ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಸ್ವಾಗತ.
ಇದು ಯೆಹೋವನ ಸಾಕ್ಷಿಗಳು ಬೇರೆಬೇರೆ ಭಾಷೆಯಲ್ಲಿ ತಯಾರಿಸಿರುವ ಪ್ರಕಾಶನಗಳ ಸಂಶೋಧನಾ ಸಾಧನ.
ಪ್ರಕಾಶನಗಳನ್ನು ಡೌನ್‌ಲೋಡ್‌ ಮಾಡಲು ದಯವಿಟ್ಟು jw.orgಗೆ ಭೇಟಿ ಮಾಡಿ.
ಪ್ರಕಟಣೆ
ಹೊಸ ಭಾಷೆ ಲಭ್ಯ: Mbum
  • ಇಂದು

ಬುಧವಾರ, ಜುಲೈ 30

ನಾವಂತೂ ನೋಡಿದ್ದನ್ನ, ಕೇಳಿದ್ದನ್ನ ಮಾತಾಡದೆ ಇರಲ್ಲ ಅಂದ್ರು.—ಅ. ಕಾ. 4:20.

ಸಿಹಿಸುದ್ದಿ ಸಾರಬಾರದು ಅಂತ ಸರ್ಕಾರ ಹೇಳಿದ್ರೂ ನಾವು ಯೇಸುವಿನ ಶಿಷ್ಯರ ತರ ಸಾರುತ್ತಾ ಇರ್ತೀವಿ. ಯೆಹೋವ ನಮಗೆ ಸಹಾಯ ಮಾಡೇ ಮಾಡ್ತಾನೆ ಅಂತ ನಾವು ನಂಬಬೇಕು. ಧೈರ್ಯ, ವಿವೇಕ ಕೊಡಪ್ಪಾ ಅಂತ ಬೇಡ್ಕೊಬೇಕು. ಅಷ್ಟೇ ಅಲ್ಲ, ಕಷ್ಟಗಳನ್ನ ನಿಭಾಯಿಸೋಕೆ ಯೆಹೋವನ ಹತ್ರ ಸಹಾಯ ಕೇಳಬೇಕು. ನಮಗೆ ಯಾವೆಲ್ಲ ಕಷ್ಟಗಳು ಬರಬಹುದು? ನಮ್ಮ ಆರೋಗ್ಯ ಹಾಳಾಗಬಹುದು, ಬೇಜಾರಲ್ಲಿ ಮುಳುಗಿ ಹೋಗಬಹುದು, ನಮ್ಮವರು ಯಾರಾದ್ರೂ ತೀರಿಹೋಗಬಹುದು, ಕುಟುಂಬದಲ್ಲಿ ಏನಾದ್ರೂ ಸಮಸ್ಯೆ ಬರಬಹುದು ಅಥವಾ ಹಿಂಸೆ ಬರಬಹುದು. ಈ ತರ ಸಮಸ್ಯೆಗಳು ಬಂದಾಗ ಜೀವನ ಮಾಡೋಕೆ ತುಂಬ ಕಷ್ಟ ಆಗುತ್ತೆ. ಇದ್ರ ಜೊತೆಗೆ ನಾವಿರೋ ಜಾಗದಲ್ಲಿ ಅಂಟುರೋಗ ಇದ್ರೆ ಅಥವಾ ಯುದ್ಧ ನಡೀತಾ ಇದ್ರೆ ಜೀವನ ಮಾಡೋಕೆ ಇನ್ನೂ ಕಷ್ಟ ಆಗುತ್ತೆ. ಇಂಥ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ನಾವು ಯೆಹೋವನ ಹತ್ರ ಎಲ್ಲಾ ಹೇಳ್ಕೊಬೇಕು. ಒಬ್ಬ ಸ್ನೇಹಿತನ ಹತ್ರ ಮನಸ್ಸುಬಿಚ್ಚಿ ಮಾತಾಡೋ ತರ ಮಾತಾಡಬೇಕು. ಆಗ ಯೆಹೋವನೇ ನಮ್ಮ “ಪರವಾಗಿ ಹೆಜ್ಜೆ ತಗೊತಾನೆ.” (ಕೀರ್ತ. 37:3, 5) ನಾವು ಪಟ್ಟುಬಿಡದೆ ಪ್ರಾರ್ಥನೆ ಮಾಡಿದ್ರೆ ‘ಕಷ್ಟಗಳನ್ನ ಸಹಿಸ್ಕೊಳ್ಳೋಕೆ ಆಗುತ್ತೆ.’ (ರೋಮ. 12:12) ನಾವು ಯಾವ ಕಷ್ಟದಲ್ಲಿ ಇದ್ದೀವಿ ಅಂತ ಯೆಹೋವನಿಗೆ ಗೊತ್ತು. ‘ಸಹಾಯಕ್ಕಾಗಿ ನಾವಿಡೋ ಮೊರೆಯನ್ನ ಆತನು ಕೇಳಿಸ್ಕೊಳ್ತಾನೆ.’—ಕೀರ್ತ. 145:18, 19. w23.05 5-6 ¶12-15

ದಿನದ ವಚನ ಓದಿ ಚರ್ಚಿಸೋಣ—2025

ಗುರುವಾರ, ಜುಲೈ 31

ದೇವರಿಗೆ ಏನು ಇಷ್ಟ ಅಂತ ಯಾವಾಗ್ಲೂ ಪರೀಕ್ಷೆ ಮಾಡಿ ತಿಳ್ಕೊಳ್ಳಿ.—ಎಫೆ. 5:10.

ನಾವು ಒಂದು ಮುಖ್ಯವಾದ ತೀರ್ಮಾನ ತಗೊಳ್ಳೋ ಮುಂಚೆ ಏನು ಮಾಡಬೇಕು? “ಯೆಹೋವನ ಇಷ್ಟ ಏನಂತ” ಅರ್ಥ ಮಾಡ್ಕೊಂಡು ಅದಕ್ಕೆ ತಕ್ಕ ಹಾಗೆ ನಡ್ಕೊಬೇಕು. (ಎಫೆ. 5:17) ನಮ್ಮ ಸನ್ನಿವೇಶಕ್ಕೆ ಯಾವ ಬೈಬಲ್‌ ತತ್ವ ಪಾಲಿಸಬೇಕು ಅಂತ ಕಂಡುಹಿಡಿದ್ರೆ ಯೆಹೋವ ದೇವರ ತರ ಯೋಚಿಸೋಕೆ ಪ್ರಯತ್ನ ಮಾಡ್ತಿದ್ದೀವಿ ಅಂತ ತೋರಿಸೋಕಾಗುತ್ತೆ. ಆಮೇಲೆ ಆ ತತ್ವ ಪಾಲಿಸಿದ್ರೆ ಒಳ್ಳೇ ತೀರ್ಮಾನ ಮಾಡೋಕಾಗುತ್ತೆ. ಯಾಕಂದ್ರೆ ನಮ್ಮ ವೈರಿಯಾದ “ಸೈತಾನ” ನಾವು ಈ ಲೋಕದ ವಿಷ್ಯಗಳಲ್ಲೇ ಮುಳುಗಿಹೋಗೋ ತರ ಮಾಡ್ತಾನೆ. ಆಗ ಯೆಹೋವನ ಸೇವೆ ಮಾಡೋಕೆ ನಮಗೆ ಟೈಮೇ ಇಲ್ಲ ಅಂತ ಅನಿಸಿಬಿಡುತ್ತೆ. (1 ಯೋಹಾ. 5:19) ಒಂದುವೇಳೆ ನಮಗೆ ಹೀಗೆ ಅನಿಸಿದ್ರೆ ಯೆಹೋವನ ಸೇವೆ ಮಾಡೋದಕ್ಕಿಂತ ಹಣ, ಆಸ್ತಿ-ಪಾಸ್ತಿ, ಕೆಲಸ, ಶಿಕ್ಷಣ ಇದನ್ನ ಮಾಡೋದೇ ನಮ್ಮ ಜೀವನದಲ್ಲಿ ಮುಖ್ಯ ಆಗಿಬಿಡುತ್ತೆ. ಇದೆಲ್ಲ ನಮ್ಮ ಜೀವನಕ್ಕೆ ಬೇಕು ನಿಜ, ಆದ್ರೆ ಅದು ಯೆಹೋವನ ಸೇವೆಗಿಂತ ಮುಖ್ಯ ಆಗಬಾರದು. ಒಂದುವೇಳೆ ನಾವು ಹೀಗೇನಾದ್ರೂ ಮಾಡಿದ್ರೆ ನಾವೂ ಲೋಕದ ಜನ್ರ ತರ ಯೋಚ್ನೆ ಮಾಡ್ತಿದ್ದೀವಿ ಅಂತ ಅರ್ಥ. w24.03 24 ¶16-17

ದಿನದ ವಚನ ಓದಿ ಚರ್ಚಿಸೋಣ—2025

ಶುಕ್ರವಾರ, ಆಗಸ್ಟ್‌ 1

ನೀತಿವಂತನಿಗೆ ಒಂದಲ್ಲ ಎರಡಲ್ಲ ನೂರಾರು ಕಷ್ಟಸಂಕಟಗಳು, ಆದ್ರೆ ಯೆಹೋವ ಅವುಗಳಿಂದ ಅವನನ್ನ ಬಿಡಿಸ್ತಾನೆ.—ಕೀರ್ತ. 34:19.

ಈ ಮೇಲಿನ ಕೀರ್ತನೆಯಲ್ಲಿ 2 ವಿಷ್ಯಗಳಿದೆ. (1) ನೀತಿವಂತರಿಗೂ ಕಷ್ಟಗಳು ಬಂದೇ ಬರುತ್ತೆ. (2) ಆ ಕಷ್ಟಗಳಿಂದ ಯೆಹೋವ ದೇವರು ನಮ್ಮನ್ನ ಬಿಡಿಸ್ತಾನೆ. ಆದ್ರೆ, ಯೆಹೋವ ಯಾವ ಅರ್ಥದಲ್ಲಿ ನಮ್ಮನ್ನ ಬಿಡಿಸ್ತಾನೆ? ಈ ಲೋಕದಲ್ಲಿ ನಮಗೆ ಕಷ್ಟಗಳು ಇದ್ದಿದ್ದೇ ಅಂತ ಮೊದಲು ನಮಗೆ ಅರ್ಥ ಮಾಡಿಸ್ತಾನೆ. ಅಂದ್ರೆ ನಮಗೆ ಕಷ್ಟಗಳು ಬರದೇ ಇರೋ ತರ ಮಾಡ್ತೀನಿ ಅಂತ ಯೆಹೋವ ಮಾತು ಕೊಟ್ಟಿಲ್ಲ. ಆದ್ರೆ, ಎಷ್ಟೇ ಕಷ್ಟಗಳಿದ್ರೂ ಆತನ ಸೇವೆ ಮಾಡ್ತಾ ಖುಷಿಯಾಗಿರೋ ತರ ನೋಡ್ಕೊಳ್ತಾನೆ. (ಯೆಶಾ. 66:14) ಜೊತೆಗೆ ಮುಂದೆ ಹೊಸ ಲೋಕದಲ್ಲಿ ಕಷ್ಟಗಳೇ ಇರಲ್ಲ ಅನ್ನೋದನ್ನ ಮನಸ್ಸಲ್ಲಿ ಇಡೋಕೆ ಹೇಳ್ತಿದ್ದಾನೆ. (2 ಕೊರಿಂ. 4:16-18) ಆದ್ರೆ ಅಲ್ಲಿ ತನಕ ಒಂದೊಂದು ದಿನಾನೂ ನಾವು ಆತನ ಸೇವೆ ಮಾಡ್ತಾ ಖುಷಿಯಾಗಿರೋಕೆ ಸಹಾಯ ಮಾಡ್ತಾನೆ. (ಪ್ರಲಾ. 3:22-24) ಹಿಂದಿನ ಕಾಲದಲ್ಲಿದ್ದ ಮತ್ತು ಈಗಿರೋ ಯೆಹೋವನ ಸೇವಕರ ಉದಾಹರಣೆಗಳಿಂದ ನಾವು ಏನು ಕಲಿಬಹುದು? ಅವ್ರ ತರಾನೇ ನಮ್ಮ ಜೀವನದಲ್ಲೂ ದಿಢೀರಂತ ಕಷ್ಟಗಳು ಬಂದುಬಿಡಬಹುದು. ಆಗ ನಾವು ಯೆಹೋವನನ್ನ ನಂಬಿದ್ರೆ ಆತನು ನಮಗೆ ಖಂಡಿತ ಸಹಾಯ ಮಾಡ್ತಾನೆ ಅಂತ ಅವ್ರ ಉದಾಹರಣೆಗಳಿಂದ ಗೊತ್ತಾಗುತ್ತೆ.—ಕೀರ್ತ. 55:22. w23.04 14-15 ¶3-4

ದಿನದ ವಚನ ಓದಿ ಚರ್ಚಿಸೋಣ—2025
ಸ್ವಾಗತ.
ಇದು ಯೆಹೋವನ ಸಾಕ್ಷಿಗಳು ಬೇರೆಬೇರೆ ಭಾಷೆಯಲ್ಲಿ ತಯಾರಿಸಿರುವ ಪ್ರಕಾಶನಗಳ ಸಂಶೋಧನಾ ಸಾಧನ.
ಪ್ರಕಾಶನಗಳನ್ನು ಡೌನ್‌ಲೋಡ್‌ ಮಾಡಲು ದಯವಿಟ್ಟು jw.orgಗೆ ಭೇಟಿ ಮಾಡಿ.
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ