರಾಗೋ ತರ ಮಾಡ್ತೀನಿ,+
ಆಮೇಲೆ ಅವರು ಶಾಶ್ವತವಾಗಿ ನಿದ್ದೆ ಮಾಡ್ತಾರೆ,
ಮತ್ತೆ ಏಳೋದೇ ಇಲ್ಲ”+ ಅಂತ ಸೈನ್ಯಗಳ ದೇವರಾದ ಯೆಹೋವ ಅನ್ನೋ ಹೆಸ್ರಿರೋ ರಾಜ ಹೇಳ್ತಾನೆ.
58 ಸೈನ್ಯಗಳ ದೇವರಾದ ಯೆಹೋವ ಹೇಳೋದು ಏನಂದ್ರೆ
“ಬಾಬೆಲಿನ ಗೋಡೆ ತುಂಬ ದಪ್ಪವಾಗಿದ್ರೂ ನೆಲಸಮ ಆಗುತ್ತೆ,+
ಬಾಗಿಲುಗಳು ದೊಡ್ಡದಾಗಿದ್ರೂ ಅದಕ್ಕೆ ಬೆಂಕಿ ಹಚ್ತಾರೆ.
ದೇಶಗಳು ಪಡೋ ಪರಿಶ್ರಮವೆಲ್ಲ ವ್ಯರ್ಥ ಆಗುತ್ತೆ,
ಅವರು ಬೆವರು ಸುರಿಸಿ ದುಡಿಯೋದೆಲ್ಲ ಬೆಂಕಿಗೆ ಬೂದಿ ಆಗುತ್ತೆ.”+
59 ಯೆಹೂದದ ರಾಜ ಚಿದ್ಕೀಯ ತನ್ನ ಆಳ್ವಿಕೆಯ ನಾಲ್ಕನೇ ವರ್ಷದಲ್ಲಿ ಬಾಬೆಲಿಗೆ ಹೋದಾಗ ಅವನ ಜೊತೆ ಸೆರಾಯ ಹೋದ. ಸೆರಾಯ ನೇರೀಯನ+ ಮಗ ಮಹ್ಸೇಯನ ಮೊಮ್ಮಗ ಆಗಿದ್ದ. ಅವನು ರಾಜನ ವಸ್ತುಗಳನ್ನ ನೋಡ್ಕೊಳ್ತಿದ್ದ. ಅವನು ಬಾಬೆಲಿಗೆ ಹೋಗುವಾಗ ಪ್ರವಾದಿ ಯೆರೆಮೀಯ ಒಂದು ಆಜ್ಞೆ ಕೊಟ್ಟ. 60 ಬಾಬೆಲಿನ ನಾಶದ ಬಗ್ಗೆ ಬರೆದಿದ್ದ ಈ ಎಲ್ಲ ಮಾತನ್ನ ಯೆರೆಮೀಯ ಒಂದು ಪುಸ್ತಕದಲ್ಲಿ ಬರೆದ. ಬಾಬೆಲ್ ಮೇಲೆ ಬರೋ ಎಲ್ಲ ಕಷ್ಟಗಳ ಬಗ್ಗೆ ಅದ್ರಲ್ಲಿ ಬರೆದ. 61 ಅಷ್ಟೇ ಅಲ್ಲ ಯೆರೆಮೀಯ ಸೆರಾಯನಿಗೆ ಹೀಗೆ ಹೇಳಿದ “ನೀನು ಬಾಬೆಲಿಗೆ ಹೋಗಿ ಅದನ್ನ ನೋಡಿದಾಗ ಈ ಎಲ್ಲ ಮಾತನ್ನ ಜೋರಾಗಿ ಓದಬೇಕು. 62 ಆಮೇಲೆ ನೀನು ‘ಯೆಹೋವ ಈ ಜಾಗ ನಾಶ ಆಗುತ್ತೆ, ಅಲ್ಲಿ ಯಾರೂ ವಾಸ ಇರಲ್ಲ, ಇಲ್ಲಿ ಒಬ್ಬ ಮನುಷ್ಯನಾಗಲಿ, ಒಂದು ಸಾಕುಪ್ರಾಣಿ ಆಗ್ಲಿ ಇರಲ್ಲ. ಈ ಜಾಗ ಸದಾಕಾಲ ಹಾಳು ಬಿದ್ದಿರುತ್ತೆ ಅಂತ ನೀನು ಹೇಳಿದ್ಯಲ್ಲಾ’+ ಅಂತೇಳು. 63 ನೀನು ಈ ಪುಸ್ತಕವನ್ನ ಓದಿ ಮುಗಿಸಿದ ಮೇಲೆ ಅದಕ್ಕೆ ಒಂದು ಕಲ್ಲನ್ನ ಕಟ್ಟಿ ಯೂಫ್ರೆಟಿಸ್ ನದಿ ಮಧ್ಯ ಅದನ್ನ ಬಿಸಾಕು. 64 ಆಮೇಲೆ ನೀನು ‘ಇದೇ ರೀತಿ ಬಾಬೆಲ್ ಸಹ ಮುಳುಗುತ್ತೆ. ಅದು ಯಾವತ್ತೂ ಮೇಲೆ ಬರಲ್ಲ.+ ಯಾಕಂದ್ರೆ ದೇವರು ಅದ್ರ ಮೇಲೆ ಕಷ್ಟ ತರ್ತಾನೆ. ಬಾಬೆಲಿನ ಜನ್ರು ಸುಸ್ತಾಗಿ ಹೋಗ್ತಾರೆ’ ಅಂತೇಳು.”+
ಇಲ್ಲಿಗೆ ಯೆರೆಮೀಯನ ಮಾತುಗಳು ಮುಗೀತು.