ಬೈಬಲಿನಲ್ಲಿರುವ ರತ್ನಗಳು | ಯೆಶಾಯ 29–33
“ಒಬ್ಬ ರಾಜನು ನೀತಿಗನುಸಾರವಾಗಿ ಆಳುವನು”
ರಾಜನಾದ ಯೇಸು, ಮಂದೆಯ ಆರೈಕೆ ಮಾಡುವ “ಅಧಿಪತಿಗಳು” ಅಥವಾ ಹಿರಿಯರನ್ನು ದಯಪಾಲಿಸಿದ್ದಾನೆ
‘ಅತಿವೃಷ್ಟಿಯಲ್ಲಿ ಅಥವಾ ಚಂಡಮಾರುತದಲ್ಲಿ ಆವರಣದ ಹಾಗೆ’ ಅವರು ತಮ್ಮ ಮಂದೆಯನ್ನು ಹಿಂಸೆ ಮತ್ತು ನಿರಾಶೆಯಂತಹ ಚಂಡಮಾರುತಗಳಿಂದ ರಕ್ಷಿಸಲು ಕೆಲಸಮಾಡುತ್ತಾರೆ
‘ಮರುಭೂಮಿಯಲ್ಲಿ ನೀರಿನ ಕಾಲಿವೆಗಳಂತೆ’ ಅವರು ಆಧ್ಯಾತ್ಮಿಕವಾಗಿ ಬಾಯಾರಿದವರಿಗೆ ಕಲುಷಿತವಾಗಿಲ್ಲದ ಶುದ್ಧ ಸತ್ಯವನ್ನು ಕೊಟ್ಟು ಚೈತನ್ಯಗೊಳಿಸುತ್ತಾರೆ
‘ಬೆಂಗಾಡಿನಲ್ಲಿ ದೊಡ್ಡ ಬಂಡೆಯ ನೆರಳಿನೋಪಾದಿ’ ಅವರು ಆಧ್ಯಾತ್ಮಿಕ ಮಾರ್ಗದರ್ಶನ ಮತ್ತು ಚೈತನ್ಯವನ್ನು ಒದಗಿಸುವ ಮೂಲಕ ಹಿಂಡಿಗೆ ಉಪಶಮನವನ್ನು ನೀಡುತ್ತಾರೆ